ಕೊರಳಲ್ಲಿ ಹಾವು ಸುತ್ತಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿದ!
Team Udayavani, Jun 8, 2018, 6:45 AM IST
ರೋಣ: ಸತತ 6 ತಿಂಗಳಿಂದ ಮಾಸಾಶನ ಬಾರದ ಹಿನ್ನೆಲೆಯಲ್ಲಿ ಪಟ್ಟಣದ ವಯೋ ವೃದ್ಧನೊಬ್ಬ ಜೀವಂತ ಹಾವನ್ನು ಕೊರಳಿನಲ್ಲಿ ಸುತ್ತಿಕೊಂಡು ತಹಶೀಲ್ದಾರ್, ಉಪ ಖಜಾನೆ ಇಲಾಖೆ ಕಾರ್ಯಾಲಯಕ್ಕೆ ತೆರಳಿ ಮಾಸಾಶನ ಬಿಡುಗಡೆಗೆ ಒತ್ತಾಯಿಸಿದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಸಾಕಷ್ಟು ಬಾರಿ ಕಚೇರಿಗೆ ಅಲೆದರೂ ತನ್ನ ಕೆಲಸಕ್ಕೆ ಸ್ಪಂದಿಸದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ರಾಜಾಖಾನ, ಬೆಳಗ್ಗೆ ಜೀವಂತ ಹಾವಿನೊಂದಿಗೆ ತಹಶೀಲ್ದಾರ್, ಉಪ ಖಜಾನೆಯ ಕಚೇರಿಗೆ ಆಗಮಿಸಿ, ನನಗೆ ಅಂಗವಿಕಲ ಮಾಸಾಶನ ಬಿಡುಗಡೆ ಮಾಡುತ್ತಿರೋ ಇಲ್ಲವೋ? ಇಲ್ಲದಿದ್ದರೇ ನಿಮ್ಮ ಕಚೇರಿಯಲ್ಲಿ ಹಾವನ್ನು ಬಿಟ್ಟು ಹೋಗುವೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ.
ಇದರಿಂದ ಭಯಗೊಂಡ ಕಚೇರಿ ಸಿಬ್ಬಂದಿ, ತಾಂತ್ರಿಕ ದೋಷದಿಂದ ನಿಮ್ಮ ಖಾತೆಗೆ ಮಾಸಾಶನ ಜಮಾ ಆಗಿಲ್ಲ. ಈ ತಿಂಗಳಿಂದ ಜಮಾ ಮಾಡಲಾಗಿದೆ ಎಂದು ಖಜಾನೆ ಅಧಿ ಕಾರಿಗಳು ಉತ್ತರಿಸಿದ ನಂತರ ಕಚೇರಿಯಿಂದ ಹೊರ ಹೋದ. ನಂತರ ವಿವಿಧ ಸ್ಥಳಗಳಲ್ಲಿ ಕೊರಳಿನಲ್ಲಿ ಹಾವು ಹಿಡಿದು ಜನರ ಮುಂದೆ ಪ್ರದರ್ಶಿಸಿದ.
ಈ ಕುರಿತು ಪ್ರತಿಕ್ರಿಯಿಸಿರುವ ರೋಣ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ, ಹಾವಿನೊಂದಿಗೆ ವ್ಯಕ್ತಿಯೋರ್ವ ಮಾಸಾಶನ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಉಪ ಖಜಾನೆ ಕಚೇರಿಗೆ ಬಂದಿದ್ದ. ಇದು ನನ್ನ ಗಮನಕ್ಕೆ ಬಂದಿಲ್ಲ. ನಾನು ಕಚೇರಿಯಲ್ಲಿ ಇರದೇ ಇರುವ ಸಮಯದಲ್ಲಿ ಏನಾದರೂ ಬಂದಿದ್ದರೆ ಖಜಾನೆ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಅವರ ಮಾಸಾಶನ ಬಿಡುಗಡೆ ಮಾಡಲು ಆದೇಶ ನೀಡುತ್ತೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
MUST WATCH
ಹೊಸ ಸೇರ್ಪಡೆ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ