ಜೀವ ಕೈಯಲ್ಲಿ ಹಿಡಿದು ಪ್ರಯಾಣ: ಭರವಸೆಯೆಲ್ಲ ನೀರುಪಾಲು


Team Udayavani, May 14, 2018, 8:00 AM IST

Neerupalu-13-5.jpg

ಸುಳ್ಯ: ಕುಸಿದು ಬೀಳುವ ಹಂತದಲ್ಲಿರುವ ಅಂತಾರಾಜ್ಯ ಸಂಪರ್ಕದ ಕಾಂತಮಂಗಲ ಸೇತುವೆ ತಾತ್ಕಾಲಿಕ ದುರಸ್ತಿಗೂ ಅನುದಾನಕ್ಕಾಗಿ ಕಾಯುವ ದುಃಸ್ಥಿತಿ ಉಂಟಾಗಿದೆ..! ಸುಳ್ಯ-ಅಜ್ಜಾವರ-ಮಂಡೆಕೋಲು ರಸ್ತೆಯಲ್ಲಿನ ಕಾಂತಮಂಗಲದಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಿರುವ ಹಳೆ ಸೇತುವೆ ದಿನೇದಿನೆ ಶಿಥಿಲಾವಸ್ಥೆಗೆ ತಲುಪಿದೆ. ಅನುದಾನ ಇಲ್ಲದೆ ಇಲಾಖೆಗಳು ಅಸಹಾಯಕತೆ ವ್ಯಕ್ತಪಡಿಸಿದರೆ, ನಿತ್ಯ ಸಂಚರಿಸುವವರ ಪಾಲಿಗೆ ಆತಂಕ ತಪ್ಪಿಲ್ಲ.

5 ಲಕ್ಷ ರೂ. ಪ್ರಸ್ತಾವನೆ
ನಗರದಿಂದ ಅನತಿ ದೂರದಲ್ಲಿರುವ ಈ ಸೇತುವೆ ದುಃಸ್ಥಿತಿ ಬಗ್ಗೆ ಲೋಕಾಯುಕ್ತರಿಗೆ 2017 ನ.11ರಂದು ದೂರು ದಾಖಲಿಸಲಾಗಿತ್ತು. ಮಂಗಳೂರು ಪುರಭವನದಲ್ಲಿ ಅಹವಾಲು ಸ್ವೀಕರಿಸಿದ ಲೋಕಾಯುಕ್ತರು ಸಾರ್ವಜನಿಕರ ಸಂಚಾರದ ದೃಷ್ಟಿಯಿಂದ ತುರ್ತು ಸ್ಪಂದಿಸುವಂತೆ ಇಲಾಖೆಗೆ ಸೂಚಿಸಿದರು. ಹೀಗಾಗಿ ಪಂಚಾಯತ್‌ರಾಜ್‌ ಎಂಜಿನಿಯರ್‌ ಇಲಾಖೆ 5 ಲಕ್ಷ ರೂ. ವೆಚ್ಚ ಅಂದಾಜು ಪಟ್ಟಿ ತಯಾರಿಸಿ, ಜಿಲ್ಲಾಧಿಕಾರಿ ಅವರಿಗೆ ಅನುದಾನ ಬಿಡುಗಡೆ ಕೋರಿ ಪತ್ರ ಬರೆದಿತ್ತು. ಆದರೆ ಅನುದಾನ ಕೋರಿ ಬರೆದ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ  ಎನ್ನುವ ಅಂಶ ಮಾಹಿತಿ ಹಕ್ಕಿನಲ್ಲಿ ಬಹಿರಂಗವಾಗಿದೆ.

ಸಂಚಾರ ನಿಷೇಧಿಸಿ ಫಲಕ
ಸೇತುವೆಯ ವಾಸ್ತವ ಸ್ಥಿತಿ ಪರಿಶೀಲಿಸಿದ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ ಇಲ್ಲಿ ಘನ ವಾಹನ ಓಡಾಟ ನಿಷೇಧಿಸಿ ಫಲಕ ಅಳವಡಿಸುವಂತೆ ಅಜ್ಜಾವರ ಪಂಚಾಯತ್‌ಗೆ ಸೂಚಿಸಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಡುತ್ತಿವೆ. ಹತ್ತಿಪ್ಪತ್ತು ಕಿ.ಮೀ. ಸುತ್ತು ಬಳಸಿ ಓಡಾಟ ನಡೆಸಬೇಕಾದ ಕಾರಣ, ಫಲಕದ ಕಣ್ತಪ್ತಿಸಿ ಘನ ವಾಹನಗಳು ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ದಿನವಿಡಿ ವಿವಿಧ ಕಾರಣಗಳಿಗೆ ನಗರಕ್ಕೆ ಬರುವ ಮಂಡೆಕೋಲು, ಅಜ್ಜಾವರ, ಕಾಂತಮಂಗಲ ನಿವಾಸಿಗಳಿಗೆ ಜೀವ ಕೈಯಲ್ಲಿ ಹಿಡಿದು ಸೇತುವೆ ದಾಟಬೇಕಾದ ಸ್ಥಿತಿಯಿದೆ.

ದುರಸ್ತಿಗೆ ಗಡುವು
ಈ ಹಿಂದೆ ಸೇತುವೆಯನ್ನು ಎರಡು ತಿಂಗಳೊಳಗೆ ದುರಸ್ತಿಪಡಿಸುವುದಾಗಿ ಅಂದಿನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಅಧಿಕಾರಿ ಭರವಸೆ ನೀಡಿದ್ದರು. 2 ತಿಂಗಳು ಕಳೆದು ಅವರ ವರ್ಗಾವಣೆಯಾಗಿದ್ದು ಬಿಟ್ಟರೆ, ಸೇತುವೆ ಇದ್ದ ಸ್ಥಿತಿಯಲ್ಲಿಯೇ ಇದೆ. ಅಜ್ಜಾವರ ಗ್ರಾ.ಪಂ. ಗ್ರಾಮ ಸಭೆಗಳಲ್ಲಿಯೂ ಚರ್ಚೆ ನಡೆದಿದೆ. ದುರಸ್ತಿ ಕೋರಿ ಪಂಚಾಯತ್‌ ಎಂಜಿನಿಯರ್‌ ಇಲಾಖೆಗೆ ಪತ್ರ ಬರೆದಿತ್ತು. ಅಲ್ಲಿಂದಲೂ ಅನುದಾನ ಬಂದ ತತ್‌ಕ್ಷಣ ದುರಸ್ತಿ ಎಂಬ ಉತ್ತರ ಬಂದದ್ದು ಬಿಟ್ಟರೆ ಬೇರೇನೂ ಪ್ರಗತಿ ಆಗಿಲ್ಲ.

ಹೊಸ ಸೇತುವೆ ಅನಿವಾರ್ಯ
ತಾತ್ಕಾಲಿಕವಾಗಿ ಸೇತುವೆ ದುರಸ್ತಿ ನಡೆಸಿ ದರೂ, ಅದರಿಂದ ದೀರ್ಘ‌ ಪ್ರಯೋಜನ ಸಿಗದು. ಇಲ್ಲಿನ ವಾಹನ ಓಡಾಟ ಹಾಗೂ ಗಡಿ ರಾಜ್ಯದ ಸಂಪರ್ಕ ರಸ್ತೆಯ ಕಾರಣದಿಂದ ವಿಸ್ತರಿತ ಹೊಸ ಸೇತುವೆ ನಿರ್ಮಾಣದ ಅಗತ್ಯವಿದೆ. ಈ ಬೇಡಿಕೆ ಹಲವು ವರ್ಷಗಳಿಂದ ವ್ಯಕ್ತವಾಗುತ್ತಿದೆ. ಆದರೆ ದುರಸ್ತಿಗೆ ಹಣ ಬರುತ್ತಿಲ್ಲ ಎಂದಾದರೆ, ಹೊಸ ಸೇತುವೆಗೆ ಹಣ ಬರಲು ಸಾಧ್ಯವೇ ಎಂಬ ಪ್ರಶ್ನೆ ಜನರದ್ದು.

ಮೇಲ್ಪದರ ಶಿಥಿಲ
ಸೇತುವೆಯ ಮೇಲ್ಪದರ ಶಿಥಿಲಗೊಂಡಿದೆ. ದೊಡ್ಡದಾದ ಬಿರುಕು ಸೃಷ್ಟಿಯಾಗಿದ್ದು, ಅದರಿಂದ ನದಿಯ ಕೆಳಭಾಗ ಕಾಣುತ್ತಿದೆ. ಕಬ್ಬಿಣದ ಪ್ಲೇಟುಗಳು ತುಕ್ಕು ಹಿಡಿದು, ಮರು ಅಳವಡಿಕೆ ಅನಿವಾರ್ಯವಾಗಿದೆ. ಸೇತುವೆ ಆರಂಭದ ಸ್ಥಳದಲ್ಲಿ ಹೊಂಡ ನಿರ್ಮಾಣವಾಗಿದ್ದು, ಕೆಳ ಭಾಗದ ತಡೆಗೋಡೆ ಕುಸಿಯುವ ಆತಂಕ ಮೂಡಿದೆ. ಹೀಗಿದ್ದರೂ  ಜನಪ್ರತಿನಿಧಿಗಳು ಅನುದಾನ ತರಿಸುವ ಯತ್ನ ಮಾಡಿಲ್ಲ ಎನ್ನುತ್ತಾರೆ ವಾಹನ ಸವಾರ ಶಿವಣ್ಣ.

ಅನುದಾನ ಇಲ್ಲ
ಸೇತುವೆ ದುರಸ್ತಿ ಅನಿವಾರ್ಯ. ಅದಕ್ಕಾಗಿ ಅನುದಾನ ಕೋರಲಾಗಿದೆ. ಈ ತನಕ ಬಂದಿಲ್ಲ. ಅನುದಾನ ಬಂದ ಬಳಿಕವೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕಷ್ಟೆ. ಈಗಾಗಲೇ ಘನ ವಾಹನಗಳ ಓಡಾಟಕ್ಕೆ ಇಲ್ಲಿ ನಿರ್ಬಂಧ ಹೇರಲಾಗಿದೆ.
– ಚೆನ್ನಪ್ಪ ಮೊಯಿಲಿ, ಪ್ರಭಾರ, ಸಹಾಯಕ ಎಂಜಿನಿಯರ್‌, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಸುಳ್ಯ

ಪತ್ರ ಬರೆಯಲಾಗಿದೆ
ಗ್ರಾಮ ಸಭೆಗಳಲ್ಲಿಯೂ ಸೇತುವೆ ಬಗ್ಗೆ ಪ್ರಸ್ತಾವಿಸಲಾಗಿದೆ. ದುರಸ್ತಿಗೆ ಸಂಬಂಧಿಸಿ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಇಲ್ಲ ಎಂಬ ಉತ್ತರ ಸಿಕ್ಕಿದೆ.
– ಸಂದೇಶ್‌ ಕೆ.ಎನ್‌. ಪಿಡಿಒ, ಅಜ್ಜಾವರ ಗ್ರಾ.ಪಂ.

— ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

2-thirthahalli

ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹಿಳಾ ಕಾಂಗ್ರೆಸ್ ಘಟಕ ಆಗ್ರಹ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.