ಸಂಗೀತ ದೈವಿಕ ವಿದ್ಯೆ,ಜೀವನಕ್ಕೆ ಹೊಸ ದೃಷ್ಟಿ ಕೊಡುತ್ತೆ
Team Udayavani, Jan 27, 2018, 6:10 AM IST
ಮೈಸೂರು: ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಶಾಸ್ತ್ರಗಳಲ್ಲಿ ಖ್ಯಾತರೆನಿಸಿರುವ ಮೈಸೂರಿ
ನ ರಾ.ಸತ್ಯನಾರಾಯಣ ಅವರು ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆಗೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಅಣ್ಣ-ತಮ್ಮಂದಿರು ಸಂಗೀತ ಕಲಿಯುತ್ತಿದ್ದರು. ನಾನು ಶಾಸ್ತ್ರ ಅಭ್ಯಾಸ ಮಾಡಿದೆ. ಭಾರತೀಯ ಸಂಗೀತ ಎಷ್ಟು ವಿಶಾಲವಾದುದು ಎಂದು ವಿಶ್ವ ದೃಷ್ಟಿಯನ್ನು ಕೊಟ್ಟವರು ನನ್ನ ತಾಯಿ, ಇದು ನನ್ನ ಕಲಿಕೆಗೆ ಅನುಕೂಲವಾಯ್ತು. ಭಾರತೀಯ ಸಂಗೀತ ಕುರಿತು ಮೈಸೂರಿನಲ್ಲಿ ಏನು ಕಲೆ ಇದೆ? ಪ್ರಪಂಚದ ಸಂಗೀತ ಯಾವ ರೀತಿ ಇದೆ ಎಂದು ಅಧ್ಯಯನ ಮಾಡುವ ಆಸೆ ತುಂಬಾ ಇತ್ತು, ಈ ಆಸಕ್ತಿಯಿಂದ ಚೈನೀಸ್, ಪಾಶ್ಚಾತ್ಯ ಸಂಗೀತಗಳನ್ನೂ ಅಭ್ಯಾಸ ಮಾಡಲು ಅನುಕೂಲವಾಯಿತು. ಪ್ರಾಚೀನ ಸಂಗೀತದ ಜತೆಗೆ ಆಧುನಿಕ ಸಂಗೀತವೂ ಬೆಳೆದುಬಂದಿದೆ.
ಭಾರತದಲ್ಲಿ ಸಂಗೀತಕ್ಕೆ ಅತ್ಯದ್ಭುತವಾದ ಬೆಲೆಯಿದೆ. ಪ್ರಪಂಚದ ಇನ್ಯಾವ ದೇಶದಲ್ಲೂ ಸಂಗೀತ ಇಷ್ಟು ಬೆಳೆದಿಲ್ಲ. ವಿದೇಶಗಳಲ್ಲಿ ಸಂಗೀತವನ್ನು ಭೋಗದ ದೃಷ್ಟಿಯಿಂದ ಕಾಣಲಾಗುತ್ತದೆ.
ಭಾರತೀಯರು ಸಂಗೀತವನ್ನು ಮೋಕ್ಷದ ದೃಷ್ಟಿಯಿಂದ ಕಾಣುತ್ತಾರೆ. ಭಾರ ತೀಯ ಸಂಗೀತದಲ್ಲಿ ಸಂಪೂರ್ಣ ದೃಷ್ಟಿ ಇದೆ. ಸಂಗೀತ ಕಲಿಯಲು ಬರುವ ಯುವಪೀಳಿಗೆ ಯವರು ಹೊಸ ದೃಷ್ಟಿ ಪಡೆಯಬೇಕು ಎನ್ನುತ್ತಾರೆ ಸತ್ಯನಾರಾಯಣ.
ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ.
– ರಾ.ಸತ್ಯನಾರಾಯಣ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
MUST WATCH
ಹೊಸ ಸೇರ್ಪಡೆ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ