ಅಲೆದಾಟ ಆರಂಭ
Team Udayavani, Apr 3, 2018, 11:42 AM IST
ಎಸ್.ಜಿ.ಎ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ.ಶಿವರಾಜ್ ಹಾಗೂ ಅರುಣ್ ಟಿ.ಎನ್ ನಿರ್ಮಿಸುತ್ತಿರುವ “ಅಲೆದಾಟ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆಲಮಂಗಲದ ಪವಾಡ ಶ್ರೀಬಸವಣ್ಣದೇವರ ಮಠದಲ್ಲಿ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆರಂಭ ಫಲಕ ತೋರಿದರು. ಶ್ರೀಬಸವರಮಾನಂದ ಸ್ವಾಮಿಗಳು ಕ್ಯಾಮೆರಾ ಚಾಲನೆ ಮಾಡಿದರು.
ರವಿಚಂದ್ರ.ವಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಸಕಲೇಶಪುರ, ರಾಯಚೂರು ಹಾಗೂ ತೀರ್ಥಹಳ್ಳಿಯಲ್ಲಿ ನಲವತ್ತೆ„ದು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ವರ್ಣ ಬ್ರದರ್ಸ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಶಿವು ಚನ್ನಪಟ್ಟಣ ಅವರ ಛಾಯಾಗ್ರಹಣವಿದೆ.
ದುರ್ಗ ಪಿ.ಎಸ್ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಶಿವು ಬರೆದಿದ್ದಾರೆ. ಚಂದು ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಸುಮ. ರುದ್ರೇಶ್, ಪ್ರಕೃತಿ ಕೋಟ್ಯಾನ್, ಗುರುರಾಜ ಹೊಸಕೋಟೆ, ಮೈಕಲ್ ಮಧು, ಮಲ್ಲಿಕಾರ್ಜುನ್, ಅಶೋಕ್ ಕುಮಾರ್ ವಿ, ಮಾಸ್ಟರ್ ಪೃಥ್ವಿ, ಡಾ.ಶಿವರಾಜ್, ಬೇಬಿ ಹೇಮಶ್ರೀ, ರಾಧಾ ಕೆಂಪೇಗೌಡ, ವೇದವತಿ, ಶಿವಾನಂದ್ ಮುಂತಾದವರಿದ್ದಾರೆ.