ವಾಹನವಿದ್ದರೂ ಮಲ ಹೊರಲು ಕಾರ್ಮಿಕರ ಬಳಕೆ


Team Udayavani, Mar 11, 2018, 3:58 PM IST

mandya-2.jpg

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಶೌಚಾಲಯ ಪಿಟ್‌ನ್ನು ಬೆಸಗರಹಳ್ಳಿ ಪಂಚಾಯಿತಿ ಪೌರ ಕಾರ್ಮಿಕರು ಶುಚಿಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮದ ಅನಂತರಾಮು ಮನೆಯ ಶೌಚಾಲಯದ ಪಿಟ್‌ ಒಳಗಿದ್ದ ಮಲ ಗಟ್ಟಿಯಾಗಿದ್ದ ಕಾರಣ ಯಂತ್ರದ ಸಹಾಯದಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಪೌರ ಕಾರ್ಮಿಕರನ್ನು ಬಳಸಿಕೊಂಡು ಅದನ್ನು ತೆಗೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆದರೆ, ಸ್ಥಳ ಪರಿಶೀಲನೆ ನಡೆಸಿರುವ ಮದ್ದೂರು ತಾಪಂ ಇಒ, ಶೌಚಾಲಯದ ಫಿಟ್‌ ಶುಚಿಗೊಳಿಸಿರುವವರು ಪಂಚಾಯಿತಿ ಪೌರ ಕಾರ್ಮಿಕರಲ್ಲ, ಅವರು ಖಾಸಗಿ ವ್ಯಕ್ತಿಗಳು ಎಂಬುದಾಗಿ ಮಂಡ್ಯ ಜಿಪಂ ಸಿಇಒ ಶರತ್‌ ಅವರಿಗೆ ಸ್ಪಷ್ಟಪಡಿಸಿದ್ದಾರೆ. ಬೇರೆ ವ್ಯಕ್ತಿಗಳಿಂದ ಶೌಚಾಲಯದ ಫಿಟ್‌ ಶುಚಿಗೊಳಿಸಿದ್ದರೂ ಅದು ಅಪರಾಧವಾಗಿದ್ದು, ಮಾಲಿಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಘಟನೆ ಏನು: ಮದ್ದೂರು ತಾಲೂಕು ಕೆರೆಮೇಗಳದೊಡ್ಡಿ ಅನಂತರಾಮು ಮನೆಯ ಪಿಟ್‌ ಶುಚಿಗೊಳಿಸುವಂತೆ ಪಂಚಾಯಿತಿಗೆ ಮನವಿ ಮಾಡಲಾಗಿತ್ತು. ಅದರಂತೆ ಶುಕ್ರವಾರ ಸಕ್ಕಿಂಗ್‌ ವಾಹನದ ಮೂಲಕ ಪಿಟ್‌ ಒಳಗಿದ್ದ ಶೌಚದ ನೀರೆಲ್ಲವನ್ನೂ ಹೊರ ತೆಗೆಯಲಾಗಿತ್ತು. ಕೆಳಭಾಗದಲ್ಲಿದ್ದ ಘನರೂಪದ ಮಲವನ್ನು ಯಂತ್ರದಿಂದ ತೆಗೆಯಲು ಸಾಧ್ಯವಾಗಲ್ಲ. ಮತ್ತೆ ಶೌಚಗುಂಡಿ ಯೊಳಗೆ ನೀರು ಹಾಕಿ ಯಂತ್ರದ ಸಹಾಯದಿಂದಲೇ ಹೊರತೆಗೆಯ
ಬೇಕೆನ್ನುವುದು ನಿಯಮ. ಆದರೂ ಪೌರ ಕಾರ್ಮಿಕರಿಗೆ 2 ಸಾವಿರ ರೂ. ಹಣ ಕೊಟ್ಟು ಬರಿಗೈನಿಂದಲೇ ಮಲವನ್ನು ಹೊರತೆಗೆಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮಲವನ್ನು ಹೊರತೆಗೆಯುವ ಸಮಯದಲ್ಲಿ ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಗ್ಲೌಸ್‌ ಮತ್ತು ಶೂಗಳನ್ನು ನೀಡದೆ ಗುಂಡಿಗೆ ಇಳಿಸಲಾಗಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮಲವನ್ನು ಹೊರತೆಗೆಸುವ ಮೂಲಕ ಗ್ರಾಪಂ ಅಧಿಕಾರಿಗಳೇ ಅನಿಷ್ಠ ಪದ್ಧತಿಯನ್ನು ಜೀವಂತವಾಗಿ ಉಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಫಿಟ್‌ನೊಳಗೆ ಘನರೂಪದಲ್ಲಿ ಉಳಿದಿದ್ದ ಮಲವನ್ನು ಪೌರ ಕಾರ್ಮಿಕ ನಟರಾಜು ಪ್ಲಾಸ್ಟಿಕ್‌ ಟಬ್‌
ವೊಂದರಲ್ಲಿ ತುಂಬಿಕೊಡುತ್ತಿದ್ದರೆ ಅದನ್ನು ಹೊತ್ತ ಮಹಿಳೆಯೊಬ್ಬರು ಟ್ರ್ಯಾಕ್ಟರ್‌ನಲ್ಲಿ ಸುರಿಯುತ್ತಿದ್ದುದು ಕಂಡು ಬಂದಿದೆ. ಪೌರ ಕಾರ್ಮಿಕರು ಸೇರಿದಂತೆ ಖಾಸಗಿ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಮಲ ಹೊರುವಂತಹ ಅನಿಷ್ಠ ಪದ್ಧತಿಗೆ ಬಳಸಿಕೊಳ್ಳಬಾರದು ಎಂಬ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದ್ದರೂ ಅದಾವುದನ್ನೂ ಲೆಕ್ಕಿಸದೆ ಗ್ರಾಪಂ ಅಧಿಕಾರಿಗಳೇ ಮಲಹೊರುವ ಪದ್ಧತಿಯನ್ನು ಪೋಷಿಸುತ್ತಿರುವುದಕ್ಕೆ ಕೆರಮೇಗಳದೊಡ್ಡಿ ಪ್ರಕರಣ ಸಾಕ್ಷೀಭೂತ ವಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗ್ಲೌಸ್‌, ಶೂಗಳನ್ನೂ ಕೊಟ್ಟಿಲ್ಲ: ಸಕ್ಕಿಂಗ್‌ ಯಂತ್ರ ತಂದು ನೀರಿನ ರೂಪದಲ್ಲಿದ್ದ ತ್ಯಾಜ್ಯವನ್ನು ತುಂಬಿಸಿಕೊಂಡಿತು. ಆದರೆ, ಗಟ್ಟಿಯಾಗಿ ಉಳಿದಿದ್ದನ್ನು ತೆಗೆಯಲು ಸಾಧ್ಯವಾಗಲಿಲ್ಲ. ನಮಗೆ 2 ಸಾವಿರ ರೂ. ನೀಡಿ ಅದನ್ನು ತೆಗೆದುಬಿಡಿ. ಇಲ್ಲದಿದ್ದರೆ ಹೆಗ್ಗಣಗಳು ಗುಂಡಿ ತೋಡಿ ಇನ್ನಷ್ಟು ಅದ್ವಾನ ಎಬ್ಬಿಸುತ್ತವೆ ಎಂದದ್ದಕ್ಕೆ ಕೆಳಭಾಗದ ಮಣ್ಣಿನಲ್ಲಿ
ಸೇರಿಕೊಂಡಿದ್ದ ಘನರೂಪದ ಮಲವನ್ನು ಹೊರತೆಗೆದಿದ್ದೇವೆ. ಬೆಸಗರಹಳ್ಳಿ ಗ್ರಾಪಂ ಪೌರ ಕಾರ್ಮಿಕ ನಟರಾಜು ತಿಳಿಸಿದ್ದಾರೆ.

ನಮಗೆ ಇದುವರೆಗೂ ನಾವು ಕೆಲಸ ಮಾಡುವ ಸಮಯದಲ್ಲಿ ಸುರಕ್ಷಾ ಸಾಧನಗಳನ್ನು ನೀಡಿಲ್ಲ. ಪಂಚಾಯಿತಿಯಿಂದ ಇದುವರೆಗೂ ಯಾರೊಬ್ಬರಿಗೂ ಒಂದು ದಿನವೂ ಗ್ಲೌಸ್‌, ಶೂಗಳನ್ನೂ ಕೊಟ್ಟಿಲ್ಲ. ಪಿಡಿಒಗಳನ್ನು ಕೇಳ್ಳೋಣವೆಂದರೆ ದಿನಕ್ಕೊಬ್ಬರು ಪಿಡಿಒ ಬರುತ್ತಾರೆ. ನಾವು ಯಾರನ್ನಾ ಅಂತ ಕೇಳುವುದು. ಯುಗಾದಿಗೋ, ಸಂಕ್ರಾಂತಿಗೋ ಒಂದು ಪ್ಯಾಂಟು, ಅಂಗಿ ಕೊಡ್ತಾರೆ. ಆಮೇಲೆ ಏನನ್ನೂ ಕೊಡುವುದಿಲ್ಲ ಎಂದರು.

ಕೆರಮೇಗಳದೊಡ್ಡಿಯಲ್ಲಿ ಮಲ ಹೊರುವ ಪದ್ಧತಿ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ತಾಪಂ ಇಒಗೆ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದೆ. ಪಂಚಾಯಿತಿ ಪೌರಕಾರ್ಮಿಕರಲ್ಲ ಎಂದು ವರದಿ ನೀಡಿದ್ದರು. ಆದರೂ ಪಂಚಾಯಿತಿ ಪೌರಕಾರ್ಮಿಕರೆಲ್ಲರ ಭಾವಚಿತ್ರ ಸಹಿತ ವರದಿ ಕಳುಹಿಸುವಂತೆ ಸೂಚಿಸಿದ್ದೇನೆ. ಯಾರೇ ಆದರೂ ಮಲ
ಹೊರಿಸಿರುವುದು ಕಾನೂನು ರೀತಿ ಅಪರಾಧ. ಬರಿಗೈಲಿ ಮಲ ಎತ್ತಿ ಹಾಕಿಸಿರುವ ಮಾಲಿಕನ ವಿರುದ್ಧವೂ
ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ.
ಶರತ್‌, ಸಿಇಒ, ಜಿಪಂ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.