ಜಾರ್ಖಂಡ್ ಮುನಿಸಿಪಲ್ ಚುನಾವಣೆ: ಮತ ಎಣಿಕೆ, ಬಿಜೆಪಿ ಪಾರಮ್ಯ
Team Udayavani, Apr 20, 2018, 4:03 PM IST
ರಾಂಚಿ, ಜಾರ್ಖಂಡ್: ಇದೇ ಎಪ್ರಿಲ್ 16ರಂದು ನಡೆದಿದ್ದ ಜಾರ್ಖಂಡ್ ಮುನಿಸಿಪಲ್ ಚುನಾವಣೆಯ ಮತ ಎಣಿಕೆಯೊಂದಿಗೆ ಫಲಿತಾಂಶಗಳು ಇಂದು ಶುಕ್ರವಾರ ಪ್ರಕಟವಾಗುತ್ತಿದ್ದು ರಾಜ್ಯದಲ್ಲಿನ ಆಳುವ ಬಿಜೆಪಿ ತನ್ನ ಪಾರಮ್ಯವನ್ನು ತೋರುತ್ತಿದೆ.
ಅನೇಕ ಪೌರಾಡಳಿತೆಗಳಲ್ಲಿ ಬಿಜೆಪಿ ಪ್ರಬಲ ಲೀಡ್ ಸ್ಥಾಪಿಸಿದೆ. ಅನಂತರದ ಬೆಳವಣಿಗೆಯಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ಗಮನಾರ್ಹ ಗಳಿಕೆಯನ್ನು ಸ್ಥಾಪಿಸಿವೆ.
ಜಾರ್ಖಂಡ್ನ 34 ಪೌರಾಡಳಿತೆಗಳಿಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಎಂಎಂ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ಜಾರ್ಖಂಡ್ ಸಿಎಂ ರಘುಬರ್ ದಾಸ್ ಅವರು ರಾಜ್ಯದಲ್ಲಿನ ಪೌರಾಡಳಿತೆಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿಯ ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರೇ ಕಾರಣರಾಗಿದ್ದು ಆ ಕಾರಣಕ್ಕೆ ಅವರನ್ನು ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ದಿಲ್ಲಿಯ 2 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಮುಂದುವರೆದ ಶೋಧ
Bengal ನಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲು ಅರ್ಜುನ್, ಶಾಸಕನ ವಿರುದ್ಧ ದೂರು ದಾಖಲು
ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ
Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !