ದೀಪಾ ಕರ್ಮಾಕರ್‌ ಗುರಿ ಏಶ್ಯನ್‌ ಗೇಮ್ಸ್‌


Team Udayavani, Apr 2, 2018, 6:25 AM IST

Deepa-Karmakar-targets-Asia.jpg

ಹೊಸದಿಲ್ಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ವಿಶ್ವದ ಗಮನ ಸೆಳೆದ ಭಾರತದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್‌ ಅವರಿಗೆ ಕಾಮನ್ವೆಲ್ತ್‌ ಗೇಮ್ಸ್‌ ವೇಳೆ ಕಂಟಕ ಎದುರಾಗಿದೆ. ಗಾಯಾಳಾಗಿರುವ ಅವರು ಗೋಲ್ಡ್‌ ಕೋಸ್ಟ್‌ಗೆ ತೆರಳುವುದಿಲ್ಲ. ಇದರಿಂದ ಭಾರತಕ್ಕೆ ಜಿಮ್ಮಾಸ್ಟಿಕ್‌ ಪದಕವೊಂದು ಕೈತಪ್ಪಿದೆ ಎಂದೇ ಹೇಳಬಹುದು.

ಗಾಯಾಳಾದರೂ ಇತ್ತೀಚೆಗೆ ಅಭ್ಯಾಸವನ್ನು ಪುನರಾರಂಭಿಸಿದ ದೀಪಾ, ಹೆಚ್ಚಿನ ಅಭ್ಯಾಸ ಹಾಗೂ ತರಬೇತಿಗಾಗಿ ಮಾಸ್ಕೋಗೆ ತೆರಳಲಿದ್ದಾರೆ. ಅಲ್ಲಿ ಒಂದು ತಿಂಗಳ ಕಾಲ ದೀಪಾ ಕಠಿನ ತರಬೇತಿಯಲ್ಲಿ ತೊಡಗಲಿದ್ದಾರೆ. ಅವರ ಮುಂದಿನ ಗುರಿ ಏಶ್ಯಾಡ್‌ ಪಂದ್ಯಾವಳಿ ಎಂದು ದೀಪಾ ಅವರ ಕೋಚ್‌ ಬಿಶ್ವೇಶ್ವರ್‌ ನಂದಿ ತಿಳಿಸಿದ್ದಾರೆ.

“ದೀಪಾ ಅವರ ಪುನಶ್ಚೇತನ ಪ್ರಕ್ರಿಯೆ ಉತ್ತಮವಾಗಿ ಸಾಗಿದೆ. ಅಭ್ಯಾಸ ಆರಂಭಿಸಿದ್ದಾರೆ. ವಾಲ್ಟ್ನ ಮೂಲಭೂತ ಅಂಶಗಳತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಒಮ್ಮೆ ಸ್ಥಿರತೆ ಸಾಧಿಸಿದ ಬಳಿಕ ಅಪಾಯಕಾರಿ ಪ್ರೊಡಿನೋವಾದತ್ತ ಗಮನ ಹರಿಸಲಿದ್ದಾರೆ’ ಎಂದು ನಂದಿ ಹೇಳಿದರು.

ರಿಯೋದಲ್ಲಿ 4ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದ ಬಳಿಕ ದೀಪಾ ಕರ್ಮಾಕರ್‌ ವಿಶ್ವ ಮಟ್ಟದ ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಂಡಿಲ್ಲ. 24ರ ಹರೆಯದ ದೀಪಾ ಮೊದಲ ಏಶ್ಯಾಡ್‌ ಪದಕದತ್ತ ಗುರಿ ನೆಟ್ಟಿದ್ದಾರೆ. “ಕಾಮನ್ವೆಲ್ತ್‌ ಗೇಮ್ಸ್‌ಗಿಂತ ಏಶ್ಯನ್‌ ಗೇಮ್ಸ್‌ ಸವಾಲು ಕಠಿನವಾದದ್ದು. ಇಲ್ಲಿ ಚೀನ ಮತ್ತು ದಕ್ಷಿಣ ಕೊರಿಯಾದ ಬಲವಾದ ಸ್ಪರ್ಧೆ ಎದುರಿಸಬೇಕಿದೆ. ಹೀಗಾಗಿ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (ಟಾಪ್‌) ಯೋಜನೆಯಡಿ ದೀಪಾ ರಶ್ಯಕ್ಕೆ ತೆರಳುತ್ತಿದ್ದಾರೆ’ ಎಂದು ಕೋಚ್‌ ಸ್ಪಷ್ಟಪಡಿಸಿದರು. ಸದ್ಯ ದೀಪಾ ಮತ್ತು ಕೋಚ್‌ ನಂದಿ ಅಗರ್ತಲಾಕ್ಕೆ ತೆರಳಿ 2 ವಾರಗಳ ವಿಶ್ರಾಂತಿ ಪಡೆಯಲಿದ್ದಾರೆ.

ಗೇಮ್ಸ್‌ ಪದಕದ ವಿಶ್ವಾಸ
ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ದೀಪಾ ಕರ್ಮಾಕರ್‌ ಬದಲು ಪ್ರಣತಿ ನಾಯಕ್‌ ಸ್ಥಾನ ಪಡೆದಿದ್ದಾರೆ. ಬಿ. ಅರುಣಾ ರೆಡ್ಡಿ ಮತ್ತು ಪ್ರಣತಿ ದಾಸ್‌ ಉಳಿದಿಬ್ಬರು ಸ್ಪರ್ಧಿಗಳು. ಈ ಮೂವರಿಂದ ಪದಕವನ್ನು ನಿರೀಕ್ಷಿಸಬಹುದಾಗಿದೆ ಎಂಬುದು ಬಿಶ್ವೇಶ್ವರ್‌ ನಂದಿ ಅವರ ನಂಬಿಕೆ.

“ಪ್ರಣತಿ ನಾಯಕ್‌ ವಾಲ್ಟ್ ಪರಿಣಿತೆ. 3ರಿಂದ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಣತಿ ದಾಸ್‌ ಬೀಮ್‌ನಲ್ಲಿ ಫೈನಲ್‌ ತಲುಪುವುದು ಬಹುತೇಕ ಖಚಿತ. ಅರುಣಾ ರೆಡ್ಡಿ ಇತ್ತೀಚೆಗಷ್ಟೇ ಮೆಲ್ಬರ್ನ್ ವರ್ಲ್ಡ್ ಕಪ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭರವಸೆ ಮೂಡಿಸಿದ್ದಾರೆ’ ಎಂದು ನಂದಿ ಹೇಳಿದರು.

“ಜಿಮ್ನಾಸ್ಟಿಕ್‌ನಲ್ಲಿ ಪದಕ ಖಚಿತ ಎಂದು ಹೇಳಲಾಗದು. ಇದು ಅನಿಶ್ಚಿತತೆಗಳ ಸ್ಪರ್ಧೆ. ಒಂದು ಕಳಪೆ ಲ್ಯಾಂಡಿಂಗ್‌ ಇಡೀ ಅವಕಾಶವನ್ನು ಹಾಳುಗೆಡವಬಹುದು. ಆದರೆ ನಾವು ಭರವಸೆ ಇರಿಸಿಕೊಳ್ಳೋಣ…’ ಎಂದು ನಂದಿ ಹೇಳಿದರು.

ಟಾಪ್ ನ್ಯೂಸ್

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

ಆನೆ ಕಂಡು ಚರಂಡಿಗೆ ಇಳಿದ ಬೊಲೆರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ

ಈ ದೇವಸ್ಥಾನದಲ್ಲಿ ನಡೆಯುತ್ತದೆ ನೂರಾರು ಪ್ರೇತ ಮದುವೆ!

ಈ ದೇವಸ್ಥಾನದಲ್ಲಿ ನಡೆಯುತ್ತದೆ ನೂರಾರು ಪ್ರೇತ ಮದುವೆ!

Horoscope: ಈ ರಾಶಿಯವರ ಬಂಧುವರ್ಗದಲ್ಲಿ ವಿವಾಹ ನಿಶ್ಚಯವಾಗಲಿದೆ

Horoscope: ಈ ರಾಶಿಯವರ ಬಂಧುವರ್ಗದಲ್ಲಿ ವಿವಾಹ ನಿಶ್ಚಯವಾಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqe

Play Off ಸಡಗರದಲ್ಲಿರುವ ಕೆಕೆಆರ್‌ ಎದುರಾಳಿ: ಪವಾಡದ ನಿರೀಕ್ಷೆಯಲ್ಲಿ ಗುಜರಾತ್‌

1-qweeqweqw

IPL ಕೊಹ್ಲಿ ಸ್ಮರಣೀಯ 250 ನೇ ಪಂದ್ಯ: ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಜಯದ ನಗು

1-wewwqe

KKR ವೇಗಿ ರಮಣ್‌ದೀಪ್‌ಗೆ ದಂಡ

1-qwe-ewqe

IPL ಸೀಸನ್‌ನಲ್ಲಿ ಸಾವಿರ ಸಿಕ್ಸರ್‌ಗಳ ಹ್ಯಾಟ್ರಿಕ್‌

1-qwewwqqwe

MS Dhoni ಕೊನೆ ಪಂದ್ಯ ಸುದ್ದಿ; ಖಂಡಿತವಾಗಿಯೂ…ಸುರೇಶ್ ರೈನಾ ಹೇಳಿದ್ದೇನು?

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

3

Sandalwood: ನಿರುದ್ಯೋಗದ ಸುತ್ತ ಗಾಂಧಿನಗರ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

ಆನೆ ಕಂಡು ಚರಂಡಿಗೆ ಇಳಿದ ಬೊಲೆರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.