ಅವಸಾನದತ್ತ ಪ್ರಜಾಪ್ರಭುತ್ವ
Team Udayavani, May 21, 2018, 11:30 AM IST
ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ಬಿಜೆಪಿ ದೊಡ್ಡ ಆತಂಕ ಎಂದುಕೊಂಡರೂ, ಉಳಿದವರು ಸಾಚಾ ಅಲ್ಲ. ಆದ್ದರಿಂದ ಆ ಪಕ್ಷಗಳ ಬಗ್ಗೆಯೂ ಎಚ್ಚರದಿಂದ ಇರಬೇಕು ಎಂದು ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದರು.
ನಗರದ ಗಾಂಧಿ ಭವನದಲ್ಲಿ ಕ್ರಿಯಾ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ “ಮಾರ್ಕ್ಸ್ 200- ಕ್ಯಾಪಿಟಲ್ 150′ ಮಾಲಿಕೆಯ ಮೊದಲ ಕಂತಿನ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಆವರು, ರಾಜ್ಯದ ಈಗಿನ ಪರಿಸ್ಥಿತಿ ನೋಡಿದರೆ, ಪ್ರಜಾಪ್ರಭುತ್ವ ಅವಸಾನದ ಅಂಚಿನತ್ತ ಸಾಗಿದೆ ಎಂಬ ಆತಂಕ ಕಾಡುತ್ತದೆ ಎಂದು ಹೇಳಿದರು.
ಮಹಾತ್ಮ ಗಾಂಧಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ರಾಮಮನೋಹರ ಲೋಹಿಯಾ ಅವರ ಕುರಿತ ಸಮಗ್ರ ಕೃತಿಗಳು ಬಂದಿವೆ. ಅದೇ ರೀತಿ, ಕಾರ್ಲ್ಮಾರ್ಕ್ಸ್ ಅವರ ಬಗೆಗಿನ ಸಮಗ್ರ ಕೃತಿಗಳೂ ಬರಬೇಕು. ಹಾಗೂ ಬಿಡುಗಡೆಯಾದ ಕೃತಿಗಳನ್ನು ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಬೇಕು ಎಂದರು.
ವಿಮರ್ಶಕ ಡಾ.ಜಿ.ರಾಮಕೃಷ್ಣ ಮಾತನಾಡಿ, ಮಾರ್ಕ್ಸ್ವಾದ ಅಧ್ಯಯನ ಮಾಡಿದವರೆಲ್ಲರೂ ಕಮ್ಯುನಿಸ್ಟ್ ಆಗಿರುವುದಿಲ್ಲ. ಮೊದಲು ಕಮ್ಯುನಿಸ್ಟ್ ಅನ್ನು ಅಧ್ಯಯನ ಮಾಡಿ, ನಂತರ ಮಾರ್ಕ್ಸ್ವಾದ ಓದಿ ಅಳವಡಿಸಿಕೊಳ್ಳಬೇಕು. ಈಗಲೂ ಮಾರ್ಕ್ಸ್ವಾದ ಗೊತ್ತಿಲ್ಲದ ಅನೇಕರು ವೈಚಾರಿಕವಾಗಿ ತಮ್ಮ ಬದುಕಿನಲ್ಲಿ ಮಾರ್ಕ್ಸ್ವಾದಿಗಳಾಗಿದ್ದಾರೆ. ಅಷ್ಟರಮಟ್ಟಿಗೆ ಮಾರ್ಕ್ಸ್ವಾದ ವೈಜ್ಞಾನಿಕವಾಗಿದೆ ಎಂದು ಹೇಳಿದರು.
ಇದೇ ವೇಳೆ “ಫ್ರಾನ್ಸಿನಲ್ಲಿ ಅಂತರಯುದ್ಧ’ ಮತ್ತು “ತತ್ವಶಾಸ್ತ್ರದ ದಾರಿದ್ರé’ ಅನುವಾದಿತ ಕೃತಿಗಳು ಬಿಡುಗಡೆಗೊಳಿಸಲಾಯಿತು. ಡಾ.ಬಿ.ಆರ್. ಮಂಜುನಾಥ್, ಪ್ರೊ.ವಿ.ಎನ್. ಲಕ್ಷ್ಮೀನಾರಾಯಣ್ ಕೃತಿ ಪರಿಚಯಿಸಿದರು. ಲೇಖಕರಾದ ವಿಶ್ವ ಕುಂದಾಪುರ, ಕೆ.ಪಿ. ವಾಸುದೇವನ್, ಕೆ.ಎಸ್. ಪಾರ್ಥಸಾರಥಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ