ಕಾಡ್ಗಿಚ್ಚಿಗೆ ಬಲಿಯಾದ ಟ್ರೆಕ್ಕಿಂಗ್ ಪ್ರೇಮ
Team Udayavani, Mar 14, 2018, 2:52 PM IST
ಕೊಯಮತ್ತೂರು: ಆ ಹುಡುಗಿಯ ಹೆಸರು ದಿವ್ಯಾ. ಕೊಯಮತ್ತೂರಿನ ಕಿನಾದುಕಡವು ಊರಿನವರು. ಎಂ.ಇ. ಪದವೀಧರೆ. ಟ್ರೆಕ್ಕಿಂಗನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಆಕೆ, ತನ್ನ ಬಾಳ ಸಂಗಾತಿಯೂ ತನ್ನಂತೆಯೇ ಟ್ರೆಕ್ಕಿಂಗ್ ಇಷ್ಟಪಡುವಂಥವನಾಗಿರಬೇಕೆಂದು ಕನಸು ಕಂಡಿದ್ದಳು. ಹಾಗಾಗಿಯೇ, ಟ್ರೆಕ್ಕಿಂಗ್ನಲ್ಲೇ ಭೇಟಿಯಾದ ವಿಬಿನ್ ಎಂಬಾತನನ್ನು ಪ್ರೀತಿಸಿ ಮದುವೆ ಯಾಗಿದ್ದಳು. ಆದರೀಗ, ವಿಧಿ ಯೆಂಬುದು ಅವರಿಬ್ಬರ ಪ್ರೀತಿಯನ್ನು ಟ್ರೆಕ್ಕಿಂಗ್ನಲ್ಲಿಯೇ ಅಂತ್ಯಗೊಳಿಸಿದೆ.
ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಅರಣ್ಯದಲ್ಲಿ ಟ್ರಿಕ್ಕಿಂಗ್ನಲ್ಲಿ ನಿರತರಾಗಿದ್ದ ತಂಡವೊಂದು ಭಾನುವಾರದ ಕಾಡ್ಗಿಚ್ಚಿಗೆ ಸಿಲುಕಿದಾಗ ಮೃತಪಟ್ಟ 9 ಮಂದಿಯಲ್ಲಿ ದಿವ್ಯಾ ಅವರ ಪತಿ ವಿಬಿನ್ ಸಹ ಒಬ್ಬರು. ಅತ್ತ, ದಿವ್ಯಾ ಅವರಿಗೂ ಶೇ. 90ರಷ್ಟು ಸುಟ್ಟಗಾಯಗಳಾಗಿದ್ದು, ಸದ್ಯಕ್ಕೆ ಮಧುರೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಮತ್ತೂಂದು ಘೋರ ವೆಂದರೆ, ಈ ಟ್ರೆಕ್ಕಿಂಗ್ ಆಯೋಜಕರಲ್ಲಿ ದಿವ್ಯಾ ಸಹ ಒಬ್ಬರು. ತಾವು ಸಹ ಆಯೋಜಕರಾಗಿದ್ದ ಕಾರ್ಯಾಚರಣೆ ಯಲ್ಲೇ ಪತಿಯನ್ನೂ ಕಳೆದುಕೊಂಡಿರು ವುದು ದುರ್ದೈವದ ಸಂಗತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್