ಮೊಬೈಲ್ ಕಳ್ಳನೆಂದು ಶಂಕಿಸಿ ಅಪರಿಚಿತನಿಗೆ ಧರ್ಮದೇಟು
Team Udayavani, Jun 4, 2018, 11:26 AM IST
ಆಲಮಟ್ಟಿ: ವಾರದ ಸಂತೆಯಾದ ರವಿವಾರದಂದು ಸಂತೆಯಲ್ಲಿ ಕೆಲವು ವ್ಯಕ್ತಿಗಳ ಮೊಬೈಲ್ ಕಳ್ಳತನವಾಗಿದ್ದರಿಂದ ವ್ಯಕ್ತಿಯೊಬ್ಬನ ಶಂಕಾಸ್ಪದವಾಗಿ ಶಂಕಿಸಿ ಇಪ್ಪತ್ತಕ್ಕೂ ಹೆಚ್ಚು ಜನರು ಅಪರಿಚಿತ ವ್ಯಕ್ತಿಯನ್ನು ಥಳಿಸಿದ ಘಟನೆ ಜರುಗಿದೆ.
ಘಟನೆ ವಿವರ: ಆಲಮಟ್ಟಿಯ ವಾರದ ಸಂತೆಯು ರವಿವಾರವಾದ್ದರಿಂದ ಸಂತೆಗೆ ಆಗಮಿಸಿದ್ದ ಇಬ್ಬರ ವ್ಯಕ್ತಿಗಳ ಮೊಬೈಲ್ಗಳು ಹಾಗೂ ಓರ್ವ ವ್ಯಕ್ತಿಯ 5000 ರೂ. ಕಳ್ಳತನವಾಗಿದೆ. ಒಬ್ಬನ ಮೊಬೈಲ್ ಕಳ್ಳತನವಾಗುವಾಗ ಕಳ್ಳನನ್ನು ನೋಡಿ ಕಳ್ಳ ಕಳ್ಳ ಎಂದು ಚೀರಿದಾಗ, ಓರ್ವ ಯುವಕ ಓಡಿ ಹೋಗುವುದನ್ನು ಕಂಡ ಸಂತೆಗೆ ಬಂದ ಜನ ಅಪರಿಚಿವ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿ ಕೊನೆಗೆ ಆ ವ್ಯಕ್ತಿಯನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನ: ಸೇರಿದ ಜನರು ಧರ್ಮದೇಟು ನೀಡುತ್ತಿರುವಾಗ ವ್ಯಕ್ತಿಯೋರ್ವನನ್ನು ನೂಕಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಕುಪಿತಗೊಂಡ ಜನ ಮತ್ತೆ ಥಳಿಸಲಾರಂಬಿಸಿದ್ದಾರೆ. ಆತ ಹೊಡೆತ ತಾಳಲಾರದೆ ಓಡಿ ಹೋಗಲು ಯತ್ನಿಸಿದ್ದಾನೆ. ಕೆಲ ಮನೆಗಳ ಕಾಂಪೌಂಡ್ ಹಾರಿ ಒಬ್ಬರ ಮನೆಯಲ್ಲಿ ಅಡಗಿದ್ದಾನೆ. ಅಷ್ಟರೊಳಗೆ ಅಲ್ಲಿಗೆ ಬಂದ ಗ್ರಾಮಸ್ಥರು ಹಾಗೂ ಸಂತೆಗೆ ಬಂದ ಹಲವು ಜನ ಸೇರಿ ಆತನನ್ನು ಹಿಗ್ಗಾಮುಗ್ಗಾ ಮತ್ತೆ ಥಳಿಸಿದ್ದಾರೆ.
ಆಲಮಟ್ಟಿಯಲ್ಲಿ ಪ್ರತಿ ರವಿವಾರವೂ ಸಂತೆ ನಡೆಯುತ್ತದೆ. ಇಲ್ಲಿಗೆ ನೂರಾರು ಹಳ್ಳಿಗಳಿಂದ ಜನರು ಸಂತೆಗೆ ಆಗಮಿಸುತ್ತಾರೆ. ಅವರ ರಕ್ಷಣೆಗೆ ಇಲ್ಲಿ ಯಾವ ಪೊಲೀಸರು ಇರುವುದಿಲ್ಲ. ಕಳ್ಳತನ ಘಟನೆಗಳು ಮೇಲಿಂದ ಮೇಲೆ ನಡೆದರೂ ಅದರ ಬಗ್ಗೆ ಪೊಲೀಸರು ಮಾತ್ರ ಮೌನವಾಗುತ್ತಾರೆ. ಈಗ ಸಿಕ್ಕಿರುವ ವ್ಯಕ್ತಿಯು ಕಳ್ಳನೋ ಅಥವಾ ನಿರಪರಾಧಿಯೋ ಎನ್ನುವುದನ್ನು ನೋಡದೇ ಸಂತೆಗೆ ಆಗಮಿಸಿದ್ದ ಜನ ಅಪರಿಚಿತ ವ್ಯಕ್ತಿಯನ್ನು ರಸ್ತೆ ಮೇಲೆ ಎಸೆದಿದ್ದಾರೆ. ಇಷ್ಟೆಲ್ಲಾ ಘಟನೆಯಾದರೂ ಯಾವೊಬ್ಬ ಪೊಲೀಸರು ಘಟನಾ ಸ್ಥಳಕ್ಕೆ ಬರಲಿಲ್ಲ ಎಂದು ನೆರೆದ ಜನ ಮಾತನಾಡುತ್ತಿರುವುದು ಕಂಡು ಬಂತು.
ಸಿಂದಗಿ ಪಟ್ಟಣದ ವಿಜಯನಗರ ಬಡಾವಣೆಯ ನಿವಾಸಿಯಾಗಿದ್ದೇನೆ. ನನ್ನ ಮಿತ್ರ ಆಲಮಟ್ಟಿಗೆ ಬರುವುದಾಗಿ ತಿಳಿಸಿದ್ದ, ಅದಕ್ಕಾಗಿ ನಾನು ಆಲಮಟ್ಟಿಗೆ ಬಂದಿದ್ದೆ. ಅಲ್ಲಿ ಬಂದು ಸರಾಯಿ ಕುಡಿದಿದ್ದೆ. ಆದರೆ ಮೊಬೈಲ್ ಕಳ್ಳತನ ಮಾಡಿಲ್ಲ. ಏಕಾಏಕಿ ನುಗ್ಗಿದ 20ಕ್ಕೂ ಅಧಿಕ ಜನ ಹಿಗ್ಗಾಮುಗ್ಗಾ ಥಳಿಸಿದರು. ಎಷ್ಟೇ ಮನವಿ ಮಾಡಿದರೂ ಬಿಡಲಿಲ್ಲ. ಜೀವದ ಸಂಕಟಕ್ಕೆ ಅಲ್ಲಿಂದ ಓಡಿ ಹೋದೆ, ಆಗ ಕಾಂಪೌಂಡ್ ಜಿಗಿದು ಒಬ್ಬರ ಮನೆಯಲ್ಲಿ ಅಡಗಿದ್ದೆ, ಅಲ್ಲಿಯೂ ಬಂದ ಜನ ನನ್ನನ್ನು ಹೊಡೆದರು.
ಹನುಮಂತ ಕಟ್ಟಿಮನಿ, ಥಳಿತಕ್ಕೊಳಗಾದ ವ್ಯಕ್ತಿ
ಮೊಬೈಲ್ ಕಳ್ಳತನದ ಬಗ್ಗೆ ಯಾರೂ ಕೂಡ ಮಾಹಿತಿ ನೀಡಿಲ್ಲ. ಆದರೆ ಸಂತೆಯಲ್ಲಿ ಮೊಬೈಲ್ ಹಾಗೂ ಹಣ ಕಳ್ಳತನ ಮಾಡಿದ ವ್ಯಕ್ತಿಯನ್ನು ಜನರು ಹೊಡೆಯುತ್ತಿದ್ದಾರೆ ಎಂದು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಸಿಬ್ಬಂದಿಯನ್ನು ಕಳಿಸಲಾಗಿದ್ದು ಅಲ್ಲಿಯ ಜನರೇ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಎಸ್.ಡಿ. ಕೊಲ್ಹಾರ, ಪಿಎಸೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ
Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ
MUST WATCH
ಹೊಸ ಸೇರ್ಪಡೆ
Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
ಬಿಗ್ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ವರ್ಗಾವಣೆ ಕೇಸ್ ದಾಖಲಿಸಿದ ಇ.ಡಿ
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ