ತೋಡುಗಳಲ್ಲಿ ಮಣ್ಣಿನ ರಾಶಿ; ನೀರು ಹೋಗೋದೆಲ್ಲಿ? 


Team Udayavani, May 24, 2018, 6:00 AM IST

2205udcp5a.jpg

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಉಡುಪಿ ನಗರಸಭೆಯ ಅಂಬಲಪಾಡಿ ವಾರ್ಡ್‌ ಮತ್ತದರ ಸುತ್ತಮುತ್ತ ಮಳೆ ನೀರು ಹರಿಯುವ ಪ್ರಮುಖ ತೋಡುಗಳಲ್ಲಿ ಮಣ್ಣಿನ ರಾಶಿ ಕಂಡುಬಂದಿದೆ. ಕೆಲವೆಡೆಗಳಲ್ಲಿ ತೋಡೇ ಮಾಯವಾಗಿದೆ!

ಅಂಬಲಪಾಡಿ-ಕರಾವಳಿ ಜಂಕ್ಷನ್‌ ಮಧ್ಯೆ ರಾ.ಹೆ. 66ರಲ್ಲಿ ಅಭಿನಂದನ್‌ ಪೆಟ್ರೋಲ್‌ ಬಂಕ್‌ ಇದೆ. ಇದರ ಮುಂಭಾಗ ಪೂರ್ವಭಾಗದಲ್ಲಿ ತಾಲೂಕು ಕಚೇರಿ, ಪೊಲೀಸ್‌ ಅಧೀಕ್ಷಕರ ಕಚೇರಿ ಸಂಪರ್ಕಿಸುವ ಪ್ರಮುಖ ರಸ್ತೆ ಇದೆ. ಸುಮಾರು 300 ಮೀ. ಉದ್ದಕ್ಕೆ ಇರುವ ಈ ರಸ್ತೆಯ ಇಕ್ಕೆಲದಲ್ಲಿದ್ದ ತೋಡು ಮಾಯವಾಗಿದೆ.  ಹೆದ್ದಾರಿ ಸಂಧಿಸುವ ಭಾಗದಲ್ಲಿ 50 ಮೀ.ನಷ್ಟು ಉದ್ದಕ್ಕೆ ಮಾತ್ರ ತೋಡು ಇದ್ದು, ಇದು ಕೂಡ ಸಮರ್ಪಕವಾಗಿಲ್ಲ.

ರಸ್ತೆಯೂ ಹಾಳು; ತೋಡೂ ಹಾಳು
ತಾಲೂಕು ಕಚೇರಿಯಿಂದ ಹೆದ್ದಾರಿ ಸಂಪರ್ಕಿತ ಪ್ರಮುಖ ರಸ್ತೆಯ ಮಧ್ಯಭಾಗವನ್ನು ಅಗೆದು ಒಳಚರಂಡಿ ಕಾಮಗಾರಿಯನ್ನು ವರ್ಷದ ಹಿಂದೆ ನಡೆಸಲಾಗಿದೆ. ಈ ಕಾಮಗಾರಿ ನಡೆಸಿದವರು ಮಣ್ಣನ್ನು ರಸ್ತೆ ಪಕ್ಕದ ತೋಡಿಗೆ ಹಾಕಿ ಹೋಗಿದ್ದಾರೆ. ಇದರಿಂದ ಡಾಮರು ರಸ್ತೆಯೂ ಹಾಳಾಗಿದೆ. ತೋಡನ್ನೂ ಹಾಳು ಮಾಡಿದ್ದಾರೆ. ಇನ್ನು ಮಳೆ ಬಂದಾಗ ನೀರೆಲ್ಲ ಅಗೆದು ಹಾಕಿರುವ ರಸ್ತೆ ಮೇಲೆಯೇ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲಿನ ಈ ಪರಿಸ್ಥಿತಿಯಿಂದ ತೋಡು ಮತ್ತು ರೋಡು ಎರಡೂ ಹಾಳಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೃತ್ಯುಹೊಂಡ !
ಕರಾವಳಿ ಜಂಕ್ಷನ್‌ನಿಂದ ಅಂಬಲಪಾಡಿ ರಾ.ಹೆ. 66ರ ಹೆದ್ದಾರಿ ಇಕ್ಕೆಲಗಳಲ್ಲಿ ತೋಡಿನ ಪರಿಸ್ಥಿತಿಯೇ ಚಿಂತಾಜನಕವಾಗಿದೆ. ಇಲ್ಲಿನ ಪೆಟ್ರೋಲ್‌ ಬಂಕ್‌ ಒಂದರ ಮುಂಭಾಗದ ರಸ್ತೆಯ ಪೂರ್ವಭಾಗದ ಹೆದ್ದಾರಿ ಅಂಚಿನಲ್ಲಿ ಮೃತ್ಯು ಹೊಂಡವೊಂದು ಸೃಷ್ಟಿಯಾಗಿದೆ. ಕಾಂಕ್ರೀಟ್‌ ಚರಂಡಿ ಕಾಮಗಾರಿ ಪೂರ್ಣಗೊಳಿಸದ ಕಾರಣ ಬೃಹತ್‌ ಹೊಂಡ ಇಲ್ಲಿ ಸೃಷ್ಟಿಯಾಗಿದೆ. ತ್ಯಾಜ್ಯಗಳು ಈ ಹೊಂಡದಲ್ಲಿ ಶೇಖರಣೆಯಾಗಿದೆ.  ವಾಹನ ಸಾಗುವ, ಜನರು ನಡೆದಾಡುವ ಸರ್ವಿಸ್‌ ರಸ್ತೆಯಂಚಿನಲ್ಲೇ ಈ ಹೊಂಡವಿದೆ. ಗಿಡಗಂಟಿಗಳು ಬೆಳೆದ ಕಾರಣ ನಡೆದಾಡುವವರೂ ಎಡವಿ ಗುಂಡಿಗೆ ಬೀಳುವ ಸಾಧ್ಯತೆ ಇದೆ.

ಅಲ್ಲಲ್ಲಿ  ಸ್ಲಾéಬ್‌ ಓಪನ್‌
ಹೆದ್ದಾರಿ ಕಾಮಗಾರಿ ಸಂದರ್ಭ ಚರಂಡಿ ಕಾಮಗಾರಿಯನ್ನು ಅಸಮರ್ಪಕವಾಗಿ ಮಾಡಲಾಗಿದೆ. ಅಂಬಲಪಾಡಿ ಭಾಗದಲ್ಲಿ ಚರಂಡಿಯಲ್ಲಿ ಅರೆಬರೆ ಕಾಂಕ್ರೀಟ್‌ ಚರಂಡಿ ಕಾಮಗಾರಿ ನಡೆದಿದೆ. ಅದರಲ್ಲೂ ಅಲ್ಲಲ್ಲಿ ಚರಂಡಿ ಸ್ಲಾéಬ್‌ಗಳನ್ನು ಹಾಕಿಲ್ಲ. ಕೆಲವೆಡೆ ಸ್ಲಾéಬ್‌ಗಳು ತೆರೆದುಕೊಂಡಿವೆ. ಚರಂಡಿಯೊಳಗೆ ಗಿಡಗಂಟಿಗಳು ಬೆಳೆದಿವೆ. 

ಗಮನ ಹರಿಸುತ್ತೇವೆ
ಅಂಬಲಪಾಡಿ ವಾರ್ಡ್‌ನಲ್ಲಿ ಚರಂಡಿ ಹೂಳೆತ್ತುವ ಕೆಲಸವನ್ನು ಕಳೆದೆರಡು ತಿಂಗಳಿನಿಂದ ನಡೆಸಲಾಗಿದೆ. ಕೆಲವೆಡೆಗಳಲ್ಲಿ ಹೆದ್ದಾರಿ ಕಾಮಗಾರಿಯ ಚರಂಡಿ ನಿರ್ಮಿಸುವವರು ಸಮಸ್ಯೆ ತಂದೊಡ್ಡಿದ್ದಾರೆ. ಈ ಬಗ್ಗೆ ನಗರಸಭೆ ಎಂಜಿನಿಯರ್‌ ಅವರಿಗೆ ತಿಳಿಸಲಾಗಿದೆ. ಸಭೆಯಲ್ಲೂ ವಿಷಯ ಪ್ರಸ್ತಾವವಾಗಿದೆ. ಸಮಸ್ಯೆ ಬಗ್ಗೆ ಗಮನ ಹರಿಸಿ ನಗರಸಭೆ ಮೂಲಕ ಚರಂಡಿಯಲ್ಲಿರುವ ಮಣ್ಣನ್ನು ತೆರವುಗೊಳಿಸಲಾಗುವುದು.
– ವಸಂತಿ ಶೆಟ್ಟಿ, ನಗರಸಭಾ ಸದಸ್ಯರು, ಅಂಬಲಪಾಡಿ

– ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.