ಪೀಡಕನ ಹಿಡಿದದ್ದು ಸಿಬಂದಿ
Team Udayavani, May 15, 2018, 6:00 AM IST
ತಿರುವನಂತಪುರ: ಕೇರಳದ ಮಣಪ್ಪುರಂದಲ್ಲಿ ಆಭರಣ ಉದ್ಯಮಿ ಮೊಯಿದೀನ್ ಕುಟ್ಟಿ 10 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣವು ಬೆಳಕಿಗೆ ಬಂದಿದ್ದು ಸಿನಿಮಾ ಥಿಯೇಟರಿನ ಸಿಬಂದಿ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ.
ಅಂದು ನಡೆದಿದ್ದಿಷ್ಟು. ಎಲ್ಲ ಸಮಯದಲ್ಲೂ ಸಿಸಿಟಿವಿ ಗಮನಿಸುವಂಥ ಸಿಬಂದಿ, ಅಂದು ಇನ್ನೊಂದು ಸ್ಕ್ರೀನ್ನಲ್ಲಿ ಯಾವುದೋ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಸಿಸಿಟಿವಿ ವೀಕ್ಷಿಸಿರಲಿಲ್ಲ. 9 ಗಂಟೆ ಹೊತ್ತಿಗೆ ಸಿಸಿಟಿವಿ ವೀಕ್ಷಿಸಲು ಆಗಮಿಸಿದಾಗ ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿರು ವುದು ಕಂಡುಬಂತು ಎಂದಿದ್ದಾರೆ ಸಿಬಂದಿ ಸನೂಪ್. ಸ್ಕ್ರೀನ್ ಜೂಮ್ ಮಾಡಿದಾಗ ನನ್ನ ಅನುಮಾನ ನಿಜವಾಯಿತು. ಆದರೆ, ಸಿನಿಮಾ ಮುಗಿಯಲು 10 ನಿಮಿಷವಷ್ಟೇ ಬಾಕಿಯಿತ್ತು. ಕೂಡಲೇ ಥಿಯೇಟರ್ ಮ್ಯಾನೇಜರ್ಗೆ ತಿಳಿಸಿದೆ. ಮಕ್ಕಳ ಸಹಾಯವಾಣಿ ಅಧಿಕಾರಿ ಗಳಿಗೆ ವಿಡಿಯೋ ಹಸ್ತಾಂತರಿಸಿದೆವು. ಸಿನಿಮಾ ಮುಗಿಯುತ್ತಿದ್ದಂತೆ ಮೊಯಿದೀನ್ನನ್ನು ಬೆನ್ನಟ್ಟಿ ಹೋಗಿ, ಆತನ ಬೆಂಜ್ ಕಾರಿನ ನಂಬರ್ ಅನ್ನು ಬರೆದುಕೊಂಡೆವು. ದೌರ್ಜ ನ್ಯದ ವೇಳೆ ಮಗು ಮುಂದಿನ ಸೀಟಿನಲ್ಲಿ, ಮಗುವಿನ ತಾಯಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಇಡೀ ವಿಡಿಯೋ ವೀಕ್ಷಿಸಿ ಮರುದಿನ ಪೊಲೀಸರಿಗೆ ದೂರು ನೀಡಲಾಯಿತು. ಪ್ರತಿ ದಿನ ಕರೆ ಮಾಡಿ ಪ್ರಕರಣದ ವರದಿ ಕೇಳುತ್ತಿ ದ್ದೆವು. ಆದರೆ ಟಿವಿ ಚಾನೆಲ್ ಈ ದೃಶ್ಯ ಪ್ರಸಾರ ಮಾಡುವವರೆಗೂ ಪೊಲೀಸರು ಯಾವ ಕ್ರಮ ವನ್ನೂ ಕೈಗೊಳ್ಳಲಿಲ್ಲ ಎಂದಿದ್ದಾರೆ ಸನೂಪ್.
ಸದ್ಯ ಮೊಯಿದೀನ್ ಕುಟ್ಟಿಯನ್ನು ಹಾಗೂ ದೌರ್ಜನ್ಯ ನಡೆಯುತ್ತಿದ್ದರೂ ತಡೆಯದ ಆಕೆಯ ತಾಯಿಯನ್ನೂ ಬಂಧಿಸಲಾಗಿದೆ. ಮೊಯಿದೀನ್ ಕುಟ್ಟಿ ಈ ಭಾಗದಲ್ಲಿ ಸ್ವರ್ಣ ಕುಟ್ಟಿ ಎಂದೇ ಹೆಸರಾಗಿದ್ದ. ಅಷ್ಟೇ ಅಲ್ಲ, ಕಥುವಾದ ಆಸಿಫಾ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲೂ ಮುಂದೆನಿಂತು ಭಾಗವಹಿಸಿದ್ದ! ಆದರೆ ಆತನೇ ಇದೀಗ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ