ಮೇ ತಿಂಗಳಲ್ಲಿ ದಾಖಲೆ ಮಳೆ


Team Udayavani, May 26, 2018, 11:52 AM IST

may-tingalu.jpg

ಬೆಂಗಳೂರು: ನಿರ್ಗಮನ ಹಂತದಲ್ಲಿರುವ ಪೂರ್ವ ಮುಂಗಾರು ಶುಕ್ರವಾರ ಅಕ್ಷರಶಃ ಆಟಾಟೋಪ ಮೆರೆಯಿತು. ಇದರಿಂದ ಇಡೀ ಮೇ ತಿಂಗಳಲ್ಲಿನ ದಶಕದ ಮಳೆಗೆ ನಗರ ಸಾಕ್ಷಿಯಾಯಿತು.

ನಗರದಲ್ಲಿ ಮೇ ತಿಂಗಳಲ್ಲಿನ ವಾಡಿಕೆ ಮಳೆ 115.9 ಮಿ.ಮೀ. ಆದರೆ, ಇದುವರೆಗೆ ದುಪ್ಪಟ್ಟು ಅಂದರೆ 267.4 ಮಿ.ಮೀ.  ದಾಖಲಾಗಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿ ಮೇನಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಅಷ್ಟೇ ಅಲ್ಲ, ಶತಮಾನದಲ್ಲೇ ಎರಡನೇ ಅತಿ ಹೆಚ್ಚು ಮಳೆ ಕೂಡ ಇದಾಗಿದೆ. ಇನ್ನೂ ನಾಲ್ಕು ದಿನ ಬಾಕಿ ಇರುವುದರಿಂದ ಶತಮಾನದ ಮಳೆಗೆ ಸಾಕ್ಷಿಯಾದರೂ ಅಚ್ಚರಿ ಇಲ್ಲ ಎಂದು ಹವಾಮಾನ ತಜ್ಞರು ಹೇಳುತ್ತಾರೆ. 

1957ರ ಮೇನಲ್ಲಿ 287.1 ಮಿ.ಮೀ. ಮಳೆಯಾಗಿದ್ದು, ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಇನ್ನು 2017ರ ಮೇನಲ್ಲಿ 241.9 ಮಿ.ಮೀ. ಮಳೆಯಾಗಿತ್ತು. ಪ್ರಸಕ್ತ ಸಾಲಿನ ಮಳೆ ಈ ದಶಮಾನದ ದಾಖಲೆಯನ್ನು ಸರಿಗಟ್ಟಿದೆ. ಇಡೀ ತಿಂಗಳಲ್ಲಿ 11ರಂದು ಅತಿ ಹೆಚ್ಚು 49.5 ಮಿ.ಮೀ. ಹಾಗೂ ಶುಕ್ರವಾರ (ಮೇ 25) ರಾತ್ರಿ 8.30ರವರೆಗೆ 30.2 ಮಿ.ಮೀ. ಮಳೆಯಾಗಿದೆ.

ಒಟ್ಟಾರೆ 267.4 ಮಿ.ಮೀ. ಸುರಿದಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ. ಇನ್ನು ಕಳೆದ 25 ದಿನಗಳಲ್ಲಿ 12 ದಿನಗಳು ನಗರದಲ್ಲಿ ಮಳೆ ಸುರಿದಿದ್ದು, ಇದರಿಂದ 25 ದಿನಗಳಲ್ಲಿ 19 ದಿನಗಳು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುವುದು ಕಂಡುಬಂದಿದೆ. ಅದರಲ್ಲೂ ನಾಲ್ಕೈದು ದಿನಗಳು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಕುಸಿತ ಕಂಡುಬಂದಿದೆ ಎಂದೂ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಪೂರ್ವಮುಂಗಾರು ನಿರ್ಗಮನದ ವೇಳೆ ಈ ರೀತಿ ಮಳೆಯಾಗುವುದು ಸಾಮಾನ್ಯ. ತಮಿಳುನಾಡಿನ ಕರಾವಳಿ ಸಮೀಪ ಮೇಲ್ಮೆ„ಸುಳಿಗಾಳಿ ಇದ್ದು, ಇದರಿಂದ ಕರ್ನಾಟಕದ ಒಳನಾಡಿನಲ್ಲಿ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ಉಂಟಾಗಿದೆ. ಹಾಗಾಗಿ, ಇನ್ನೂ ಎರಡು-ಮೂರು ದಿನಗಳು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಎಲ್ಲೆಲ್ಲಿ ಎಷ್ಟು ಮಳೆ?: ಈ ಮಧ್ಯೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಗರದ ವಿವಿಧೆಡೆ ಅಳವಡಿಸಿದ ಮಳೆ ಮಾಪನ ಕೇಂದ್ರಗಳಲ್ಲಿ ಶುಕ್ರವಾರ ಗರಿಷ್ಠ 59 ಮಿ.ಮೀ. ಮಳೆ ದಾಖಲಾಗಿದೆ. ದಾಸನಪುರದಲ್ಲಿ 50.5 ಮಿ.ಮೀ., ಯಲಹಂಕದಲ್ಲಿ 30.5, ಚಿಕ್ಕಬಾಣಾವರ 41, ಹೊಸಕೋಟೆ 53, ಕೊಡತಿ 29.5, ಎಚ್‌ಎಸ್‌ಆರ್‌ ಲೇಔಟ್‌ 11.5, ಹುಸ್ಕೂರು 37.5, ಹೆಸರಘಟ್ಟ 27.5, ನಾಗರಬಾವಿ 22.5, ಕೂಡಿಗೇಹಳ್ಳಿ 17, ಮಾದಾವರ 30.5, ಯಶವಂತಪುರ 12, ಲಾಲ್‌ಬಾಗ್‌ 19.5, ಬಸವನಗುಡಿ 18 ಮಿ.ಮೀ. ಮಳೆಯಾಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಮೇನಲ್ಲಿ ನಗರದಲ್ಲಿ ಬಿದ್ದ ಮಳೆ (ಹವಾಮಾನ ಇಲಾಖೆ ಪ್ರಕಾರ).
ವರ್ಷ    ಮಳೆ (ಮಿ.ಮೀ)

2018 (ಮೇ 25ಕ್ಕೆ)    267.4
2017    241.9
2016    140.6
2015    178.4
2014    74.6
2013    151
2012    143.6
2011    150.5
2010    108.2
2009    150
2008    84.8
1957    287.1

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.