ತಾಯಿ ಬೈದಳೆಂಬ ಕಾರಣಕ್ಕೆಮೋರಿಗೆ ಬಿದ್ದ ಬಾಲಕಿ ಸಾವು
Team Udayavani, Mar 24, 2018, 10:41 AM IST
ಬೆಂಗಳೂರು: ಮನೆ ಗಲೀಜು ಮಾಡಿದ್ದಕ್ಕೆ ಕೋಪಗೊಂಡ ತಾಯಿ ಬೈದಳು ಎಂಬ ಕಾರಣಕ್ಕೆ ಬೇಸರಗೊಂಡ ಬಾಲಕಿ ರಾಜಕಾಲುವೆಗೆ ಬಿದ್ದು ಮೃತಪಟ್ಟ ಘಟನೆ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಕೆಂಚೇನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಅರ್ಷಿತಾ (14) ಮೃತ ಬಾಲಕಿ. ರಾಜೇಶ್ವರಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅರ್ಷಿತಾ, ಗುರುವಾರ ಸಂಜೆ ಶಾಲೆ ಮುಗಿದ ನಂತರ ಸ್ನೇಹಿತರನ್ನು ಮನೆಗೆ ಕರೆತಂದು, ಆಟವಾಡಿ, ಮನೆ ಗಲೀಜು ಮಾಡಿದ್ದಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಾಲಕಿ ತಾಯಿ ಚಂದ್ರಾ ಬಾಯಿ, ಸಂಜೆ ಮನೆಗೆ ಬಂದಾಗ ಗಲೀಜು ಆಗಿರುವುದನ್ನು ಕಂಡು ಮಗಳ ಮೇಲೆ ಹರಿಹಾಯ್ದು, ಕೋಪದಲ್ಲಿ ಎರಡೇಟು ಹೊಡೆದಿದ್ದಾರೆ.
ಇದಕ್ಕೆ ಬೇಸರಗೊಂಡು ಮನೆಯಿಂದ ಆಚೆ ಹೋದ ಅರ್ಷಿತಾ, ರಾತ್ರಿಯಾದರೂ ಮನೆಗೆ ಬಂದಿಲ್ಲ. ಆತಂಕಗೊಂಡ ತಾಯಿ, ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ ಕೆಂಗೇರಿ ರಾಜಕಾಲುವೆ ಸಂಪರ್ಕಿಸುವ ಮೋರಿ ಬಳಿ ಹೋಗುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ. ರಾಜಕಾಲುವೆ ಬಳಿ ಶೋಧ ನಡೆಸಿದರೂ ಸಿಗದಿದ್ದಾಗ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆರ್.ಆರ್.ನಗರ ಪೊಲೀಸರಿಗೆ ಗುರುವಾರ ರಾತ್ರಿ ದೂರು ನೀಡಿದ್ದರು.
ದೂರಿನನ್ವಯ ಶುಕ್ರವಾರ ಬೆಳಗ್ಗೆ ಪೊಲೀಸರು ರಾಜಕಾಲುವೆಯಲ್ಲಿ ಹುಡುಕಾಡಿದಾಗ ಬಾಲಕಿ ಶವ ಪತ್ತೆಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ, ಪೋಷಕರಿಗೆ ದೇಹ ಹಸ್ತಾಂತರಿಸಲಾಗಿದೆ. ಬಾಲಕಿಯು ರಾಜಕಾಲುವೆಗೆ ತಾನಾಗೇ ಬಿದ್ದಳ್ಳೋ ಅಥವಾ ಕಾಲು ಜಾರಿ ಬಿದ್ದಿದ್ದಾಳ್ಳೋ ಎಂಬ ಬಗ್ಗೆ ಗೊಂದಲವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್