ರೇಬಿಸ್‌ ಗೆ ನಾಟಿ ಔಷಧ ರಾಮಬಾಣ ; 5,000 ಜನರಿಗೆ ಚಿಕಿತ್ಸೆ


Team Udayavani, Jun 2, 2018, 4:40 AM IST

rabies.jpg

ಆಲಂಕಾರು: ಹುಚ್ಚುನಾಯಿ ಕಚ್ಚಿದರೆ ರೇಬಿಸ್‌ ರೋಗದ ಸಾಧ್ಯತೆ ಹೆಚ್ಚು. ಅದರಿಂದ ಪಾರಾಗಲು ರೇಬಿಸ್‌ ನಿರೋಧಕ ಚುಚ್ಚುಮದ್ದಿನ ಮೊರೆಹೋಗುತ್ತಾರೆ. ಇದರ ಮಧ್ಯೆ ಪುತ್ತೂರು ತಾಲೂಕು ಆಲಂಕಾರು ಗ್ರಾಮದ ಕೇಪುಳು ನಿವಾಸಿ ಅಣ್ಣಿ ಪೂಜಾರಿ ಎಂಬ ಪಂಡಿತರು 37 ವರ್ಷಗಳಿಂದ ಗಿಡಮೂಲಿಕೆಗಳನ್ನು ಬಳಸಿ ಔಷಧ ನೀಡುತ್ತಿದ್ದಾರೆ. ಈ ಔಷಧವನ್ನು ಒಂದು ಸಲ ತೆಗೆದುಕೊಂಡರೆ, ರೇಬಿಸ್‌ ವೈರಾಣು ನಿವಾರಣೆಯಾಗುತ್ತದೆ ಎಂದು ಇವರಿಂದ ಚಿಕಿತ್ಸೆ ಪಡೆದ ಅನೇಕರು ಹೇಳಿದ್ದಾರೆ.


ತಮ್ಮ ತಾಯಿಯ ತಾಯಿಯಿಂದ (ಅಜ್ಜಿ) ಈ ಔಷಧ ಕ್ರಮ ಕಲಿತ ಅಣ್ಣಿ ಪೂಜಾರಿ (66) ಈ ತನಕ 5 ಸಾವಿರಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಡಿತಕ್ಕೆ ಔಷಧ ಕೊಟ್ಟಿದ್ದಾರೆ. ಮನುಷ್ಯರಿಗೆ ಮಾತ್ರವಲ್ಲದೆ, ಜಾನುವಾರು, ನಾಯಿ, ಕೋಳಿ, ಸಾಕು ಹಂದಿಗಳಿಗೂ ನಾಟಿ ಪದ್ಧತಿಯ ಔಷಧ ನೀಡಿ, ಗುಣಪಡಿಸಿದ್ದಾರೆ. ಅವರ ಈ ಸಾಧನೆಗೆ ಆಲಂಕಾರು ಸಿ.ಎ. ಬ್ಯಾಂಕ್‌, ಮೂರ್ತೆದಾರರ ಸೇವಾ ಸಹಕಾರಿ ಸಂಘ, ಬಿಲ್ಲವ ಸಂಘ ಮುಂತಾದವು ಅವರನ್ನು ಸಮ್ಮಾನಿಸಿ, ಗೌರವಿಸಿವೆ. ಹುಚ್ಚು ನಾಯಿ ಕಚ್ಚಿದ ಮೇಲೆ ಮನುಷ್ಯರಿಗಾದರೆ 42ನೇ ದಿನ, ಪ್ರಾಣಿಗಳಿಗೆ ಕೇವಲ 20 ದಿನಗಳಲ್ಲಿ ರೇಬಿಸ್‌ ರೋಗ ಶುರುವಾಗುತ್ತದೆ. ಉಲ್ಬಣಿಸಿದ ಮೇಲೆ ಯಾವ ಚಿಕಿತ್ಸೆಯೂ ಫ‌ಲ ನೀಡುವುದಿಲ್ಲ. ಆಮೇಲೆ ಮೂರು ದಿನಗಳಷ್ಟೇ ಆಯಸ್ಸು.

ಅಣ್ಣಿ ಪೂಜಾರಿ ಅವರು ಕೊಡುವ ಔಷಧಕ್ಕೆ ದರ ನಿಗದಿಯಿಲ್ಲ. ಚಿಕಿತ್ಸೆ ಪಡೆದವರು ತಮಗೆ ತೋಚಿದಷ್ಟು ಹಣ ಕೊಡುತ್ತಾರೆ. ಹಲವು ಜನರಿಗೆ ಉಚಿತವಾಗಿ ಔಷಧ ವಿತರಿಸಿದ್ದೂ ಇದೆ. ಈ ಔಷಧಕ್ಕೆ ಯಾವುದೇ ಪಥ್ಯವಿಲ್ಲ. ಆದರೆ. ಚಿಕಿತ್ಸೆ ಪಡೆದ ದಿನ ಮದ್ಯ ಸೇವಿಸುವಂತಿಲ್ಲ. ರಾತ್ರಿ ಊಟ ಮಾಡಿದ ಮೇಲೆ ಔಷಧ ಸೇವಿಸಿ ನಿದ್ರಿಸಬೇಕು. ಬೆಳಗ್ಗೆ ತಲೆಯ ಮೇಲೆ ತಣ್ಣೀರು ಸ್ನಾನ ಮಾಡಿ, ತಣ್ಣೀರನ್ನೇ ಕುಡಿಯಬೇಕು. ಆಮೇಲೆ ದೈನಂದಿನ ಕೆಲಸಗಳಿಗೆ ಹೋಗಲು ಯಾವುದೇ ಅಡ್ಡಿಯಿಲ್ಲ.

ಶೀಘ್ರ ಗುಣಮುಖ
ಕೇಪುಳು ಅಣ್ಣಿ ಪೂಜಾರಿ ಅವರ ಸಹೋದರಿ ರಾಮಕುಂಜದಲ್ಲಿ ಔಷಧ ನೀಡುತ್ತಾರೆ. ಈಗ ಎಲ್ಲ ಕಡೆಗಳಲ್ಲಿ ರಬ್ಬರ್‌ ಕೃಷಿಯಿಂದಾಗಿ ಗಿಡ ಮೂಲಿಕೆಗಳು ನಾಶವಾಗಿವೆ. ಗಿಡಮೂಲಿಕೆಗಳಿಗಾಗಿ ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯದ ವರೆಗೆ ಅಲೆದಾಡಬೇಕಾಗುತ್ತದೆ ಎನ್ನುತ್ತಾರೆ, ಅಣ್ಣಿ ಪೂಜಾರಿ (ಮೊ. 9880140030). ರೇಬಿಸ್‌ಗೆ ಮಾತ್ರವಲ್ಲದೆ ವಿಷಕಾರಿ ಜೇಡ ಕಚ್ಚಿದರೂ ಮೂರು ದಿನಗಳ ಔಷಧ ನೀಡಿ, ಗುಣಪಡಿಸುತ್ತಾರೆ. ಮೂಲವ್ಯಾಧಿಗೂ ಚಿಕಿತ್ಸೆ ನೀಡುತ್ತಾರೆ. 

— ಸದಾನಂದ ಆಲಂಕಾರು

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.