ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಚಿವ ಯು.ಟಿ .ಖಾದರ್
Team Udayavani, Jun 10, 2018, 11:30 AM IST
ಬೆಳ್ತಂಗಡಿ: ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ರಂಜಾನ್ ಉಪವಾಸ ಮಾಸವಾದ ಕಾರಣ ದೇವಸ್ಥಾನದ ಒಳಗೆ ಪ್ರವೇಶಿಸಿದ ಸಚಿವ ಖಾದರ್ ದೇವರ ಕಾಣಿಗೆ ಹುಂಡಿಕೆ ಹಣ ಹಾಕಿ, ಬಳಿಕ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಜೊತೆ ಮಾತುಕತೆ ನಡೆಸಿದರು. ಹೆಗ್ಗಡೆ ಅವರು ಸಚಿವರನ್ನು ಅಭಿನಂದಿಸಿದರು.
ಬೆಳಗ್ಗೆಯೇ ಮಾಂಸಹಾರ ಸೇವಿಸಿದ್ದ ಕಾರಣ ಅವರು ಜೊತೆಯಲ್ಲಿದ್ದವರ ಸೂಚನೆಯ ಮೇರೆಗೆ ದೇವಾಲಯದ ಒಳಗೆ ಪ್ರವೇಶಿಸಲಿಲ್ಲ ಎಂದು ವರದಿಯಾಗಿದೆ.
ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಅಭಯಚಂದ್ರ ಜೈನ್ ಅವರು ಈ ವೇಳೆ ಉಪಸ್ಥಿತರಿದ್ದರು.