ಉದಯವಾಣಿ ವಿಶೇಷ : ಇಂದಿನಿಂದ ತೆರಿಗೆ ಪಾವತಿಯೂ ಸ್ಥಗಿತ


Team Udayavani, Apr 20, 2018, 10:15 AM IST

Registration-19-4.jpg

ಮಂಗಳೂರು: ಒಂದು ತಿಂಗಳಿನಿಂದ ‘ವಾಹನ-4’ ಸಾಫ್ಟ್ವೇರ್‌ ಅಳವಡಿಕೆಗಾಗಿ ಹೊಸ ವಾಹನ ನೋಂದಣಿ ಸ್ಥಗಿತಗೊಳಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಇಂದಿನಿಂದ ವಾಹನ ತೆರಿಗೆಯನ್ನೂ ಪಾವತಿಸಲಾಗದು. ಶುಕ್ರವಾರದಿಂದ (ಎ. 20) ವಾಹನ ತೆರಿಗೆ ಸಂಬಂಧ ಡಿ.ಡಿ.ಯ ರೂಪದಲ್ಲಿ ಸ್ವೀಕರಿಸುವುದನ್ನೂ ಸ್ಥಗಿತಗೊಳಿಸಲು ನಿರ್ಧರಿಸಿದೆ. ಹೊಸ ಸಾಫ್ಟ್ವೇ ರ್‌ ಪೂರ್ಣ ಅನುಷ್ಠಾನಗೊಳ್ಳುವವರೆಗೆ ತೆರಿಗೆಯನ್ನು ಇ-ಪೇಮೆಂಟ್‌ ಬದಲಿಗೆ ಡಿಡಿ ರೂಪದಲ್ಲಿ ಸಂದಾಯ ಮಾಡಬಹುದು ಎಂದು  ಉಪಸಾರಿಗೆ ಆಯುಕ್ತರು ತಿಳಿಸಿದ್ದರು. ಇದರಿಂದಾಗಿ ಬೆರಳೆಣಿಕೆ ವಾಹನಗಳ ನೋಂದಣಿಗೆ ಅವಕಾಶವಾಗಿತ್ತು. ಆದರೆ ಈಗಾಗಲೇ ಸ್ವೀಕರಿಸಿದ ಡಿಡಿಗಳನ್ನು ಖಜಾನೆ-2ರಲ್ಲಿ ಸಂದಾಯ ಮಾಡಬೇಕಾಗಿದ್ದು, ಒತ್ತಡ ಅಧಿಕಗೊಳ್ಳುವ ಸಾಧ್ಯತೆ ಇರುವುದರಿಂದ ಎ. 19ರಿಂದ ಡಿಡಿ ಕೂಡ ಸ್ವೀಕರಿಸಲಾಗದು ಎಂದು ಆರ್‌ಟಿಒ ಪ್ರಕಟಿಸಿದೆ.

RTO ಕಚೇರಿಯನ್ನು ಸಾರ್ವಜನಿಕ ಸ್ನೇಹಿ ಹಾಗೂ ಕಾಗದರಹಿತವನ್ನಾಗಿಸಲು ‘ವಾಹನ-4’ ಸಾಫ್ಟ್ವೇರ್‌ ಅಳವಡಿಸಲಾಗುತ್ತಿದೆ. ಮಂಗಳೂರು ಕಚೇರಿಯಲ್ಲಿ ಸಾಫ್ಟ್ವೇರ್‌ ಅಳವಡಿಕೆಗಾಗಿ ಮಾ. 19ರಂದು ಮಾತ್ರ RTO ಖಜಾನೆ ವಿಭಾಗವನ್ನು, ಆನ್‌ ಲೈನ್‌ ಅರ್ಜಿ ಸ್ವೀಕಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಈಗಾಗಲೇ ಒಂದು ತಿಂಗಳಾಗಿದ್ದರೂ ಸಾಫ್ಟ್ವೇರ್‌ ಮೇಲ್ದರ್ಜೆಗೇರಿಸುವ ಕೆಲಸ ಪೂರ್ಣಗೊಂಡಿಲ್ಲ. ಆದರೆ ಪಕ್ಕದ ಉಡುಪಿಯಲ್ಲಿ ಈಗಲೂ ‘ವಾಹನ 3’ ಪದ್ಧತಿ ಇರುವುದರಿಂದ ಯಾವುದೇ ಸಮಸ್ಯೆಗಳಿಲ್ಲ.


ನವೀಕರಣಕ್ಕೂ ತಾಂತ್ರಿಕ ಅಡಚಣೆ:
ತಾತ್ಕಾಲಿಕ ವಾಹನ ನೋಂದಣಿಗೆ 1 ತಿಂಗಳ ಕಾಲಾವಧಿ ಇದೆ. ಹೀಗಾಗಿ ಮಾ. 19ರ ಹೊತ್ತಿಗೆ ತಾತ್ಕಾಲಿಕ ವಾಹನ ನೋಂದಣಿ ಮಾಡಿದವರು ಖಾಯಂ ಮಾಡಲು ಏನು ಮಾಡಬೇಕೆಂಬ ಚಿಂತೆಯಲ್ಲಿ ತೊಡಗಿದ್ದಾರೆ. ವಾಹನ್‌-4 ತಂತ್ರಾಂಶ ಪ್ರಾರಂಭಿಕ ಹಂತದಲ್ಲಿದ್ದು, ಅರ್ಹತಾ ಪತ್ರ ನೀಡಿಕೆ, ನವೀಕರಣ, ರಹದಾರಿ ಶುಲ್ಕ ಪಾವತಿಯಂಥ ತಾಂತ್ರಿಕ ಅಡಚಣೆ ಮುಂದುವರಿದಿದೆೆ.

ಈ ತಿಂಗಳು ಬರೀ 30 ನೋಂದಣಿ: ಪ್ರಸ್ತುತ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿವೆ. ದಿನವೊಂದಕ್ಕೆ 100-150ರಂತೆ ತಿಂಗಳಿಗೆ ಸುಮಾರು 3,000ಕ್ಕೂ ಹೆಚ್ಚು ದ್ವಿಚಕ್ರ ವಾಹನ, 800ರಷ್ಟು ಕಾರುಗಳು ನೋಂದಣಿಯಾಗುತ್ತಿತ್ತು. ಆದರೆ ಈಗ ಕೇವಲ 20ರಿಂದ 30ಕ್ಕೆ ಇಳಿದಿದೆ. ಹೀಗಾಗಿ ಇಲಾಖೆಯ ಆದಾಯವೂ ಕುಸಿತಗೊಂಡಿದೆ.

ಪುತ್ತೂರಿನಲ್ಲೂ ಸ್ಥಗಿತ: ಪುತ್ತೂರು RTO ಕಚೇರಿಯಲ್ಲೂ ಸಾಫ್ಟ್ವೇರ್‌ ಉನ್ನತೀಕರಣ ಮಾ. 27ಕ್ಕೆ ಪೂರ್ಣಗೊಳ್ಳಬೇಕಿದ್ದರೂ ಇನ್ನೂ ಮುಗಿದಿಲ್ಲ. ಹಾಲಿ ನೋಂದಣಿಗೆ ಸಂಬಂಧಿಸಿ ಇ ಪೇಮೆಂಟ್‌ ಪದ್ಧತಿಯನ್ನೂ ಎ.20ರಿಂದ ಸ್ಥಗಿತಗೊಳಿಸಲಾಗಿದೆ. ದಿನವೊಂದಕ್ಕೆ ಸರಾಸರಿ 50ಕ್ಕೂ ಮಿಕ್ಕಿ ವಾಹನ ನೋಂದಣಿಯಾಗುತ್ತವೆ.

ಬಂಟ್ವಾಳ: ಬೇರೆ ಸಮಸ್ಯೆ
ಬಂಟ್ವಾಳ ಸ. ಪ್ರಾ.ಸಾ. ಕಚೇರಿಯಲ್ಲಿ ಸಾಫ್ಟ್‌ವೇರ್‌ ಪೂರ್ಣ ಕಾರ್ಯಗತಗೊಂಡಿಲ್ಲ. ಬಂಟ್ವಾಳ ಕಚೇರಿಗೆ ಪುತ್ತೂರು, ಮಂಗಳೂರು ಕಚೇರಿ ವ್ಯಾಪ್ತಿಯ ನಿಗದಿತ ಪ್ರದೇಶಗಳ ಅಂಕಿ ಅಂಶ ಬೇರ್ಪಡಿಸಿ 3 ಕಚೇರಿಗಳ ಡಾಟಾ ಪೋರ್ಟಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದನ್ನು ಸಮರ್ಪಕಗೊಳಿಸದ ಕಾರಣ ವಾಹನ ಮಾಲಕರು ಮಂಗಳೂರು, ಬಂಟ್ವಾಳ ಕಚೇರಿಗೆ ಓಡಾಡಬೇಕಾಗಿದೆ.

ಪರಿಹರಿಸುವ ಪ್ರಯತ್ನ
ಸಾಫ್ಟ್ವೇರ್‌ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಈಗಾಗಲೇ ತೆಗೆದುಕೊಂಡಿರುವ ಡಿಡಿಗಳನ್ನು ನಿಭಾಯಿಸುವ ಸಲುವಾಗಿ ಹೊಸ ಡಿಡಿ ಸ್ವೀಕಾರ ನಿಲ್ಲಿಸಲಾಗಿದೆ. ಒಂದೆರಡು ದಿನದೊಳಗೆ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಾಗುವುದು ಹಾಗೂ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
– ಸಿ.ಡಿ.ನಾಯ್ಕ, ಅಸಿಸ್ಟೆಂಟ್‌ ಆರ್‌ಟಿಒ, ಮಂಗಳೂರು

ಮಂಗಳೂರು ಭಾಗದ ಅಟೋಮೊಬೈಲ್‌ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಮಂಗಳೂರು RTO ಕಚೇರಿಯಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ಡಿಸಿ ಗಮನಕ್ಕೆ ತರಲಾಗಿದೆ. ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ.
– ವತಿಕಾ ಪೈ, ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ

— ದಿನೇಶ್‌ ಇರಾ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.