ಪೇಚಿಗೆ ಸಿಲುಕಿದ ಚಿದು
Team Udayavani, Mar 26, 2018, 9:55 AM IST
ಹೊಸದಿಲ್ಲಿ: ಟೀ ಬೆಲೆ ದುಬಾರಿಯಾಗಿದೆ ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕ ಚಿದಂಬರಂ ಪೇಚಿಗೆ ಸಿಲುಕಿದ ಸುದ್ದಿಯಿದು. ಚೆನ್ನೈ ಏರ್ಪೋರ್ಟ್ನಲ್ಲಿ ಒಂದು ಕಪ್ ಟೀಗೆ 135 ರೂ. ಎಂದು ಹೇಳಿದ್ದಕ್ಕೆ ಅದನ್ನು ನಿರಾಕರಿಸಿ ಬಂದೆ. ನಾನು ಮಾಡಿದ್ದು ಸರಿಯಲ್ಲವೇ ಎಂದು ಪ್ರಶ್ನಿಸಿ ಚಿದಂಬರಂ ರವಿವಾರ ಟ್ವೀಟ್ ಮಾಡಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಪುತ್ರ ಕಾರ್ತಿ ಚಿದಂಬರಂ ಅವರ ಅವ್ಯವಹಾರ ಪ್ರಕರಣವನ್ನು ಬಳಸಿಕೊಂಡು, ಮಾಜಿ ವಿತ್ತ ಸಚಿವರಿಗೆ ಟ್ವೀಟಿಗರು ಹಿಗ್ಗಾಮುಗ್ಗಾ ಲೇವಡಿ ಮಾಡತೊಡಗಿದರು. ಕಾರ್ತಿ ಚಿದಂಬರಂ ಬಳಿ ಬೇಕಾದಷ್ಟು ಹಣವಿದೆಯಲ್ಲಾ? ಅಭಿಷೇಕ್ ಸಿಂಘ್ವಿಯಂಥ ದುಬಾರಿ ಲಾಯರ್ ಇಟ್ಟುಕೊಳ್ಳಲು ಸಾಧ್ಯವಾದವರಿಗೆ ಕನಿಷ್ಠ ಪಕ್ಷ 135 ರೂ. ಕೊಡಲು ಆಗಲಿಲ್ಲವೇ ಎಂದು ಒಬ್ಬರು ಕೇಳಿದರೆ, ಮತ್ತೂಬ್ಬರು ತಿಹಾರ್ ಜೈಲಿನಲ್ಲಿ ಫ್ರೀಯಾಗಿ ಟೀ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.