ಆಹಾರ್: ತಾರ್ದೇವ್ನಲ್ಲಿ ಉಚಿತ ಆರೋಗ್ಯ ತಪಾಸಣೆ
Team Udayavani, Mar 22, 2018, 3:47 PM IST
ಮುಂಬಯಿ: ಆಹಾರ್ ವತಿಯಿಂದ ಕಾರ್ಮಿಕರ ಕಲ್ಯಾಣ ಯೋಜನೆಯ ಅಡಿಯಲ್ಲಿ ಹೊಟೇಲ್ ಕಾರ್ಮಿಕರಿಗೆ ಉಚಿತ ಕಣ್ಣಿನ ಪರೀಕ್ಷೆ ಮತ್ತು ಆರೋಗ್ಯ ತಪಾಸಣಾ ಶಿಬಿರವು ಮಾ. 16 ರಂದು ತಾರ್ದೇವ್ ಪರಿಸರದ ಹೊಟೇಲ್ ಗೋಲ್ಡ್ ಕಾಯಿನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.
ಎಸ್ಎಲ್ ರಹೇಜಾ ಹಾಸ್ಪಿಟಲ್ನ ವೈದ್ಯರು ಹಾಗೂ ಸಿಬಂದಿಗಳು ಹಾಗೂ ನ್ಯಾಷನಲ್ ಅಸೋಸಿಯೇಶನ್ ಫಾರ್ ದಿ ಬ್ಲೆçಂಡ್ ಸಂಸ್ಥೆಯವರು ಶಿಬಿರದಲ್ಲಿ ಪಾಲ್ಗೊಂಡು ಸಹಕರಿಸಿದರು. ಸುಮಾರು 150 ಕ್ಕೂ ಅಧಿಕ ಹೊಟೇಲ್ ಕಾರ್ಮಿಕರು ಕಣ್ಣಿನ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು. ಆಹಾರ್ ವಲಯ ಎರಡರ ಆಯೋಜನೆಯಲ್ಲಿ ಶಿಬಿರವು ನಡೆಯಿತು.
ಆಹಾರ್ ವಲಯ ಎರಡರ ಉಪಾಧ್ಯಕ್ಷ ಕೆ. ವಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಶಿಬಿರದಲ್ಲಿ ಸ್ಥಳೀಯ ವಿವಿಧ ಹೊಟೇಲ್ಗಳ ಮಾಲಕರು, ಆಹಾರ್ನ ವಿವಿಧ ವಲಯಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.