22 ಜನರ ಪ್ರಾಣ ಉಳಿಸಿದ ಮರ!
Team Udayavani, May 6, 2018, 6:00 AM IST
ಗೋಪೇಶ್ವರ್: ಬದ್ರಿನಾಥಕ್ಕೆ ತೆರಳುತ್ತಿದ್ದ ಬಸ್ಸೊಂದಕ್ಕೆ ಲಾರಿ ಡಿಕ್ಕಿ ಹೊಡೆದು ಬಸ್ಸು ಕಮರಿಗೆ ಉರುಳಿದರೂ, ಬಸ್ಸಿನಲ್ಲಿದ್ದ 22 ಜನರೂ ಪಾರಾಗಿದ್ದಾರೆ. ಕಂದಕದೆಡೆಗೆ ಉರುಳಿದ ಬಸ್ಸು ಮರವೊಂದರಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ, ಬಸ್ 90 ಅಡಿ ಆಳದ ಕಂದಕಕ್ಕೆ ಉರುಳುವುದು ತಪ್ಪಿದೆ ಮಾತ್ರವಲ್ಲ, 22 ಮಂದಿ ಯಾತ್ರಿಕರ ಪ್ರಾಣವನ್ನೂ ಉಳಿಸಿದೆ. ಇದರಲ್ಲಿದ್ದ ಯಾತ್ರಿ ಕರೆಲ್ಲರೂ ರಾಜಸ್ಥಾನದವರು. ಹಿಮಾಲಯ ಶ್ರೇಣಿಯ ಗೌಚಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ, ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಟಿ) ಮತ್ತು ಪೊಲೀಸ್ ಸಿಬ್ಬಂದಿ, ಪ್ರಯಾಣಿಕರನ್ನು ರಕ್ಷಿಸಿ, ಐಟಿಬಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ
PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ