ಪಾರುಲ್ಗೆ ಮೈಸೂರಿನಲ್ಲಿ ಮನೆಮಾಡುವಾಸೆ
Team Udayavani, Apr 9, 2018, 11:26 AM IST
ಒಮ್ಮೆ ಮೈಸೂರಿಗೆ ಭೇಟಿ ಕೊಟ್ಟವರು ಅಲ್ಲಿಗೆ ಮತ್ತೆ ಮತ್ತೆ ಭೇಟಿ ಕೊಡಲು ಬಯಸುತ್ತಾರೆ. ಅದಕ್ಕೆ ಕಾರಣ ಅಲ್ಲಿನ ವಾತಾವರಣ. ಈಗ ನಟಿ ಪಾರುಲ್ ಯಾದವ್ ಕೂಡಾ ಮೈಸೂರಿಗೆ ಫಿದಾ ಆಗಿದ್ದಾರೆ. ಅದು ಯಾವ ಮಟ್ಟಿಗೆಂದರೆ ಮುಂದೊಂದು ದಿನ ಮೈಸೂರಿನಲ್ಲಿ ಮನೆ ಮಾಡಿ ಸೆಟ್ಲ ಆಗಬೇಕು ಎನ್ನುವ ಮಟ್ಟಿಗೆ. ಮುಂಬೈ ಮೂಲದ ಪಾರುಲ್ಗೆ ಏಕಾಏಕಿ ಮೈಸೂರು ಮೇಲೆ ಪ್ರೀತಿ ಹುಟ್ಟಲು, ಮನೆ ಮಾಡುವ ಕನಸು ಕಾಣಲು ಕಾರಣವೇನೆಂದು ನೀವು ಕೇಳಬಹುದು.
ಅದಕ್ಕೆ ಉತ್ತರ “ಬಟರ್ಫ್ಲೈ’. ಹೌದು, ರಮೇಶ್ ಆರವಿಂದ್ ನಿರ್ದೇಶನದ “ಬಟರ್ಫ್ಲೈ’ ಚಿತ್ರದಲ್ಲಿ ಪಾರುಲ್ ಯಾದವ್ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ವೇಳೆ ಮೈಸೂರಿನ ವಾತಾವರಣ, ಆಗಲ ರಸ್ತೆಗಳು, ಕಡಿಮೆ ಟ್ರಾಫಿಕ್ ನೋಡಿ ಪಾರುಲ್ ಫುಲ್ ಥ್ರಿಲ್ ಆಗಿದ್ದಾರೆ. ಸಾಮಾನ್ಯವಾಗಿ ಒಂದು ಲೊಕೇಶನ್ನಿಂದ ಇನ್ನೊಂದು ಲೊಕೇಶನ್ಗೆ ಶಿಫ್ಟ್ಗೆ ಆಗಲು ಒಂದು ದಿನ ಬೇಕಾಗುತ್ತದೆ. ಆದರೆ, “ಬಟರ್ಫ್ಲೈ’ ತಂಡ ಒಂದೇ ದಿನ 5 ಲೊಕೇಶನ್ಗಳಲ್ಲಿ ಚಿತ್ರೀಕರಿಸಿದೆ.
ಇದು ಸಾಧ್ಯವಾಗಿದ್ದು ಮೈಸೂರಿ ಆಗಿದ್ದಕ್ಕೆ. ಇವೆಲ್ಲದರಿಂದ ಥ್ರಿಲ್ ಆಗಿರುವ ಪಾರುಲ್ ಮುಂದೊಂದು ದಿನ ಮೈಸೂರಿನಲ್ಲಿ ಮನೆ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. “ಮೈಸೂರಿನ ವಾತಾವರಣ ನನಗೆ ತುಂಬಾ ಹಿಡಿಸಿತು. ಹಾಗಾಗಿಯೇ ತುಂಬಾ ಖುಷಿಯಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇಲ್ಲಿ ಜನ ಕೂಡಾ ತುಂಬಾ ಒಳ್ಳೆಯವರು. ಮುಂದೊಂದು ದಿನ ಇಲ್ಲಿ ಮನೆ ಮಾಡುವ ಆಸೆ ಇದೆ’ ಎನ್ನುತ್ತಾರೆ ಪಾರುಲ್.
ಸದ್ಯ ಮೈಸೂರಿನಲ್ಲಿ “ಬಟರ್ಫ್ಲೈ’ ಚಿತ್ರಕ್ಕಾಗಿ ಪಾರುಲ್ ಯಾದವ್ ಅವರ ಮದುವೆ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಮದರಂಗಿ, ಮನೆಯಲ್ಲಿನ ಮದುವೆ ಸಂಭ್ರಮ ಸೇರಿದಂತೆ ಸಾಕಷ್ಟು ದೃಶ್ಯಗಳನ್ನು ರಮೇಶ್ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಪಾರುಲ್ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಕೂಡಾ ಇಟ್ಟಿದ್ದಾರೆ. ಅಂದಹಾಗೆ, ಪಾರುಲ್ ನಟನೆಯ “ಸೀಜರ್’ ಚಿತ್ರ ಈ ವಾರ ತೆರೆಕಾಣುತ್ತಿದ್ದು, ಚಿರಂಜೀವಿ ಸರ್ಜಾ ನಾಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rachana inder: ಮರ್ಡರ್ ಮಿಸ್ಟರಿ 4 ಎನ್ 6
Sandalwood: ರಿಲಯನ್ಸ್ ತೆಕ್ಕೆಗೆ ʼಜಡ್ಜ್ ಮೆಂಟ್ʼ
Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ
ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
MUST WATCH
ಹೊಸ ಸೇರ್ಪಡೆ
Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್
CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ
Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ
Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ
Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ