ವರದಪ್ಪ ಪ್ರಶಸ್ತಿ ಪ್ರದಾನ


Team Udayavani, Feb 21, 2018, 11:40 AM IST

Vardhappa-Awards.jpg

ಹನ್ನೆರಡನೇ ವರ್ಷದ ಎಸ್‌.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ನಡೆಯಿತು. ರಂಗಭೂಮಿಯ ಹಿರಿಯ ಕಲಾವಿದೆ ಪ್ರತಿಭಾ ನಾರಾಯಣ ಹಾಗೂ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರಿಗೆ ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರ್‌ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ರಾಜಕುಮಾರ್‌ ಅವರ ಸಹೋದರ ಎಸ್‌.ಪಿ. ವರದರಾಜು ಅವರ ಹೆಸರಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದಲೂ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಎಂ.ವಿ. ರಾಜಶೇಖರ್‌, ರಾಜಕುಮಾರ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ವೇಳೆ ನಾನು ಅವರ ಆರೋಗ್ಯ ವಿಚಾರಿಸಲು ಮನೆಗೆ ಹೋಗಿದ್ದೆ. ಅಲ್ಲಿಂದ ನಾನು ಹೊರಡುವಾಗ ನನ್ನನ್ನು ಬೀಳ್ಕೊಡಲು ಬಾಗಿಲವರೆಗೆ ಅವರು ಬಂದರು. ಆಗ ನಾನು ಈ ಸಂದರ್ಭದಲ್ಲಿ ನೀವ್ಯಾಕೆ ಬರಲು ಹೋದಿರಿ ಎಂದೆ. ಅದಕ್ಕೆ ಅವರು ಇದು ನನ್ನ ಕರ್ತವ್ಯ ಎಂದು ಉತ್ತರಿಸಿದರು. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಕನ್ನಡ ಚಿತ್ರರಂಗ ಅವರಿಂದ ಶ್ರೀಮಂತವಾಗಿದೆ.

ಡಾ.ರಾಜ್‌, ವರದಪ್ಪ ಅವರಂತಹ ಮಹಾನ್‌ ವ್ಯಕ್ತಿಗಳ ಗುಣ, ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳೋದು ನಾವು ಅವರಿಗೆ ಕೊಡುವ ಗೌರವ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಾಯಕಿ ಮಂಜುಳಾ ಗುರುರಾಜ್‌, ವರದಪ್ಪ ಅವರ ಸಂಗೀತ ಅಭಿರುಚಿಯನ್ನು ಮೆಲುಕು ಹಾಕಿದರು. “ರಾಜ್‌ಕುಮಾರ್‌ ಹಾಗೂ ವರದಪ್ಪ ರಾಮ-ಲಕ್ಷ್ಮಣರಿದ್ದಂತೆ. “ನಂಜುಂಡಿ ಕಲ್ಯಾಣ’ ಚಿತ್ರದ “ಒಳಗೆ ಸೇರಿದರೆ ಗುಂಡು ….’ ಹಾಡನ್ನು ನಾನು ಹಾಡುವ ವೇಳೆ, ಅದರ ಲಯ ಹೀಗೇ ಬರಬೇಕೆಂದು ಹೇಳಿಕೊಟ್ಟವರು ವರದಪ್ಪ ಅವರು.

ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಆ ಹಾಡನ್ನೇ ಹಾಡಲು ಹೇಳುತ್ತಾರೆ. ಆಗ ನನಗೆ ಆ ಹಾಡು ಹಾಡಿದ ಸನ್ನಿವೇಶ ನೆನಪಾಗುವ ಜೊತೆಗೆ, ಆ ಹಾಡಿನಲ್ಲಿ ವರದಪ್ಪ ಅವರು ಕಾಣಿಸುತ್ತಾರೆ. ಅವರಿಗೆ ಸಂಗೀತದ ಅಭಿರುಚಿ ಚೆನ್ನಾಗಿಯೇ ಇತ್ತು’ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಕೂಡಾ ಡಾ.ರಾಜ್‌ಕುಮಾರ್‌ ಹಾಗೂ ವರದಪ್ಪ ಅವರು ತಮಗೆ ಕೊಟ್ಟ ಬೆಂಬಲವನ್ನು ನೆನೆದರು.

“ರಾಜಕುಮಾರ್‌ ಹಾಗೂ ವರದಪ್ಪ ಅವರು ಕೊಟ್ಟ ಬೆಂಬಲದಿಂದ ಇಲ್ಲಿ ನಿಲ್ಲಲು ಸಾಧ್ಯವಾಯಿತು. ಊಟಕ್ಕಾಗಿ ಬಂದನು ನಾನು. ಪ್ರಾಮಾಣಿಕವಾಗಿ ಅಭಿನಯ ಮಾಡಿಕೊಂಡು ಹೋದೆ. ಸಂಭಾವನೆ, ಪಾತ್ರದ ಬಗ್ಗೆ ಕೇಳಲಿಲ್ಲ. ರಂಗಭೂಮಿಯಿಂದ ಬಂದ ಕಲಾವಿದರ ಕಷ್ಟ ಅರಿತಿದ್ದ ವಜ್ರೆàಶ್ವರಿ ಸಂಸ್ಥೆ ಒಬ್ಬ ಕಲಾವಿದನಿಗೆ ಏನು ಸಂದಾಯ ಮಾಡಬೇಕೋ ಅದನ್ನು ಮಾಡುತ್ತಿತ್ತು. ನಾನು ವರದಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ. ನಾವು ಸಿಕ್ಕಾಗೆಲ್ಲಾ ಸಿನಿಮಾ ಬಗ್ಗೆ ಚರ್ಚಿಸುತ್ತಿದ್ದೆವು.

“ಶ್ರುತಿ ಸೇರಿದಾಗ’ ಚಿತ್ರದ “ಬೊಂಬೆಯಾಟವಯ್ನಾ …’ ಹಾಡಿನಲ್ಲಿ ನನ್ನ ಹಾವ-ಭಾವ ಹೇಗಿದ್ದರೆ ಚೆಂದ ಎಂದು ಹೇಳಿಕೊಟ್ಟವರು ವರದಪ್ಪನವರು. ಅದು ಹಿಟ್‌ ಆಯಿತು ಕೂಡಾ. ಈಗ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿಯಾಗುತ್ತಿದೆ. ಇಲ್ಲಿವರೆಗೆ ಹಲವು ಬಿರುದು ಪ್ರಶಸ್ತಿಗಳು ಬಂದಿವೆ. ಆದರೆ ಸರಸ್ವತಿಯ ಸ್ಪರ್ಶವಾಗಿದೆಯೇ ಹೊರತು ಸಾಕಾರ ಆಗಿಲ್ಲ’ ಎಂದರು. ಪ್ರಶಸ್ತಿ ಸ್ವೀಕರಿಸಿದ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ ಕೂಡಾ ಸಂತಸ ಹಂಚಿಕೊಂಡರು. 

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.