ವರ್ಷವಾದರೂ ಮುಗಿಯದ ಕಾಮಗಾರಿ
Team Udayavani, Jan 21, 2018, 3:19 PM IST
ಅಫಜಲಪುರ: ನರೇಗಾ ಮತ್ತು ಎಸ್ ಡಿಪಿ ಅಡಿ 2015-16ನೇ ಸಾಲಿನಲ್ಲಿ ಅಂದಾಜು 13.5 ಲಕ್ಷ ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವರ್ಷವಾದರೂ ಮುಗಿದಿಲ್ಲ. ಹೀಗಾಗಿ ಅಂಗನವಾಡಿ ಮಕ್ಕಳು ಪಂಚಾಯತ ಆವಣದಲ್ಲಿ ಪಾಠ ಕಲಿಯುವಂತಾಗಿದೆ.
ತಾಲೂಕಿನ ಬಳೂರ್ಗಿ ಗ್ರಾಮದ ವಾರ್ಡ್ ನಂ. 2ರಲ್ಲಿ ನಡೆಯುತ್ತಿರುವ ಅಂಗನವಾಡಿ ಕಾಮಗಾರಿ 2015-16ನೇ ಸಾಲಿನಲ್ಲಿ ಆರಂಭವಾಗಿದೆ. ಇಲ್ಲಿವರೆಗೂ ಕೇವಲ ಅರ್ಧ ಕಾಮಗಾರಿ ಮಾತ್ರ ಮಾಡಲಾಗಿದೆ. ಅಂಗನವಾಡಿ
ಕಟ್ಟಡವನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಹೀಗಾಗಿ ವರ್ಷ ಗತಿಸಿದರೂ ಕಾಮಗಾರಿ ಮುಗಿಯದೆ ಕುಂಟುತ್ತಾ ಸಾಗಿದೆ.
ಪಾಳು ಬಿದ್ದ ಹಳೆ ಕಟ್ಟಡ: ಇನ್ನೂ ಗ್ರಾಪಂ ಕಚೇರಿಗೆ ಹೊಂದಿಕೊಂಡಿರುವ ಹಳೆ ಅಂಗನವಾಡಿ ಕಟ್ಟಡ ಪಾಳು ಬಿದ್ದಿದೆ. ಸುಮಾರು ವರ್ಷಗಳಿಂದ ಬಳಕೆಗೆ ಬಾರದಂತಾಗಿದೆ. ಹಳೆ ಕಟ್ಟಡದಲ್ಲಿ ಗ್ರಾಮಸ್ಥರು ಶೌಚಕ್ಕೆ ಹೋಗುತ್ತಿದ್ದಾರೆ.
ಒಟ್ಟಿನಲ್ಲಿ ಹಳೆ ಅಂಗನವಾಡಿ ಕಟ್ಟಡವೀಗ ಶೌಚಾಲಯವಾಗಿ ಮಾರ್ಪಾಟಾಗಿದ್ದು, ಗ್ರಾಪಂ ಹೊರಗಡೆ ಅಂಗನವಾಡಿ ನಡೆಸಲಾಗುತ್ತಿದೆ. ಗ್ರಾಪಂ ಸಭೆ ಸಮಾರಂಭಗಳಿದ್ದರೆ ಅಂಗನವಾಡಿ ಮಕ್ಕಳು ಮನೆಗೆ ಹೋಗುವ ಪರಿಸ್ಥಿತಿ ಇದೆ. ಇದು 2-3 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
ಮಕ್ಕಳಿಗೆ ಸಮಸ್ಯೆ: ಇನ್ನೂ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅಲ್ಲದೆ ಕಟ್ಟಡಕ್ಕೆ ನೀರು ಸರಿಯಾಗಿ ಬಳಸುತ್ತಿಲ್ಲ. ಸರಿಯಾಗಿ ನೀರು ಚುಮುಕಿಸದೆ ಇರುವುದರಿಂದ ಕ್ಯೂರಿಂಗ್ ಸರಿಯಾಗಿ ಆಗಿಲ್ಲ.
ಹೀಗಾಗಿ ಸಿಮೆಂಟ್ ಮುಟ್ಟಿದರೆ ಉದುರಿ ಬಿಳುತ್ತಿದೆ. ಇಟ್ಟಿಗೆ ಹಿಡಿದರೆ ಗೋಡೆಯಿಂದ ಹೊರಬರುತ್ತಿವೆ. ಕಾಮಗಾರಿ
ಆಮೆಗತಿಯಲ್ಲಿ ಮತ್ತು ಕಳಪೆಯಾಗಿ ನಡೆಯುತ್ತಿರುವುದರಿಂದ ಬಹಳಷ್ಟು ಸಮಸ್ಯೆಯಾಗಿದೆ. ಒಂದು ಕಡೆ ಹಳೆ ಅಂಗನವಾಡಿ ಕಟ್ಟಡ ಶೌಚಾಲಯವಾಗಿ ಬದಲಾಗಿದ್ದರೆ, ಹೊಸ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಹಳೆ ಕಟ್ಟಡ ಕಾಮಗಾರಿ ಒಂದು ಕಡೆ ಪಾಳು ಬಿದ್ದಿದ್ದರೆ, ಇನ್ನೊಂದು ಕಡೆ ಆಮೆಗತಿಯಲ್ಲಿ ಸಾಗಿರುವ ಹೊಸ ಅಂಗನವಾಡಿ ಕಟ್ಟಡವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಲಕ್ಷ್ಯವಹಿಸಿ ನೋಡುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ದಿಂದ ಅಂಗನವಾಡಿ ಮಕ್ಕಳ ಭವಿಷ್ಯ ಹಾಳಗುತ್ತಿರುವುದು ಮಾತ್ರ ಸತ್ಯ
ಸಂಗತಿ.
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ