ಬಟ್ಟೆ ತೊಳೆಯುವುದು ಲಿಂಗಪೂಜೆಗೆ ಸಮ


Team Udayavani, Feb 2, 2018, 10:33 AM IST

gul-1.jpg

ಕಲಬುರಗಿ: ಲಿಂಗ ಪೂಜೆ ಮಾಡುವುದು ಮನದ ಮೈಲಿಗೆ ತೊಳೆಯಲು, ಬಟ್ಟೆ ತೊಳೆಯುವುದರಿಂದ ದೇಹದ ಮೈಲಿಗೆ ತೊಳೆಯುತ್ತದೆ. ಆದ್ದರಿಂದ ಬಟ್ಟೆ ತೊಳೆಯುವುದು ಹಾಗೂ ಮೈಲಿಗೆ ತೊಳೆಯುವುದು ಲಿಂಗ ಪೂಜೆಗೆ ಸಮಾನ ಎಂದು ಚಿಗರಳ್ಳಿಯ ಮರಳಶಂಕರ ದೇವರ ಗುರುಪೀಠದ ಜಗದ್ಗುರು ಸಿದ್ದಬಸವ ಕಬೀರ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿವಾಳ ಸಂಘ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ದೊಡ್ಡವರು ಹೊಲಸು ಮಾಡುತ್ತಾರೆ, ಸಣ್ಣವರು ಅದನ್ನು ತೊಳೆಯುತ್ತಾರೆ. ಇದು ಜಗದ ರೂಢಿಯಾಗಿದೆ. ಇವತ್ತು ಲಿಂಗಾಯತ ಎನ್ನುವುದು ದೊಡ್ಡ ವಿವಾದವಾಗಿದೆ. ಲಿಂಗಾಯತರು ಯಾರು? ವಿಭೂತಿ, ಲಿಂಗ ಕಟ್ಟಿಕೊಂಡವನು ಲಿಂಗಾಯತ ಅಲ್ಲ. ಕಷ್ಟದಲ್ಲಿದ್ದವನ, ತುಳಿತಕ್ಕೊಳಗಾದವನ ಕೈ ಹಿಡಿದು ಎತ್ತುವವನೇ ಲಿಂಗಾಯತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲಿಂಗಾಯತ ಧರ್ಮ ಸಂಕಷ್ಟದಲ್ಲಿದ್ದಾಗ ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಮತ್ತು ಸಮಗಾರ ಹರಳಯ್ಯ ಕಾಪಾಡಿದರು. ಬಿಜ್ಜಳರಾಜನ ತಂತ್ರ ಮತ್ತು ದಾಳಿಯನ್ನು ಮೆಟ್ಟಿ ನಿಂತರು. ವಚನಗಳ ಸಮೇತ ಶರಣರನ್ನು ರಕ್ಷಣೆ ಮಾಡಿದರು. ಆಗ ಮಾಚಿದೇವನ ಕೈಯಲ್ಲಿ ಖಡ್ಗಬಂತು ಎಂದರು.

ಕಸಗೂಡಿಸುವ ಕಾಯಕದ ಶರಣೆ ಸತ್ಯಕ್ಕ ಕಸಗೂಡಿಸುವರ, ಚಪ್ಪಲಿ ಹೊಲೆಯುವರ, ಬಟ್ಟೆ ತೊಳೆಯುವರ ರಕ್ಷಣೆಗೆಗಾಗಿ ಮತ್ತು ಕಾಯಕ ತತ್ವ ಹರಡಲು ಲಿಂಗಾಯತ ಧರ್ಮವನ್ನು ಕಟ್ಟಲು ಆಲೋಚನೆ ವ್ಯಕ್ತಪಡಿಸಿದಾಗ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರು ಅದನ್ನು ಬಲವಾಗಿ ಸಮರ್ಥನೆ ಮಾಡಿದ್ದರು. ಆ ವೇಳೆಯನ್ನು ಯಾರು ವಿರೋಧಿಸುತ್ತಾರೋ ಅವರನ್ನು ಹೊರ ಹಾಕುವ ಧೈರ್ಯದ ಮಾತುಗಳನ್ನು ಹೇಳಿ ಔಚಿತ್ಯವನ್ನು ಪ್ರತಿಪಾದಿಸಿದ್ದರು. ಆಗ ಬಸವಣ್ಣರಾದಿಯಾಗಿ ಎಲ್ಲರೂ ಇದನ್ನು ಒಪ್ಪಿದ್ದರು. ಆಗ ಲಿಂಗಾಯತ ಜಾರಿಗೆ ಬಂತು ಎಂದರು.
 
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಡಾ| ಶರಣಪ್ರಕಾಶ ಪಾಟೀಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ ಸರಕಾರ ಎಲ್ಲ ಸಣ್ಣ ಸಮುದಾಯಗಳ ಸುರಕ್ಷತೆ ಮತ್ತು ಅವುಗಳ ಅಭ್ಯುದಯಕ್ಕಾಗಿ ಅರ್ಥಿಕ ನೆರವು ನೀಡಿದೆ. ಅಲ್ಲದೆ, ಮಡಿವಾಳ ಮಾಚಿದೇವ ಜಯಂತಿ ಆಚರಿಸಲು ನಿರ್ಧಾರ ಕೈಗೊಂಡಿರುವುದು ಮಡಿವಾಳ ಸಮುದಾಯದ ಬಗ್ಗೆ ಇರುವ ಕಾಳಜಿ ತೋರುತ್ತದೆ ಎಂದರು. ಶರಣರು 12ನೇ ಶತಮಾನದಲ್ಲಿ ರಚನೆ ಮಾಡಿರುವ ವಚನ ಸಾಹಿತ್ಯವನ್ನು ನಾವು ಗುತ್ತಿಗೆ ಹಿಡಿದಂತೆ ನಮ್ಮ ನಮ್ಮ ಸಮಾಜಗಳಿಗೆ ಸೀಮಿತ ಮಾಡಿಕೊಂಡಿದ್ದೇವೆ. ಆದರೆ, ಎಲ್ಲ ಜಾತಿಯ, ವರ್ಗದ ಶರಣರು ಇಡೀ ಮನುಕುಲಕ್ಕಾಗಿ ವಚನಗಳನ್ನು ಬರೆದಿದ್ದಾರೆ. ಅದನ್ನು ಎಲ್ಲ ವರ್ಗದವರು ಓದಬೇಕಿದೆ. ಬದುಕಿನ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್‌ ಮಾತನಾಡಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ, ಮಹಾನಗರ ಪಾಲಿಕೆ ಮೇಯರ್‌ ಶರಣಕುಮಾರ ಮೋದಿ, ಜಿಲ್ಲಾ ಮಡಿವಾಳ ಸಂಘದ ಶಿವಪುತ್ರ ಎಸ್‌. ಮಲ್ಲಾಬಾದಕರ್‌ ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಮಲ್ಲಣ್ಣ ಎಸ್‌. ಮಡಿವಾಳ ವಿಶೇಷ ಉಪನ್ಯಾಸ ನೀಡಿದರು. ದತ್ತಪ್ಪ ಸಾಗನೂರು ಹಾಗೂ ಸಮಾಜ ಬಾಂಧವರು ಇದ್ದರು.

ಸೃಷ್ಟಿ ಒಂದೇ.. ಮೇಲು- ಕೀಳು ಯಾಕೆ?
ಸಣ್ಣ ಸಣ್ಣ ಸಮುದಾಯಗಳು ಸಂಘಟನೆ ಕೊರತೆಯಿಂದ ಸಾಯುತ್ತವೆ. ಮಡಿವಾಳ ಜಯಂತಿ ಲಿಂಗಾಯತರು ಮುಂದೆ ನಿಂತು ಮಾಡಬೇಕಾಗಿತ್ತು. ಆದರೆ, ಅವರ್ಯಾರು ವೇದಿಕೆಯಲ್ಲಿ ಕಾಣುತ್ತಿಲ್ಲ. ಆದರೆ ಮುಂದೊಂದು ದಿನ ಅವರು ಬರುತ್ತಾರೆ. ಸೃಷ್ಟಿ ಬೇರೆ ಬೇರೆಯಾಗಿದ್ದರೆ ಗೌಡರ ಮನೆಯ ಗಾಳಿ ಮತ್ತು ದೀಪ, ದಲಿತರ ಮನೆಯ ಗಾಳಿ ಮತ್ತು ದೀಪ ಬೇರೆಬೇರೆ ಆಗಿರಬೇಕಿತ್ತು. ಆದರೆ ಒಂದೇ ಇದೆಯಲ್ಲ, ಇಷ್ಟಿದ್ದರೂ ಮೇಲು ಕೀಳು ಯಾಕೆ? 
●ಸಿದ್ದಬಸವ ಕಬೀರದಾಸ್ಡ, ಜಗದ್ಗುರು, ಚಿಗರಳ್ಳಿಯ ಮರಳಶಂಕರ ದೇವರ ಗುರುಪೀಠ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.