ಮ್ಯಾಂಗೋ ಪಿಕ್ಕಿಂಗ್ಟೂರ್ 27ರಂದು
Team Udayavani, May 24, 2018, 11:17 AM IST
ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮೇ 27ರಂದು ಬೆಂಗಳೂರು ನಗರ ಗ್ರಾಹಕರಿಗಾಗಿ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಆಯೋಜಿಸಿದೆ. ಮಾವು ಬೆಳೆಗಾರರಿಗೆ ತೋಟದಲ್ಲೇ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಮಾವು ಅಭಿವೃದ್ಧಿ ನಿಗಮ ಪ್ರತಿ ವರ್ಷ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಆಯೋಜಿಸುತ್ತದೆ. ಗ್ರಾಹಕರು ತಮಗೆ ಇಷ್ಟವಾದ ಮಾವನ್ನು, ಮಾವು ಬೆಳೆಗಾರರ ತೋಟದಲ್ಲಿರುವ ಮರದಿಂದಲೇ ಕಿತ್ತು ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಮ್ಯಾಂಗೋ ಪಿಕ್ಕಿಂಗ್ ಟೂರ್ನಲ್ಲಿ 220 ಗ್ರಾಹಕರು ಪಾಲ್ಗೊಳ್ಳಲು ಅವಕಾಶ ವಿದ್ದು, ಮೊದಲು ಬಂದವರಿಗೆ ಆದ್ಯತೆ
ನೀಡಲಾಗುತ್ತದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಕಬ್ಬನ್ ಪಾರ್ಕ್ನಿಂದ ಗ್ರಾಹಕ ರನ್ನು ಹೊತ್ತು 4 ಬಸ್ಗಳು ರಾಮ
ನಗರದ ತೋಟಗಳಿಗೆ ಸಾಗಲಿವೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವೆಂಕಟರಾಯನದೊಡ್ಡಿ ಗ್ರಾಮದ ಮಂಜು ಅವರ ತೋಟಕ್ಕೆ
ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡಮಾಲೂರು ಗ್ರಾಮದ ಕೆ.ಮುನಿರಾಜು ಅವರ ತೋಟಕ್ಕೆ ಬೆಂಗಳೂರು ನಗರ ಗ್ರಾಹಕರನ್ನು ಕರೆದೊಯ್ಯಲಾಗುವುದು ಎಂದು ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ. ನಾಗರಾಜು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಮಾವು ಖರೀದಿ ಸುವಾಗ ರಾಸಾಯಿನಿಕ ದ್ರಾವಣ ಸಿಂಪಡಿಸುತ್ತಾರೆ ಎಂಬ ಭಯ ಗ್ರಾಹಕರಿಗೆ ಇರುತ್ತದೆ. ಅಲ್ಲದೆ, ರಾಸಾಯಿನಿಕ ದ್ರಾವಣ ಸಿಂಪಡಿಸಿದ ಮಾವಿನ ಹಣ್ಣುಗಳ ರುಚಿ ಕೂಡ ಕಡಿಮೆ. ಹೀಗಾಗಿ ಗ್ರಾಹಕರ ಹಿತದ ಜತೆಗೆ, ಮಾವು ಬೆಳೆಗಾರರಿಗೂ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎಲ್.ಲಲಿತಾ ಹೇಳಿದ್ದಾರೆ
ಅನ್ಲೈನ್ನಲ್ಲಿ ನೋಂದಣಿ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಬೆಂಗಳೂರು ನಗರ ಗ್ರಾಹಕರಿಗೆ ಮಾತ್ರ. ಈಗಾಗಲೇ ಮಾವು ಅಭಿವೃದ್ಧಿ ನಿಗಮದ ವೆಬ್ಸೈಟ್ www.ksmdmcl.org. ನಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಹಕರು Online/RTGS/NEFT ಮೂಲಕ ತಿಳಿಸಿರುವ ಖಾತೆಗೆ 100 ರೂ. ಪಾವತಿ ಸಬೇಕು. ಪಾವತಿ ವಿವರಗಳನ್ನು [email protected] ಗೆ ಕಳುಹಿಸಿಕೊಡಲು ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳು ಕೋರಿದ್ದಾರೆ. ಆಸಕ್ತರು, ಹೆಚ್ಚಿನ ಮಾಹಿತಿಗಾಗಿ 800-22236837 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು