ಭಾರತದಲ್ಲಿರುವುದು ಬ್ರಿಟಿಷರು ಗಾಂಧಿ,ನೆಹರೂ ಇರಿಸಿದ್ದ ಜೈಲುಗಳೇ: ಮೋದಿ
Team Udayavani, May 28, 2018, 7:27 PM IST
ಹೊಸದಿಲ್ಲಿ : ಒಂಬತ್ತು ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೈದು ಲಂಡನ್ಗೆ ಪರಾರಿಯಾಗಿರುವ ಮದ್ಯ ದೊರೆ, ಅನಿವಾಸಿ ಭಾರತೀಯ, ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ವಿಷಯದಲ್ಲಿ ಬ್ರಿಟನ್ ನ್ಯಾಯಾಲಯ ‘ಭಾರತೀಯ ಜೈಲುಗಳ ಸ್ಥಿತಿಗತಿ’ ಬಗ್ಗೆ ಪ್ರಶ್ನಿಸಿರುವುದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರಿಗೆ ಖಡಕ್ ಉತ್ತರ ಕೊಟ್ಟಿರುವ ಸಂಗತಿ ಇದೀಗ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮೂಲಕ ಬಹಿರಂಗಕ್ಕೆ ಬಂದಿದೆ.
“ಭಾರತದ ಸ್ವಾತಂತ್ರ್ಯಕ್ಕೆ ಮುನ್ನ ಆಗಿನ ಬ್ರಿಟಿಷ್ ಸರಕಾರ ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧೀಜಿ ಮತ್ತು ಜವಾಹರಲಾಲ್ ನೆಹರೂ ಅವರನ್ನು ಬಂಧನದಲ್ಲಿ ಇರಿಸಿದ್ದ ಜೈಲುಗಳು ಇವೇ ಆಗಿವೆ’ ಎಂದು ಪ್ರಧಾನಿ ಮೋದಿ ಅವರು ಬ್ರಿಟಿಷ್ ಪ್ರಧಾನಿ ತೆರೆಸಾ ಮೇ ಅವರಿಗೆ ನೆನಪಿಸಿಕೊಟ್ಟಿದ್ದಾರೆ ಎಂದು ಸಚಿವ ಸುಶ್ಮಾ ಸ್ವರಾಜ್ ಇಂದು ಸೋಮವಾರ ಬಹಿರಂಗಪಡಿಸಿದರು.
ಗಾಂಧಿ, ನೆಹರೂ ಅವರನ್ನು ಬಂಧನಲ್ಲಿ ಇರಿಸುವಾಗಿನ ಭಾರತೀಯ ಜೈಲುಗಳ ಸ್ಥಿತಿ ಗತಿ ಬಗ್ಗೆ ಇಲ್ಲದಿದ್ದ ಕಾಳಜಿ ಈಗ ವಿಜಯ್ ಮಲ್ಯ ಅವರನ್ನು ಬಂಧಿಸಿಡುವ ಜೈಲಿನ ಬಗ್ಗೆ ಬ್ರಿಟಿಷ್ ನ್ಯಾಯಾಲಯಗಳಿಗೆ ಬಂದುದಾದರೂ ಹೇಗೆ ಮತ್ತು ಏಕೆ ಎಂದು ಪ್ರಧಾನಿ ಮೋದಿ, ಬ್ರಿಟಿಷ್ ಪ್ರಧಾನಿಯನ್ನು ಪ್ರಶ್ನಿಸಿರುವುದಾಗಿ ಸ್ವರಾಜ್ ತಿಳಿಸಿದರು. ಮೋದಿ ಅವರ ಈ ಸಂದೇಶವನ್ನು ಈ ವರ್ಷ ಎಪ್ರಿಲ್ ನಲ್ಲಿ ಲಂಡನ್ನಲ್ಲಿ ಉಭಯ ನಾಯಕರು ಭೇಟಿಯಾದ ಸಂದರ್ಭದಲ್ಲಿ ತಿಳಿಸಲಾಗಿತ್ತು.
12 ಭಾರತೀಯ ಬ್ಯಾಂಕುಗಳನ್ನು ಒಳಗೊಂಡ ಎಸ್ಬಿಐ ನೇತೃತ್ವದ ಕನ್ಸಾರ್ಶಿಯಮ್, ವಿಜಯ್ ಮಲ್ಯ ವಿರುದ್ಧದ ಗಡೀಪಾರು ದಾವೆಯನ್ನು ಜಯಿಸಿದ್ದು ಈಗಿನ್ನು ಅವು ಮಲ್ಯ ಅವರಿಂದ ತಮಗಿರುವ ಬಾಕಿ ಸಾಲವನ್ನು ವಸೂಲಿ ಮಾಡಬಹುದಾಗಿದೆ ಎಂದು ಸ್ವರಾಜ್ ಹೇಳಿದರು.
ವಿಜಯ್ ಮಲ್ಯ ಅವರು ದೇಶದ ಹಣಕಾಸು ಸಂಸ್ಥೆಗಳಿಗೆ ವಂಚನೆಗೈದು ವಿದೇಶಕ್ಕೆ ಪಲಾಯನ ಮಾಡಿರುವ ಹಾಗೂ ಜಾರಿ ನಿರ್ದೇಶನಾಲಯದಿಂದ ಕ್ರಿಮಿನಲ್ ವಿಚಾರಣೆಗೆ ಗುರಿಯಾಗಿರುವ 53 ಮಂದಿಯಲ್ಲಿ ಒಬ್ಬರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ