ಐತಿಹಾಸಿಕ ಮೆರವಣಿಗೆಗೆ ಸಾಕ್ಷಿಯಾದ ಜಗಳೂರು
Team Udayavani, Feb 1, 2018, 1:53 PM IST
ದಾವಣಗೆರೆ: ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆ ದಿನ ನಡೆಯುವ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಗೆ ಲಕ್ಷಾಂತರ ಭಕ್ತರ ಸಮೂಹ ಸಾಕ್ಷಿಯಾಯಿತು. ಸಿರಿಗೆರೆ ತರಳಬಾಳು ಮಠದ ಪವಿತ್ರ ಪರಂಪರೆಯಂತೆ ಮಠದ ಪೀಠಾಧಿಪತಿಗಳ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದಂದು ಮಾತ್ರ ನಡೆಯುತ್ತದೆ. ವಿಶೇಷವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಕುಳಿತ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ
ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವ ಅಪರೂಪದ ಕ್ಷಣಕ್ಕಾಗಿ ತುದಿಗಾಲ ಮೇಲೆ ಅಸಂಖ್ಯಾತ ಭಕ್ತ ಸಮೂಹ ಕಾಯುತ್ತಿದ್ದರು. ಶ್ರೀಗಳು ಮೆರವಣಿಗೆಯಲ್ಲಿ ಸಾಗುವ ದೃಶ್ಯವನ್ನು ನಾಡಿನ ದಶದಿಕ್ಕುಗಳಿಂದಲೂ ಆಗಮಿಸಿದ ಭಕ್ತ ಸಮೂಹ ಕಣ್ಮನ ತುಂಬಿಕೊಂಡಿತು.
ಜಗಳೂರು ಪಟ್ಟಣದಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಭಕ್ತರು ಕಂಡು ಬಂದರು. ಭಕ್ತ ಸಾಗರದ ಮಧ್ಯೆ ಸಾಗಿ ಬಂದ ಮೆರವಣಿಗೆ ತರಳಬಾಳು ಮಠದ ಐತಿಹಾಸಿಕ ಪರಂಪರೆಯ ಪ್ರತೀಕವಾಗಿತ್ತು. ಮೆರವಣಿಗೆಯ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರವಲ್ಲ, ಮನೆ ಮಹಡಿ, ಮರ, ಕಾಂಪೌಂಡ್ಗಳನ್ನು ಏರಿ ಕುಳಿತಿದ್ದ ಭಕ್ತರು, ಸಿರಿಗೆರೆ ತರಳಬಾಳು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ
ದರ್ಶನ ಪಡೆದರು. ಐತಿಹಾಸಿಕ ಮೆರವಣಿಗೆಗೆ ಡೊಳ್ಳು, ಕಹಳೆ, ಕೀಲುಕುದುರೆ, ಹುಲಿವೇಶ, ನಂದಿಕೋಲು, ವೀರಗಾಸೆ, ಭಜನಾ ತಂಡಗಳು ಹೀಗೆ ಹತ್ತು ಹಲವು ಜಾನಪದ ಕಲಾ ತಂಡಗಳು ಇನ್ನಷ್ಟು ರಂಗು ತಂದಿದ್ದವು. ಡಾ| ಶಿವಮೂರ್ತಿ ಶಿವಾಚಾರ್ಯ
ಸ್ವಾಮೀಜಿ ಪಲ್ಲಕ್ಕಿಯಲ್ಲಿ ಆಸೀನರಾದಾಗ ಸಮಿತಿ ಕಾರ್ಯದರ್ಶಿ ಡಾ| ಜಿ. ಮಂಜುನಾಥಗೌಡ ಹಾಗೂ ಖಜಾಂಚಿ ಯು.ಜಿ. ಶಿವಕುಮಾರ್ ಮಾಲಾರ್ಪಣೆ ಮಾಡಿ ಭಕ್ತಿಕಾಣಿಕೆ ಸಮರ್ಪಿಸಿದರು.
ಈ ಐತಿಹಾಸಿಕ ಮೆರವಣಿಗೆ ಪಾಪಯ್ಯನಾಯಕ ದೇವಾಲಯದ ಸಮೀಪ ಇರುವ ಶಿವನಗೌಡರ ಮನೆಯಿಂದ ಹೊರಟು ಭುವನೇಶ್ವರಿ ಸರ್ಕಲ್, ನೆಹರೂ ಸರ್ಕಲ್, ಕೆ.ಇ.ಬಿ. ಸರ್ಕಲ್, ನಗರದ ಪ್ರಮುಖ ಬೀದಿಗಳ ಮೂಲಕ ಹುಣ್ಣಿಮೆ ಮಹೋತ್ಸವದ ವೇದಿಕೆ ಕಾರ್ಯಕ್ರಮ ನಡೆಯುತ್ತಿರುವ ತರಳಬಾಳು ಕೇಂದ್ರದಲ್ಲಿ ಅಂತ್ಯಗೊಂಡಿತು. ಮಠದ ಬಿರುದಾವಳಿಗಳನ್ನು ಹಿಡಿದ ಯುವಕರು, ಚಾಮರ ಬೀಸುತ್ತ ಸಾಗಿದ ಪಾರುಪತ್ತೆಗಾರರು ಅಲ್ಲದೆ ಹಲವು ಜಾನಪದ ಕಲಾತಂಡಗಳು, ಶಿವಸೈನ್ಯ, ಯುವಪಡೆಗಳು ವಿಶೇಷ
ದಿರಿಸಿನಿಂದ ಆಕರ್ಷಿಸಿದರು. ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಚ್.ಪಿ. ರಾಜೇಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಟಿ. ಗುರುಸಿದ್ಧನಗೌಡ, ಮಹೋತ್ಸವ ಕಾರ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಕೆ.ಬಿ. ಕಲ್ಲೇರುದ್ರೇಶ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ