ವರ್ಷದ ಸರ್ವಶ್ರೇಷ್ಠ ವಿದ್ಯಾರ್ಥಿ ಪುರಸ್ಕಾರ


Team Udayavani, Mar 23, 2018, 8:09 PM IST

5.jpg

ಕುಮಟಾ: ಇಲ್ಲಿನ ಕೆನರಾ ಕಾಲೇಜು ಸೊಸೈಟಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಏಳು ವಿದ್ಯಾರ್ಥಿಗಳನ್ನು ಗುರುತಿಸಿ ವರ್ಷದ
ಸರ್ವಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ಪ್ರದಾನ ಸಮಾರಂಭ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಆವರಣದಲ್ಲಿ ನಡೆಯಿತು.

ಪಿಯು ವಿಜ್ಞಾನ ವಿಭಾಗದಿಂದ ರಾಮದಾಸ ಕಮಲಾಕಾಂತ ಕಾಮತ, ಪಿಯು ವಿಭಾಗದಿಂದ ಸಿದ್ಧಾರ್ಥ ಅರುಣ ಕುಮಟಾಕರ, 
ಡಿಪ್ಲೋಮಾದಿಂದ ಸಂದೇಶ ಕೃಷ್ಣ ಶೆಟ್ಟಿ, ಬಿಬಿಎದಿಂದ ಗುರುಪ್ರಸಾದ ಮಹಾಬಲೇಶ್ವರ ಹೆಗಡೆ, ವಾಣಿಜ್ಯ ಪದವಿ ವಿಭಾಗದಿಂದ ಭಾಸ್ಕರ ಈಶ್ವರ ಮರಾಠಿ, ವಿಜ್ಞಾನ ಪದವಿ ವಿಭಾಗದಿಂದ ಅಪೂರ್ವ ಗೋಪಾಲ ಹೆಗಡೆ ಹಾಗೂ ಬಿಎಡ್‌ನಿಂದ ಮಾಝಿ°ಯಾ ಮಹಮ್ಮದ ಗೌಸ್‌ ಬೇಗ್‌ ವರ್ಷದ ಸರ್ವಶ್ರೇಷ್ಠ ವಿದ್ಯಾರ್ಥಿ ಪುರಸ್ಕಾರಕ್ಕೆ ಪಾತ್ರರಾದರು.

ಭಟ್ಕಳದ ಗುರುಸುಧೀಂದ್ರ ಕಾಲೇಜಿನ ಪ್ರಾಚಾರ್ಯ ನಾಗೇಶ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿ ದೆಸೆಯಲ್ಲಿನ ನಿಮ್ಮ 
ಧ್ಯೇಯಗಳೇ ಮುಂದೆ ನಿಮ್ಮ ಬದುಕಿನ ಅಕ್ಷಾಂಶ ರೇಖಾಂಶಗಳನ್ನು ನಿರ್ಧರಿಸುತ್ತವೆ. ಆತ್ಮವಿಶ್ವಾಸದಿಂದ ಗುರಿಯೆಡೆಗೆ ಸಾಗಿದರೆ
ಸಫಲತೆ ಕಟ್ಟಿಟ್ಟ ಬುತ್ತಿ ಎಂದರು.

ವಿಪ್ರೋ, ಗೂಗಲ್‌, ಮೈಕ್ರೋಸಾಫ್ಟ, ಇನ್ಫೋಸಿಸ್‌ನಂತಹ ಅತ್ಯುತ್ತಮ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ನೀಡುವ
ಸಾಮರ್ಥ್ಯ ಹಾಗೂ ಅರ್ಹತೆ ಇಲ್ಲಿನ ಶಿಕ್ಷಣ ಸಂಸ್ಥೆಗಳಿಗಿರುವುದು ಉತ್ತರ ಕನ್ನಡ ಜಿಲ್ಲೆಯ ಸಾಧನೆ. ಬಾಳಿಗಾ ಕಾಲೇಜಿನಿಂದ
ಪಳಗಿ ಸಾವಿರಾರು ಮಂದಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಸಮಾಜ ಮತ್ತು ಬದುಕಿನಲ್ಲಿ ಪರಿಣಾಮಕಾರಿ ಬದಲಾವಣೆ ತರುವುದೇ
ಶಿಕ್ಷಣದ ಉದ್ದೇಶವಾಗಿದ್ದು ಕೇವಲ ಉದ್ಯೋಗ ಮಾಡುವಂಥ ಉತ್ಪನ್ನವಾಗಬಾರದು. ವಿದ್ಯಾರ್ಥಿಗಳಲ್ಲೇ ಶಿಕ್ಷಕರ ಅಸ್ತಿತ್ವ ಇರುತ್ತದೆ.
ವಿದ್ಯಾರ್ಥಿಗಳ ಸಫಲತೆಯಲ್ಲಿ ಶಿಕ್ಷಕರ ಧನ್ಯತೆ ಇದೆ ಎಂದರು.

ಕೆನರಾ ಕಾಲೇಜು ಸೊಸೈಟಿ ಅಧ್ಯಕ್ಷ ರಘು ಪಿಕಳೆ ಅಧ್ಯಕ್ಷತೆ ವಹಿಸಿ, ಕೆನರಾ ಕಾಲೇಜು ಸೊಸೈಟಿ ಆರಂಭಿಸಿ ಜಿಲ್ಲೆಯ ಶಿಕ್ಷಣ ಕ್ರಾಂತಿಗೆ
ಕಾರಣರಾದ ಡಾ| ಎ.ವಿ.ಬಾಳಿಗಾರವರ ಜೀವನ ವಿಶೇಷಗಳನ್ನು ವಿವರಿಸಿದರು. ಸೊಸೈಟಿ ಕಾರ್ಯಾಧ್ಯಕ್ಷ ಮುರಲೀಧರ
ಪ್ರಭು, ಉಪಾಧ್ಯಕ್ಷ ರತ್ನಾಕರ ಕಾಮತ, ಪ್ರಾಚಾರ್ಯ ಎಸ್‌.ಜಿ. ರಾಯ್ಕರ, ಎನ್‌.ಜಿ. ಹೆಗಡೆ, ಯು.ಜಿ. ಶಾಸ್ತ್ರಿ, ಜಯರಾಮ ಭಟ್ಟ,
ರತನ್‌ ಗಾಂವಕರ, ವೀಣಾ ಕಾಮತ ಮತ್ತಿತರರು ಇದ್ದರು.

ಕಾರ್ಯದರ್ಶಿ ಎಲ್‌.ವಿ. ಶಾನಭಾಗ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಿನೋದ ಪ್ರಭು ವಂದಿಸಿದರು. ಪ್ರೊ| ಜಿ.ಡಿ.ಭಟ್ಟ, ಪ್ರೀತಿ ಭಂಡಾರಕರ ನಿರೂಪಿಸಿದರು. ಡಾ| ಜಿ.ಎಲ್‌. ಹೆಗಡೆ, ಡಿ.ಡಿ.ಭಟ್ಟ, ಎಂ.ಕೆ. ಶಾನಭಾಗ ಮತ್ತಿತರರು ಪುರಸ್ಕೃತ
ವಿದ್ಯಾರ್ಥಿಗಳನ್ನು ಬಣ್ಣಿಸಿದರು.  ಪ್ರಮುಖರಾದ ಜೀವನ ಕವರಿ, ಸುಧಾಕರ ನಾಯಕ, ಪುರುಷೋತ್ತಮ ಹೆಗಡೆಕರ, ಅಶೋಕ
ಪಿಕಳೆ, ಡಾ| ಸಿ.ಎಸ್‌. ವೆರ್ಣೇಕರ, ಸಿರೀಸ್‌ ನಾಯ್ಕ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.