ಬ್ಯಾಲಾಳು ಕೆರೆ ಪ್ರದೇಶದಲ್ಲಿ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Apr 13, 2018, 12:53 PM IST
ಹಗರಿಬೊಮ್ಮನಹಳ್ಳಿ: ಕಡ್ಲಬಾಳು ಗ್ರಾ.ಪಂ.ವ್ಯಾಪ್ತಿಯ ಕೂಲಿಕಾರ್ಮಿಕರು ಬ್ಯಾಲಾಳು ಕೆರೆ ಪ್ರದೇಶದ ಹೂಳು ಎತ್ತುವ ಕಾಮಗಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಗುರವಾರ ಕಡ್ಲಬಾಳು ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತ್ರಿ ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿ, ಕೂಲಿ ಕಾರ್ಮಿಕರಿಗೆ ಮಗಿಮಾವಿನಹಳ್ಳಿ ಕೆರೆ ಪ್ರದೇಶ ದೂರವಾಗುವುದರಿಂದ ಹತ್ತಿರದ ಬ್ಯಾಲಾಳು ಕೆರೆ ಪ್ರದೇಶದಲ್ಲಿಯೇ ಕೆಲಸ ನೀಡಬೇಕು. 190 ಎಕರೆ ವಿಸ್ತೀರ್ಣ ಇರುವ ಬ್ಯಾಲಾಳು ಕೆರೆ ಪ್ರದೇಶದಲ್ಲಿ ಊಳು ತೆಗೆಯಲು ಸಾಕಷ್ಟು ಸ್ಥಳವಕಾಶವಿರುವಿದ್ದರೂ ಮಗಿಮಾವಿನಹಳ್ಳಿ ಕೆರೆ ಹೂಳೆತ್ತಲು ಕಳುಹಿಸುತ್ತಿರುವುದು ಕೂಲಿ ಕಾರ್ಮಿಕರಿಗೆ ವಿನಕಾರಣ ಹೊರೆ ಮಾಡಿದಂತಾಗುತ್ತಿದೆ ಎಂದು ದೂರಿದರು. ಮಗಿಮಾವಿನಹಳ್ಳಿ ಕೆರೆ ಪ್ರದೇಶದ ಮಣ್ಣು ಅತ್ಯಂತ ಗಟ್ಟಿಯಾಗಿರುವುದರಿಂದ ಬಿಸಿಲಿನಲ್ಲಿ ಹೂಳೆತ್ತುವುದು ಕೂಲಿ ಕಾರ್ಮಿಕರಿಗೆ ಅತ್ಯಂತ ತ್ರಾಸದಾಯಕವಾಗಿದೆ.
ಇದೇ ಕೆರೆಯಲ್ಲಿಯೇ ಬ್ಯಾಸಿಗಿದೇರಿ, ಬಾಚಿಗೊಂಡನಹಳ್ಳಿ ಕೂಲಿ ಕಾರ್ಮಿಕರಿಗೂ ಕೆಲಸ ನೀಡಿರುವುದರಿಂದ ಅಲ್ಲಿಯ ಕೂಲಿ ಕಾರ್ಮಿಕರು ಕೂಡ ನೋವನ್ನು ಅನುಭವಿಸುತ್ತಿದ್ದಾರೆ ಎಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಬ್ಯಾಲಾಳು ಕೆರೆ ಪ್ರದೇಶದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಕೆರೆಯ 5 ಎಕರೆ ಪ್ರದೇಶದಲ್ಲಿ ಉಚಿತವಾಗಿ ಜೆಸಿಬಿ ಯಂತ್ರ ಮೂಲಕ ಹೂಳೆತ್ತುತ್ತಿದ್ದಾರೆ. ಯೋಜನೆಯವರು ಯಂತ್ರದ ಮೂಲಕ ಮಾಡುತ್ತಿರುವುದರಿಂದ ಅವರಿಗೆ ಕೆರೆಯ ಗಟ್ಟಿ ಪ್ರದೇಶ ಹೂಳೆತ್ತಲು ತಾಲೂಕು ಆಡಳಿತ ಸೂಚಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ತಾಲೂಕಿನ ಕ್ಯಾತಯನಮರಡಿ, ಓಬಳಪುರ, ಕಡ್ಲಬಾಳು ಗ್ರಾಮದ ಕೂಲಿಕಾರರು ಒಂದು ತಿಂಗಳಿಂದ ಎನ್ಎಂಆರ್ಗಾಗಿ (ಹಾಜರಾತಿ) ಹೋರಾಟ ಮಾಡುತ್ತಾ ಬಂದಿದ್ದ ಫಲವಾಗಿ ಕಡ್ಲಬಾಳು ಗ್ರಾಪಂನವರು ಕೂಲಿ ಕಾರ್ಮಿಕರಿಗೆ ಎನ್ಎಂಆರ್ ನೀಡಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಾದ ಕಡ್ಲಬಾಳು ಗ್ರಾಮದ ಟಿ. ಹನುಮಂತ, ಮಂಜುನಾಥ, ಸಣ್ಣ ದುರುಗಪ್ಪ, ಕ್ಯಾತ್ಯಾಯನಮರಡಿ ತಿಂದಪ್ಪ, ನಾಗರಾಜ ದೇವಪ್ಪ, ನಿಂಗಪ್ಪ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ