ಬಿಜೆಪಿ ಪರ ಹಣ ಹಂಚುತ್ತಿದ್ದವನಿಗೆ ಗ್ರಾಮಸ್ಥರಿಂದ ಥಳಿತ
Team Udayavani, May 2, 2018, 11:03 AM IST
ಚಿಕ್ಕೋಡಿ: ತಾಲೂಕಿನ ಶಿರಗುಪ್ಪಿ ಬಳಿ ಹಣ ಹಂಚುತ್ತಿದ್ದ ಬಿಜೆಪಿ ಬೆಂಬಲಿಗನೊಬ್ಬನನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಥಳಿತಕ್ಕೊಳಗಾದವ ನಿಪ್ಪಾಣಿ ನಿವಾಸಿ ಅಶ್ಫಾಕ್ ಎಂಬಾತನಾಗಿದ್ದು, ಈತ ಬಿಜೆಪಿ ಅಭ್ಯರ್ಥಿಗಳಾದ ಜೊಲ್ಲೆ ದಂಪತಿಗಳ ಒಡೆತನದ ಶ್ರೀ ಬೀರೆಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉದ್ಯೋಗಿ ಎಂದು ತಿಳಿದು ಬಂದಿದೆ.
ಈತನ ಬಳಿ ಹಣ ಮತ್ತು ಬಿಜೆಪಿ ಧ್ವಜ ಮತ್ತಿತರ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.