ಕಬ್ಬಿನ ಹಣ ಪಾವತಿಗೆ ಸೂಚನೆ
Team Udayavani, Feb 23, 2018, 10:59 AM IST
ಕಲಬುರಗಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಹಣವನ್ನು ಕೂಡಲೇ ಪಾವತಿ ಮಾಡಬೇಕು. ಹಣ ಪಾವತಿ ತಡವಾದರೆ ರೈತರ ಸಮಸ್ಯೆಗಳು ಹೆಚ್ಚುತ್ತವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಆದಷ್ಟು ಬೇಗ ಬಾಕಿ ಹಣ ಪಾವತಿಸಬೇಕು. ರೈತರಿಗೆ ಪಾವತಿಸಿದ ಹಣದ ವರದಿ ಪ್ರತಿದಿನ ಸಲ್ಲಿಸಬೇಕು ಎಂದು ಸೂಚಿಸಿದರು. ಉಗಾರ್ ಶುಗರ್ ಕಾರ್ಖಾನೆಯವರು 2725 ರೈತರಿಂದ 2.96 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿದ್ದು, ಈವರೆಗೆ 22 ಕೋಟಿ ಹಣ ಪಾವತಿಸಿದ್ದಾರೆ. ಇನ್ನು 65 ಕೋಟಿ ಪಾವತಿಸಬೇಕಿದೆ. ರೇಣುಕಾ ಶುಗರ್ ಕಾರ್ಖಾನೆಯವರು 4251 ರೈತರಿಂದ 6.31 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿ ಮಾಡಿ 41 ಕೋಟಿ ಪಾವತಿಸಿದ್ದಾರೆ. ಇನ್ನು 139 ಕೋಟಿ ಪಾವತಿಸಬೇಕು. ಎನ್ಎಸ್ಎಲ್ ಭೂಸನೂರ ಕಾರ್ಖಾನೆಯವರು 331 ರೈತರಿಂದ 2.26 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿದ್ದಾರೆ. 49 ಕೋಟಿ ರೂ. ಪಾವತಿಸಬೇಕಿದೆ. ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯವರು
1245 ರೈತರಿಂದ 4.35 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿ 27 ಕೋಟಿ ರೂ.ಪಾವತಿಸಿದ್ದು, ಇನ್ನು 95 ಕೋಟಿ ಪಾವತಿಸಬೇಕಿದೆ. ಆದಷ್ಟು ಬೇಗ ಈ ಹಣವನ್ನು ವತಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ರೈತರು ಬೆಳೆದ ಕಬ್ಬು ನಿಗದಿತ ಅವಧಿಯಲ್ಲಿ ಕಟಾವು ಮಾಡುತ್ತಿಲ್ಲ ಎಂಬ ದೂರುಗಳಿದ್ದು, ಸಕ್ಕರೆ ಕಾರ್ಖಾನೆಯವರು 3 ದಿನಗಳಲ್ಲಿ ಕಬ್ಬು ಕಟಾವು ಮಾಡುವ ಟೋಲಿ ಹೆಚ್ಚಿಸಿ ಈಗಿರುವ ಹಾಗೂ ಹೆಚ್ಚಿಸಿರುವ ಟೋಳಿಗಳ ವರದಿ ನೀಡಬೇಕು. ಟೋಳಿ ಹೆಚ್ಚಿಸಿ ಹೆಚ್ಚಿನ ಪ್ರಮಾಣದ ಕಬ್ಬು ಕಟಾವಿಗೆ ಮುಂದಾಗಬೇಕು.
ಕಬ್ಬು ಕಟಾವು ಮಾಡುವ ಟೋಳಿ ಜೊತೆಗೆ ರೈತರು ಸಹಾಯ ಮಾಡಿದರೆ ಅಥವಾ ರೈತರೇ ಟೋಳಿಗಳೊಂದಿಗೆ ಕಬ್ಬು ಕಟಾವು ಮಾಡಿದ್ದಲ್ಲಿ ಒಂದು ಟನ್ಗೆ 275 ರೂ. ನೀಡಲಾಗುವುದು. ರೈತರು ಇದರ ಲಾಭ ಪಡೆಯಬೇಕು. ಕಬ್ಬು ಬೆಳೆದ ರೈತರಿಗೆ ಸಿಹಿ ನೀಡಬೇಕು ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಸಹ ಹೆಚ್ಚು ಪ್ರಮಾಣದ ಕಬ್ಬು ಬೆಳೆಯುತ್ತಾರೆ. ಅಲ್ಲಿ ಸ್ವತಃ ರೈತರೇ ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಆದರೆ ಈ ಭಾಗದಲ್ಲಿ ಕಬ್ಬು ಕಟಾವಿಗೆ ಮಹಾರಾಷ್ಟ್ರದ ಟೋಳಿಗಳನ್ನು ಅವಲಂಬಿಸಬೇಕಿದೆ. ರೈತರೇ ಸ್ವತಃ ಕಬ್ಬು ಕಟಾವು ಮಾಡಿಕೊಂಡಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಹೇಳಿದರು.
ಉಗಾರ್ ಶುಗರ್ನ ಕಬ್ಬು ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಪಾಟೀಲ, ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ಮ್ಯಾನೇಜರ್ ಶಿವಾನಂದ ನಂದಗಿರಿ, ಎನ್ಎಸ್ಎಲ್ ಭೂಸನೂರ ಸಕ್ಕರೆ ಕಾರ್ಖಾನೆ ಉಪ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ, ರೇಣುಕಾ ಸಕ್ಕರೆ
ಕಾರ್ಖಾನೆ ಉಪ ವ್ಯವಸ್ಥಾಪಕ ಅನೀಲಕುಮಾರ ಎಸ್. ವಾಲಿಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅರುಣಕುಮಾರ ಸಂಗಾವಿ ಹಾಗೂ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್