ಅಂಗನವಾಡಿ ಸಹಾಯಕಿಗೆ ವಿದಾಯಕೂಟ
Team Udayavani, Mar 22, 2018, 10:40 AM IST
ಕೇಪು: ಕೇಪು ಗ್ರಾಮದ ಅಮೈ ಅಂಗನವಾಡಿಯಲ್ಲಿ ಸಹಾಯಕಿಯಾಗಿ 20 ವರ್ಷ ದುಡಿದು, ನಿವೃತ್ತಿ ಹೊಂದಿದ ಲಲಿತಾ ಐತ್ತಪ್ಪ ನಾಯ್ಕ ಅವರಿಗೆ ಇಲಾಖೆ ಹಾಗೂ ಊರಿನ ಗಣ್ಯರ ವತಿಯಿಂದ ವಿದಾಯ ಕೂಟ ಏರ್ಪಡಿಸಲಾಯಿತು. ಕೇಪು ಗ್ರಾ.ಪಂ. ಸದಸ್ಯ-ಬಾಲವಿಕಾಸ ಸಮಿತಿಯ ಅಧ್ಯಕ್ಷ ವಿಠ್ಠಲ ನಾಯ್ಕ ಕೋಪ್ರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ ರೈ ಕುಂಡಕೋಳಿ, ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು, ಗ್ರಾ.ಪಂ. ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಶಿಶು ಅಭಿವೃದ್ಧಿ ಅಧಿಕಾರಿ ಸುಧಾ ಜೋಶಿ, ಅಮೈ ಶಾಲೆಯ ನಿವೃತ್ತ ಶಿಕ್ಷಕಿ ರತ್ನಾವತಿ ಎಚ್.ಎಂ., ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷ ದಿವಾಕರ ಮಾತನಾಡಿದರು.
ವಲಯದ ಅಂಗನವಾಡಿ ಮೇಲ್ವಿಚಾರಕಿ ಲೋಲಾಕ್ಷಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಲೀಲಾ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮಾಲತಿ ನಿರೂಪಿಸಿದರು. ಪುಟಾಣಿಗಳು, ಹೆತ್ತವರು ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು. ಹೆತ್ತವರು ಹಾಗೂ ಸ್ತ್ರೀಶಕ್ತಿ ಸಂಘ ಗುಂಪಿನವರು ಶಾಲೆಗೆ ಕೊಡುಗೆ ನೀಡಿದರು.