ಬೆಂಗಳೂರಿನ ಸೊಸೆಯಾಗಿದ್ದಕ್ಕೆ ಖುಷಿ ಇದೆ


Team Udayavani, Mar 7, 2018, 11:09 AM IST

Bhavana-(12).jpg

ಬೆಂಗಳೂರಿನ ಸೊಸೆ! ಹಾಗೆಂದಾಕ್ಷಣ ಹಿರಹಿರಿ ಹಿಗ್ಗಿದರು ಭಾವನಾ ಮೆನನ್. ಬೆಂಗಳೂರು ಹುಡುಗ ನವೀನ್ ಜೊತೆಗೆ ಮದುವೆಯಾದ ನಂತರ ಮೊದಲ ಬಾರಿಗೆ ಅವರು ಮಾಧ್ಯಮದವರೆದುರು ಸೋಮವಾರ ಕಾಣಿಸಿಕೊಂಡರು. ಅದೂ ಟಗರು ಚಿತ್ರದ ಸಂತೋಷಕೂಟದಲ್ಲಿ. ಈ ಸಂದರ್ಭದಲ್ಲಿ ಅವರನ್ನು ಬೆಂಗಳೂರಿನ ಸೊಸೆ ಎಂದಾಗ ಖುಷಿಯಾದರು. ಬೆಂಗಳೂರಿನ ಸೊಸೆ ಎಂದು ಕರೆಸಿಕೊಳ್ಳುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳಿದರು.

ಸಾಮಾನ್ಯವಾಗಿ ಮದುವೆಯಾದ ಮೇಲೆ ನಟಿಯರಿಗೆ ಅವಕಾಶಗಳು ಕಡಿಮೆಯಾಗುತ್ತದೆ ಎಂಬ ಮಾತಿದೆ. ಅವಕಾಶಗಳಿದ್ದರೂ, ನಟಿಯರು ಒಪ್ಪುವುದಿಲ್ಲ ಎಂಬ ನಂಬಿಕೆ ಇದೆ. ಇವೆರಡನ್ನೂ ಸುಳ್ಳು ಮಾಡಿರುವ ಭಾವನಾ, ಪ್ರಜ್ವಲ್ ಜೊತೆಗೆ `ಇನ್‍ಸ್ಪೆಕ್ಟರ್ ವಿಕ್ರಂ’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಹೇಗೆ ಸಾಧ್ಯವಾಯಿತು ಎಂದರೆ, `ಮದುವೆ ಆದ ತಕ್ಷಣ ನನಗೆ ಚಿತ್ರದಲ್ಲಿ ನಟಿಸಬೇಕು, ಪಾತ್ರ ಮಾಡಬೇಕು ಎಂಬ ಯಾವುದೇ ಉಶವಿರಲಿಲ್ಲ.

ಆದರೆ, ಅವಕಾಶ ಬಂತು. ಅದೊಂದು ಡ್ರಗ್ ಪೆಡ್ಲರ್ ಪಾತ್ರ. ಚೆನ್ನಾಗಿತ್ತು ಅಂತ ಒಪ್ಪಿಕೊಂಡೆ’ ಎನ್ನುತ್ತಾರೆ ಭಾವನಾ. ಕನ್ನಡವಲ್ಲದೆ ಮಲಯಾಳಂನಲ್ಲೇನಾದರೂ ಚಿತ್ರಗಳಿವೆಯಾ ಎಂದರೆ, `ನನಗೆ ಸುಮ್ಮನೆ ಅರ್ಜೆಂಟ್ ಮಾಡೋಕೆ ಆಸೆ ಇಲ್ಲ. ಚಿತ್ರರಂಗಕ್ಕೆ ಬಂದು 16 ವರ್ಷಗಳಾಗಿವೆ. 77 ಸಿನಿಮಾಗಳಲ್ಲಿ ನಟಿಸಿದ್ದೇನೆ. ಸುಮ್ಮನೆ ಏನೇನೋ ಮಾಡೋಕೆ ಇಷ್ಟವಿಲ್ಲ.

ಒಳ್ಳೆಯ ಪಾತ್ರಗಳಿದ್ದರೆ ಖಂಡಿತಾ ಮಾಡುತ್ತೀನಿ. ನನಗೆ ಅಷ್ಟು ಚಿತ್ರ ಮಾಡಬೇಕು, ಇಷ್ಟರಲ್ಲಿ ನಟಿಸಬೇಕು ಎಂಬ ಯಾವುದೇ ಟಾರ್ಗೆಟ್ ಇಲ್ಲ. ನಾನು 75 ಪ್ಲಸ್ ಸಿನಿಮಾ ಮಾಡುತ್ತೀನಿ ಅಂದುಕೊಂಡೇನೂ ಇಲ್ಲಿಗೆ ಬಂದಿರಲಿಲ್ಲ. ಅದಾಗೇ ಎಲ್ಲವೂ ಆಯಿತು. ಮುಂದೆ ಸಹ ಹಾಗೆಯೇ ಆಗಲಿ. ಒಳ್ಳೆಯ ಅವಕಾಶ ಸಿಕ್ಕರೆ ನಟಿಸುತ್ತೀನಿ’ ಎನ್ನುತ್ತಾರೆ ಭಾವನಾ.

ಭಾವನಾ ಕನ್ನಡಕ್ಕೆ ಬಂದು ಎಂಟು ವರ್ಷಗಳಾಗಿವೆ. 2010ರಲ್ಲಿ ಬಿಡುಗಡೆಯಾದ `ಜಾಕಿ’ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಬಂದರು. ಆ ನಂತರ ಸುದೀಪ್, ಗಣೇಶ್, ಉಪೇಂದ್ರ ಮುಂತಾದವರ ಜೊತೆಗೆ ನಟಿಸಿದ್ದಾರೆ. `ದೊಡ್ಡ ಹೀರೋಗಳ ಜೊತೆಗೆ ನಟಿಸುವ ಅವಕಾಶ ಈ ಅವಧಿಯಲ್ಲಿ ಸಿಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ನನಗೆ ಬಹಳ ಒಳ್ಳೆಯ ಹಾಡುಗಳು ಸಿಕ್ಕಿವೆ.

ಮಲಯಾಳಂನಲ್ಲಿ ನನಗೆ ಒಳ್ಳೆಯ ಹಾಡುಗಳು ಸಿಕ್ಕಿದ್ದು ಕಡಿಮೆಯೇ. ಇಲ್ಲಿ ಮಾತ್ರ ಮೊದಲಿನಿಂದ ಇಲ್ಲಿಯವರೆಗೂ ಒಂದಿಷ್ಟು ಒಳ್ಳೆಯ ಹಾಡುಗಳು ಸಿಕ್ಕಿವೆ’ ಎನ್ನುತ್ತಾರೆ ಅವರು. ಇನ್ನು ಪುನೀತ್, ಸುದೀಪ್, ಉಪೇಂದ್ರರಂತಹ ಹೀರೋಗಳ ಜೊತೆಗೆ ನಟಿಸಿದ್ದರೂ, ಶಿವರಾಜಕುಮಾರ್ ಅವರ ಜೊತೆಗೆ ನಟಿಸುವ ಅವಕಾಶ ಒಂದಲ್ಲ ಒಂದು ಕಾರಣಕ್ಕೆ ತಪ್ಪಿ ಹೋಗುತಿತ್ತಂತೆ.

ಶಿವರಾಜಕುಮಾರ್ ಅವರ ಜೊತೆಗೆ ಮುಂಚೆಯೂ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ, ಒಂದಲ್ಲ ಒಂದು ಕಾರಣಕ್ಕೆ ಅದು ತಪ್ಪಿ ಹೋಗೋದು. `ಟಗರು’ ಚಿತ್ರದಲ್ಲಿ ನಟಿಸುವುದಕ್ಕೆ ಸೂರಿ, ಏಳೆಂಟು ದಿನಗಳ ಅತಿಥಿ ಪಾತ್ರ ಎಂದರು. ನೀವಿದ್ದರೆ ಚೆನ್ನ ಅಂತಲೂ ಹೇಳಿದ್ದರು. ನನಗೆ ನಿಮ್ಮಿಂದ ನೋ ಕೇಳೋಕೆ ಇಷ್ಟ ಇಲ್ಲ ಎಂದಿದ್ದರು. ನನಗೂ ನೋ ಅನ್ನೋಕೆ ಇಷ್ಟವಿರಲಿಲ್ಲ.

ಏಕೆಂದರೆ, ಕನ್ನಡಕ್ಕೆ ನನ್ನನ್ನು ಪರಿಚಯಿಸಿದ್ದು ಸೂರಿ. ನನಗೆ ಅವರ ಜೊತೆಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟ ಇರಲಿಲ್ಲ. ಹಾಗಾಗಿ ಒಪ್ಪಿದೆ. ಏಳೆಂಟು ದಿನ ಅಂತ ಶುರುವಾಗಿದ್ದು, 15 16 ದಿನಗಳಾದವು’ ಎನ್ನುತ್ತಾರೆ ಭಾವನಾ.

ಟಾಪ್ ನ್ಯೂಸ್

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

vijay raghavendra’s swapna mantapa movie

Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ

The Judgement;

The Judgement; ಭವಿಷ್ಯ ನಿರ್ಧರಿಸುವ ಜಡ್ಜ್ಮೆಂಟ್‌: ರವಿಚಂದ್ರನ್‌

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

kiccha sudeepa gave update about max

MAX; ಅಭಿಮಾನಿಗಳಿಗೆ ಸುದೀಪ್‌ ಅಪ್ಡೇಟ್

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.