ಪದ್ಮ ಶ್ರೀ ಪಂ| ವೆಂಕಟೇಶಕುಮಾರಗೆರಾಮಚಂದ್ರ ಸ್ವರಶ್ರೀ ಪ್ರಶಸ್ತಿಪ್ರದಾನ
Team Udayavani, May 4, 2018, 5:33 PM IST
ಹುಬ್ಬಳ್ಳಿ: ಹಣಕ್ಕಾಗಿ ಸಂಗೀತ ಕಚೇರಿ ನಡೆಸದೆ ಸಂಗೀತ ಬೆಳೆಸುವುದಕ್ಕಾಗಿ ಸಂಗೀತ ಪ್ರಸ್ತುತ ಪಡಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಡಾ|ಪಂ. ವೆಂಕಟೇಶಕುಮಾರ ಹೇಳಿದರು. ಇಲ್ಲಿನ ಡಾ| ಡಿ.ಎಸ್.ಕರ್ಕಿ ಕನ್ನಡ ಭವನದಲ್ಲಿ ಗುರುವಾರ ದಿ.ಆರ್.ಜಿ. ದೇಸಾಯಿ ಗವಾಯಿಗಳ 98ನೇ ಜಯಂತಿ ಹಾಗೂ ಶಾಂತಾರಾಮ ಸಂಗೀತ ಶಾಲೆಯ 28ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ರಾಮಚಂದ್ರ ಸ್ವರಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳು ಘರಾಣಾಗಳಲ್ಲಿ ಒಂದು ಹಂತದವರಿಗೆ ಸಂಗೀತ ಕಲಿಯಬೇಕು. ನಂತರ ಮರೆಯಬೇಕು. ಘರಾಣಾದಿಂದ ಶಿಸ್ತು, ಬದ್ಧತೆ ಬರುತ್ತದೆ. ಸಂಗೀತ ಕಲಿಯುವುದರಲ್ಲಿ ಸರಿಯಾದ ದಾರಿಯಲ್ಲಿ ಹೋಗಬೇಕಾದರೆ ಘರಾಣಾ ಅವಶ್ಯ ಎಂದರು. ಗದುಗಿನ ಆಶ್ರಮ ಗುರುಗಳ ಆಶೀರ್ವಾದ ಹಾಗೂ ಜನ್ಮಜನ್ಮದ ಸಂಸ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಬಂದಿದ್ದು, ಅದರಿಂದ ನಾನು ದೊಡ್ಡವನಾಗಿಲ್ಲ. ಬದಲಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.
ಗುರು ಶಿಷ್ಯರ ಪರಂಪರೆ ಬೆಳೆಸಿದವರು ಪಂ| ಪಂಚಾಕ್ಷರಿ ಹಾಗೂ ಪಂ| ಪುಟ್ಟರಾಜ ಗವಾಯಿಗಳು. ಅವರು ಎಂದಿಗೂ ತಾವು ಬೆಳೆಯುವ ಕುರಿತು ಚಿಂತೆ ಮಾಡದೆ ತಮ್ಮ ಶಿಷ್ಯರನ್ನು ಬೆಳೆಸಿದರು. ಅದೇ ರೀತಿ ಗುರುಗಳಿಂದ ಸಂಗೀತ ಕಲಿಯುವವರು ಶ್ರದ್ಧೆ-ಆಸಕ್ತಿಯಿಂದ ಕಲಿಯಬೇಕು. ಮಕ್ಕಳು ಮೊದಲು ತಂಬೂರಿ ನುಡಿಸುವುದು, ತಬಲಾ ಬಾರಿಸುವುದು ಕಲಿಯಬೇಕು.ಅಂದಾಗ ಮಾತ್ರ ಅವರು ಮುಂದೆ ಸಾಗಲು ಸಾಧ್ಯ ಎಂದರು.
ಸಿದ್ಧಾರೂಢಸ್ವಾಮಿ ಮಠದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ವೇದಿಕೆಗಾಗಿ ಕಾಯಬೇಕು. ಅವಕಾಶ ಸಿಕ್ಕಾಗ ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ನಂತರ ಸರಳಾ ಮಧುಸೂಧನ ಹಾಗೂ ಪಂ| ವೆಂಕಟೇಶಕುಮಾರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ| ಎಸ್.ಪಿ.ಬಳಿಗಾರ, ಸಿದ್ದಣ್ಣಾ ಮೆಣಸಿನಕಾಯಿ, ಜಯಲಕ್ಷ್ಮೀ ಕಾಮತ, ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!