ಮಲ್ಪೆ: ನವಶಕ್ತಿ ವೈಭವದಲ್ಲಿ ದೇವಿ ಆವೇಶ
Team Udayavani, Mar 10, 2018, 6:10 AM IST
ಮಲ್ಪೆ: ಇಲ್ಲಿಗೆ ಸಮೀಪದ ಭಜನ ಮಂದಿರವೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನವಶಕ್ತಿ ವೈಭವ ನೃತ್ಯ ಕಾರ್ಯಕ್ರಮದ ವೇಳೆ ದೇವಿ ಪಾತ್ರಧಾರಿಯೊಬ್ಬರಿಗೆ ಶಕ್ತಿ ಆವಾಹನೆಯಾಗಿ ಪ್ರೇಕ್ಷಕರನ್ನು ಬೆರಗುಗೊಳಿಸಿದ ಘಟನೆ ನಡೆದಿದೆ, ಸನ್ನಿವೇಶದ ವೀಡಿಯೋ ಚಿತ್ರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂದಿರದ ಮಹಿಳಾ ಮಂಡಲದ ಸದಸ್ಯರು ನವಶಕ್ತಿ ನೃತ್ಯ ವೈಭವಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದರು. ಅದು ಆ ದಿನದ ಕಾರ್ಯಕ್ರಮದ ಕೊನೆಯ ಭಾಗವಾಗಿತ್ತು.
ಮಹಿಷಾಸುರ ವಧೆಯ ಸನ್ನಿವೇಶ ಹತ್ತಿರವಾಗುತ್ತಿದ್ದಂತೆ ಮುಖ್ಯ ದೇವಿ ಪಾತ್ರಧಾರಿಯ ಹಿಂಭಾಗದಲ್ಲಿ ಮೂರನೆಯವರಾಗಿದ್ದ ದೇವಿ ಪಾತ್ರಧಾರಿಯೊಬ್ಬರು ಆವೇಶಗೊಂಡರು, ಖಡ್ಗ ಸಹಿತ ಕಂಪಿಸಲಾ ರಂಭಿಸಿದರು. ಇದನ್ನು ಗಮನಿಸಿದ ಆಕೆಯ ಹಿಂದಿದ್ದ ಪಾತ್ರಧಾರಿಗಳು ನಿಯಂತ್ರಣಕ್ಕೆ ಪ್ರಯತ್ನಿಸಿದರು. ಮಹಿಷಾಸುರ ವಧೆಯಾಗುತ್ತಿದ್ದಂತೆ ಆಕೆ ಖಡ್ಗ ಝಳಪಿಸುತ್ತಿರುವುದನ್ನು ಗಮನಿಸಿದ ಉಳಿದ ಪಾತ್ರಧಾರಿಗಳು ಮತ್ತು ವೇದಿಕೆಗೆ ಧಾವಿಸಿದ ಸಂಘಟಕರು ಆಕೆಯನ್ನು ಆಧರಿಸಿ ಹಿಡಿದುಕೊಂಡು ಉಪಚರಿಸಿದರು.
ಸೂಕ್ತ ಉಪಚಾರದ ಬಳಿಕ ಸ್ವಲ್ಪ ಹೊತ್ತಿನಲ್ಲೇ ಆಕೆ ಸಹಜ ಸ್ಥಿತಿಗೆ ತಲುಪಿದ್ದಾರೆ. ಈ ಸನ್ನಿವೇಶವನ್ನು ಕಾರ್ಯಕ್ರಮ ನೋಡಲು ಬಂದವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಈ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತ ಕುತೂಹಲ ಮೂಡಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್