ಪ್ರಖ್ಯಾತ ಯಕ್ಷ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ಗಾಯ
Team Udayavani, Feb 21, 2018, 8:36 AM IST
ಬೆಳ್ತಂಗಡಿ: ಧರ್ಮಸ್ಥಳ ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಈಚೆಗಷ್ಟೇ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರು ಕೆ. ಗೋವಿಂದ ಭಟ್ ಅವರಿಗೆ ತೀರ್ಥಹಳ್ಳಿ ಸಮೀಪ ಅಪಘಾತವಾಗಿದೆ.
ಅವರು ಯಕ್ಷಗಾನ ಪ್ರದರ್ಶನ ಮುಗಿಸಿ ಬಂಧುವಿನ ಜತೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ದರೆಗೆ ಢಿಕ್ಕಿಯಾಗಿ ಅಪಘಾತವಾಗಿದ್ದು ಸ್ವಲ್ಪ ಪ್ರಮಾಣದ ಗಾಯಗಳಾದ ಗೋವಿಂದ ಭಟ್ ಅವರಿಗೆ ಮೂರು ವಾರದ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.