ಮಲೇಷಿಯಾ ಮರಳು ಮಾರಾಟ ನಾಳೆಯಿಂದ 


Team Udayavani, Jan 21, 2018, 6:15 AM IST

MSIL-sand.jpg

ಬೆಂಗಳೂರು: ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ ದೇಶದಲ್ಲೇ ಮೊದಲ ಬಾರಿಗೆ ವಿದೇಶಿ ಮರಳು ಆಮದು ಮಾಡಿಕೊಂಡು ಬ್ರಾಂಡ್‌ ಸೃಷ್ಟಿಸಿ ಮಾರಾಟಕ್ಕೆ ಮುಂದಾಗಿದ್ದು, ಬೆಂಗಳೂರು ಸಮೀಪದ ಬಿಡದಿಯಲ್ಲಿ ಸಂಸ್ಥೆಯ ಯಾರ್ಡ್‌ನಲ್ಲಿ ಸೋಮವಾರದಿಂದ ನೈಸರ್ಗಿಕ ನದಿ ಮರಳಿನ ಮೂಟೆ ಮಾರಾಟ ಆರಂಭವಾಗಲಿದೆ.

ಮಲೇಷಿಯಾದಿಂದ ಆಮದು ಮಾಡಿಕೊಂಡಿರುವ ನೈಸರ್ಗಿಕ ನದಿ ಮರಳಿನ 50 ಕೆ.ಜಿ.ಚೀಲದ ಬೆಲೆ ಬೆಂಗಳೂರಿನಲ್ಲಿ 200 ರೂ.ಇದೆ. ಜಿಎಸ್‌ಟಿ, ಗಣಿ ಇಲಾಖೆಗೆ ಪಾವತಿಸುವ ಶುಲ್ಕ ಹಾಗೂ ಆಮದು ಸುಂಕ ಸೇರಿ ಪ್ರತಿ ಟನ್‌ಗೆ 4000 ರೂ.ನಿಗದಿ ಪಡಿಸಿದೆ. ಅಂತರಕ್ಕೆ ಅನುಗುಣವಾಗಿ 100-200 ರೂ. ಏರಿಳಿತವಾಗಲಿದೆ. ಜನವರಿ ಕೊನೆಯ ವಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ನಂತರ ಕೆ.ಆರ್‌.ಪುರದ ಚನ್ನಸಂದ್ರದಲ್ಲಿ ಮರಳು ಮೂಟೆ ಮಾರಾಟ ಆರಂಭಿಸಲು ಎಂಎಸ್‌ಐಎಲ್‌ ಸಿದಟಛಿತೆ ನಡೆಸಿದೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ಪ್ರಕಾಶ್‌, ರಾಜ್ಯದಲ್ಲಿ ಮರಳಿನ ಕೊರತೆಯಿಂದಾಗಿ ಮರಳು ಮಾರಾಟ ದಂಧೆ ಶುರುವಾಗಿತ್ತು. ಹಲವೆಡೆ ಜಿಲ್ಲಾಧಿಕಾರಿಗಳು,
ಉಪವಿಭಾಗಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ಕೂಡ ನಡೆದಿತ್ತು. ಆ ಹಿನ್ನೆಲೆಯಲ್ಲಿ ಜನರಿಗೆ ನೈಸರ್ಗಿಕ ನದಿ ಮರಳನ್ನು ನೇರವಾಗಿ ಪೂರೈಸುವ ಕಾರ್ಯಕ್ಕೆ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.

ಮಲೇಷಿಯಾದಿಂದ ಆಂಧ್ರ ಪ್ರದೇಶದ ಕೃಷ್ಣಪಟ್ಟಣಂಗೆ ಹಡಗಿನಲ್ಲಿ ಮರಳು ಪೂರೈಕೆಯಾಗಲಿದೆ. ನಂತರ ಅಲ್ಲೇ ಚೀಲದಲ್ಲಿ ಭರ್ತಿಯಾಗಿ ರೈಲಿನಲ್ಲಿ ಬೆಂಗಳೂರು ಸೇರಿ ಇತರೆಡೆಗೆ ಪೂರೈಕೆಯಾಗಲಿದೆ. ಮಲೇಷಿಯಾದಿಂದ ಕೃಷ್ಣಪಟ್ಟಣಂಗೆ ಬರುವ ಒಂದು ಟನ್‌ ಮರಳಿಗೆ 2,300 ರೂ. ತಗಲುತ್ತದೆ. ಬಳಿಕ ಅಲ್ಲೇ ಚೀಲಕ್ಕೆ ಭರ್ತಿಯಾಗಲಿದೆ. ನಂತರ ರೈಲಿನಲ್ಲಿ ಬೆಂಗಳೂರಿಗೆ ಸಾಗಿಸಲು ಟನ್‌ಗೆ 1,100 ರೂ. ವೆಚ್ಚವಾಗಲಿದೆ. ಶೇ.5ರಷ್ಟು ಜಿಎಸ್‌ಟಿ ಪಾವತಿಸಲಾಗುತ್ತದೆ. ಜತೆಗೆ ಗಣಿ ಇಲಾಖೆಗೆ ಪ್ರತಿ ಟನ್‌ಗೆ 60 ರೂ. ಪಾವತಿಸಲಾಗುತ್ತದೆ. 100ರಿಂದ 150 ರೂ.ಲಾಭವಿಟ್ಟುಕೊಂಡು ಒಟ್ಟಾರೆ 4,000 ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಎಂಎಸ್‌ಐಎಲ್‌ ಮಾತ್ರವಲ್ಲದೇ ಆರು ಸಂಸ್ಥೆಗಳು ವಿದೇಶಿ ಮರಳು ಆಮದಿಗೆ ನೋಂದಣಿ ಮಾಡಿಕೊಂಡಿವೆ. ಬರ್ಮಾ,
ಬಾಂಗ್ಲಾದೇಶ, μಲಿಫೈನ್ಸ್‌ ಇತರೆಡೆಯಿಂದಲೂ ಮರಳು ಲಭ್ಯತೆ ಇದೆ. ಎಂಎಸ್‌ಐಎಲ್‌ ಮರಳು ಯಾವುದಕ್ಕೂ ಪರ್ಯಾಯವಲ್ಲ. ಯಾರು ಬೇಕಾದರೂ ಮರಳು ಆಮದು ಮಾಡಿಕೊಂಡು ಮಾರಾಟ ಮಾಡಬಹುದಾಗಿದೆ ಎಂದರು. ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ ಉಪಸ್ಥಿತರಿದ್ದರು. ಆಯ್ದ ಜಿಲ್ಲೆಗಳಲ್ಲಿ ಕೊರತೆ: ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ನೈಸರ್ಗಿಕ ನದಿ ಮರಳುಗಾರಿಕೆಗೆ ಪರ್ಮಿಟ್‌ ನೀಡಿಲ್ಲ.

ಹಾಗಾಗಿ ಸದ್ಯ ಪರ್ಮಿಟ್‌, ಜಿಎಸ್‌ಟಿಯಿಲ್ಲದೆ ಕೆಲವೆಡೆಯಿಂದ ಮರಳು ಪೂರೈಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಮರಳು ಮೂಟೆ ಮಾರಾಟಕ್ಕೆ ಆದ್ಯತೆ ನೀಡಲಾಗಿದೆ.

ಆನ್‌ಲೈನ್‌ ಬುಕ್ಕಿಂಗ್‌ 
ರೈಲ್ವೆ ಸಂಪರ್ಕಕ್ಕೆ ಅನುಗುಣವಾಗಿ ನಗರದ ಹೊರ ಭಾಗಗಳಲ್ಲಿ ಯಾರ್ಡ್‌ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಮಂಡ್ಯ, ಮೈಸೂರು, ಹುಬ್ಬಳ್ಳಿ ಇತರೆಡೆ ಯಾರ್ಡ್‌ ಮೂಲಕ ಮಾರಾಟ ಆರಂಭಿಸಲಾಗುವುದು. ಆನ್‌ಲೈನ್‌ ಬುಕ್ಕಿಂಗ್‌ಗೆ ಕೂಡ ಅವಕಾಶವಿದೆ. ಯಾರ್ಡ್‌ ವಿಳಾಸ: ಬಿಡದಿ- ಶಿವ ಸಾಗರ ಹೋಟೆಲ್‌ ಸಮೀಪ, ಮೈಸೂರು ರಸ್ತೆ, ಮೊಬೈಲ್‌
ಸಂಖ್ಯೆ: 96069 30236- 40. ದೊಡ್ಡಬಳ್ಳಾಪುರ- ಶೀವಪುರ ಗ್ರಾಮ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ, ಮೊಬೈಲ್‌ ಸಂಖ್ಯೆ- 96069 30231- 35.  ವೆಬ್‌ಸೈಟ್‌ www.msilonline.com

ಟಾಪ್ ನ್ಯೂಸ್

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.