ಈ ಮಕ್ಕಳಿಗೆ ಹೋಲಿಸಿದರೆ ನನ್ನ ದುಃಖ ಏನೂ ಅಲ್ಲ: ಗಂಭೀರ್
Team Udayavani, Apr 29, 2018, 6:30 AM IST
ಹೊಸದಿಲ್ಲಿ: ಟ್ವೀಟರ್ನಲ್ಲಿ ಭಾವುಕ ಟ್ವೀಟೊಂದನ್ನು ಮಾಡಿರುವ ಗೌತಮ್ ಗಂಭೀರ್ ಅದರಲ್ಲಿ ಪರೋಕ್ಷವಾಗಿ ತನ್ನ ನೋವಿನ ಆಳವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಗಂಭೀರ್ ಸಿಆರ್ಪಿಎಫ್ ಯೋಧರ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದರು. ನಕ್ಸಲರ ದಾಳಿಯಲ್ಲಿ ಮೃತರಾದ ಯೋಧರ ಆ ಮಕ್ಕಳನ್ನು ನೋಡಿದಾಗ ನನ್ನ ದುಃಖ ಅದಕ್ಕಿಂತ ಬಹಳ ಕಡಿಮೆ ಎನಿಸಿತು ಎಂದು ಗಂಭೀರ್ ಹೇಳಿಕೊಂಡಿದ್ದಾರೆ. ಇದು ಟ್ವೀಟರ್ನಲ್ಲಿ ಬಹಳ ಸದ್ದು ಮಾಡುತ್ತಿದೆ.
ಹಿಂದಿನ 6 ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತಾ ತಂಡವನ್ನು ಮುನ್ನಡೆಸಿದ್ದ ಗಂಭೀರ್ ಅದರಲ್ಲಿ 2 ಬಾರಿ ತಂಡ ಟ್ರೋಫಿ ಎತ್ತಿ ಹಿಡಿಯಲು ಕಾರಣವಾಗಿದ್ದರು. ಆದರೆ ಈ ಬಾರಿ ಡೆಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಅವರು ನಾಯಕತ್ವವನ್ನು ವಹಿಸಿದ್ದರು. ಅವರ ನೇತೃತ್ವದಲ್ಲಿ 6 ಪಂದ್ಯವಾಡಿ 5ರಲ್ಲಿ ಡೆಲ್ಲಿ ಸೋತು ಹೋಗಿತ್ತು. ಪರಿಣಾಮ ಅವರು ನಾಯಕತ್ವ ಬಿಡುವುದರ ಜತೆಗೆ, ತಂಡದಿಂದಲೂ ಹೊರಗುಳಿದರು.
ಸ್ವತಃ ಗಂಭೀರ್ ಕೂಡ ಫಾರ್ಮ್ ಕುಸಿತ ಅನುಭವಿಸಿ ಬಹಳ ನೋವಿನಲ್ಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಗಂಭೀರ್, ಆ ಮಕ್ಕಳ ಕಣ್ಣಿನಲ್ಲಿ ನೀರಿತ್ತು, ಅವರ ಹೃದಯದಲ್ಲಿ ದುಃಖ ತುಂಬಿಕೊಂಡಿತ್ತು. ಅವರೊಂದಿಗೆ ಮಾತನಾಡಿದಾಗ ನನ್ನ ದುಃಖ ಅದಕ್ಕಿಂತ ಬಹಳ ಕಡಿಮೆ ಎನಿಸಿತು ಎಂದು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ
T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್ ಅಗರ್ಕರ್
MUST WATCH
ಹೊಸ ಸೇರ್ಪಡೆ
Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ
Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ
Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು