ಜಲಮೂಲಗಳ ಉಳಿವಿಗೆ ಕ್ರಮ ಅಗತ್ಯ: ಸದ್ಗುರು
Team Udayavani, Mar 23, 2018, 10:20 AM IST
ವಿಶ್ವಸಂಸ್ಥೆ: ಮುಂದಿನ ತಲೆಮಾರಿಗೆ ನೀರಿನ ಮೂಲಗಳನ್ನು ಉಳಿಸುವುದೇ ಗಂಭೀರ ಸವಾಲಾಗಿ ಪರಿಣಮಿಸಿದೆ ಎಂದು ಆಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ. ವಿಶ್ವಸಂಸ್ಥೆ ಪ್ರದಾನ ಕಚೇರಿಯಲ್ಲಿ ಏರ್ಪಡಿಸಿದ್ದ ನೀರು, ನೈರ್ಮಲ್ಯ ಮತ್ತು ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಅವರು, ಜಗತ್ತಿನ ಮೂಲಗಳನ್ನು ಉಳಿಸುವ ನಿರ್ಣಾಯಕ ಯೋಜನೆ ಕೈಗೊಂಡರೆ ಮುಂದಿನ 15ರಿಂದ 20 ವರ್ಷಗಳಲ್ಲಿ ಶೇ.20ರಷ್ಟು ನೀರನ್ನು ಜಗತ್ತಿಗೆ ಮರಳಿಸಬಹುದು. ಕೂಡಲೇ ನಾವು ಈ ಕ್ರಮ ಕೈಗೊಳ್ಳದಿದ್ದರೆ ಇನ್ನು 150 ವರ್ಷಗಳಾದರೂ ನದಿ ಮೂಲಗಳನ್ನು ಉಳಿಸಲಾಗುವುದಿಲ್ಲ ಎಂದರು.