ಸಾಂಪ್ರದಾಯಿಕ ಮೀನುಗಾರಿಕೆ ಚುರುಕು


Team Udayavani, Jun 11, 2018, 6:20 AM IST

0906mle1e.jpg

ಮಲ್ಪೆ: ಮುಂಗಾರು ಆರಂಭಗೊಂಡಿದೆ. ಭಾರೀ ಮಳೆಗಾಳಿ ಬೀಸು ತ್ತಿದ್ದು, ಮಳೆಗಾಲದ ಪ್ರಭಾವ ತೋರಿ ಸುತ್ತಿದೆ. ಒಂದೊಮ್ಮೆ ಗಾಳಿ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಕಡಲಿ ಗಿಳಿಯಲು ನಿರ್ಧರಿಸುತ್ತಾರೆ. ಶುಕ್ರವಾರ ಬೆಣ್ಣೆಕುದ್ರು ಕುಲಮಹಾಸ್ತ್ರಿ ಮತ್ತು ವಡಭಾಂಡ ಬಲರಾಮ ದೇವರಿಗೆ ಪೂಜೆ ಸಲ್ಲಿಸಿ ಗಂಗಾಮಾತೆ ಪ್ರಸಾದವನ್ನು ಅರ್ಪಿಸಿ ಸಮುದ್ರ ಪೂಜೆ ನಡೆಸಿದ್ದಾರೆ.

ಮೀನುಗಾರಿಕೆಗೆ ರೆಡಿ
ಯಾಂತ್ರೀಕೃತ ಮೀನುಗಾರಿಕೆ ಅವಧಿ ಮುಗಿಯುತ್ತಿದ್ದಂತೆ  ಕರಾವಳಿ ಭಾಗದಲ್ಲಿ ಸಾಂಪ್ರ ದಾಯಿಕ ನಾಡದೋಣಿ ಮೀನು ಗಾರಿಕೆ ಪದ್ಧತಿ ಆರಂಭಗೊಳ್ಳು ತ್ತದೆ. ಈಗಾಗಲೇ ಮೀನು ಗಾರಿಕೆಗೆ ಬಳಸುವ ಬಲೆಗಳನ್ನು ಜೋಡಿಸುವ ಕಾಯಕ ಧಾರವನ್ನು ಮುಗಿಸಿ ಬಲೆಗಳನ್ನು ದೋಣಿಗೆ ತುಂಬಿಸಿ ಕಡಲಿಗಿಳಿಯಲು ಸಜ್ಜಾಗಿ ನಿಂತಿದ್ದಾರೆ.

ಸಹಕಾರಿ ತತ್ತ Ì
ಉಡುಪಿಯ ಮಲ್ಪೆ, ಕಾಪು, ಉಚ್ಚಿಲ, ಮಟ್ಟು, ಪಡುಕರೆ, ತೊಟ್ಟಂ, ಹೂಡೆ ಬೆಂಗ್ರೆ ಮುಂತಾದೆಡೆಗಳಲ್ಲಿ ನಾಡದೋಣಿ ಮೀನುಗಾರಿಕೆ ಹರಡಿಕೊಂಡಿದೆ. ಪ್ರತಿನಿತ್ಯ ಬೆಳಗ್ಗೆ ಮೀನುಗಾರಿಕೆಗೆ ತೆರಳುವ ಅವರು ಅದೇ ದಿನ ಸಂಜೆ ವಾಪಸಾಗುತ್ತಾರೆ.  ವರ್ಷದ 10 ತಿಂಗಳು ಯಾಂತ್ರೀಕೃತ ಬೋಟ್‌ಗಳಲ್ಲಿ ಕಾರ್ಮಿಕರಾಗಿ ದುಡಿ ಯುವ ಇವರು ಮಳೆಗಾಲದ ಎರಡು ತಿಂಗಳು ನಾಡದೋಣಿಯಲ್ಲಿ ಮಾಲಕ ರಾಗಿ ಮೀನುಗಾರಿಕೆ ನಡೆಸುತ್ತಾರೆ.  ಈ ಮೀನುಗಾರಿಕೆಯಿಂದ ಬಂದ ಲಾಭವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಸಹಕಾರಿ ತತ್ವದಡಿಯಲ್ಲಿ ಮೀನುಗಾರಿಕೆ ಮಂಗಳೂರಿನಿಂದ ಗಂಗೊಳ್ಳಿಯ ವರೆಗೆ‌ ನಡೆಯುತ್ತಿದೆ. 

40 ಗುಂಪುಗಳ ಮೀನುಗಾರಿಕೆ
ಕಾಪುವಿನಿಂದ ಕೋಡಿಬೆಂಗ್ರೆಯ ವರೆಗೆ ಒಟ್ಟು  40 ಡಿಸ್ಕೋ ಫಂಡ್‌ಗಳಿವೆ. ಅಂದರೆ 40 ಗುಂಪುಗಳು ಮೀನುಗಾರಿಕೆ ನಡೆಸುತ್ತವೆ. ಒಂದು ಗುಂಪಿನಲ್ಲಿ ಕನಿಷ್ಠ  35 ಗರಿಷ್ಠ 60 ಮಂದಿ ಇರುತ್ತಾರೆ. 800ಕ್ಕೂ ಅಧಿಕ ಟ್ರಾಲ್‌ದೋಣಿಗಳು, 30 ಕೈರಂಪಣಿ ದೋಣಿಗಳು ಮಳೆಗಾಲದಲ್ಲಿ ಮೀನುಗಾರಿಕೆ ನಡೆಸುತ್ತವೆ.  ಸುಮಾರು 30 ಸಾವಿರ ಮಂದಿ ಮೀನುಗಾರರು ನೇರವಾಗಿ ನಾಡದೋಣಿ ಮೀನುಗಾರಿಕೆಯಲ್ಲಿ  ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕರ ರಹಿತ ಸೀಮೆಎಣ್ಣೆ  ಪ್ರಮಾಣ ಹೆಚ್ಚಳಕ್ಕೆ ಆಗ್ರಹ
ನಾಡದೋಣಿ ಮೀನುಗಾರಿಕೆಗೆ ಸರಕಾರ ನೀಡುತ್ತಿರುವ ಕರರಹಿತ ಸೀಮೆಎಣ್ಣೆಯ ಪ್ರಮಾಣವನ್ನು ತಿಂಗಳಿಗೆ 400 ಲೀ.ಗೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದುವರೆಗೂ ಈಡೇರಲಿಲ್ಲ.  ಪ್ರಸ್ತುತ ತಿಂಗಳಿಗೆ 185 ಲೀ. ಮಾತ್ರ ನೀಡಲಾಗುತ್ತಿದ್ದು ನಾಡದೋಣಿ ಒಂದು ಟ್ರಿಪ್‌ ಮೀನುಗಾರಿಕೆ ನಡೆಸಬೇಕಿದ್ದರೂ ಕನಿಷ್ಠ  100ರಿಂದ 150 ಲೀ. ಅಗತ್ಯವಿದೆ. ಹೊಸ ಸರಕಾರ ಮೀನುಗಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕರರಹಿತ ಸೀಮೆ ಎಣ್ಣೆಯ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ. 

ಸಿಗಡಿ ಮೀನು ದೊರೆತರೆ ಲಾಭ
ಕಳೆದ ವರ್ಷ ನಾಡದೋಣಿ ಮೀನುಗಾರಿಕೆ ಹೆಚ್ಚು ಆಶಾದಾಯಕವಾಗಿರಲಿಲ್ಲ.  ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸಲು ಸಿಗುವ ದಿನ ಬಹಳ ಕಡಿಮೆ. ಬೆಲೆಬಾಳುವ ಸಿಗಡಿ ಮೀನು ದೊರೆತರೆ ಲಾಭದಾಯಕ ಮೀನುಗಾರಿಕೆ. ಉಳಿದಂತೆ ಬಂಗುಡೆ, ಬೂತಾಯಿ ಇನ್ನಿತರ ಸಣ್ಣಪುಟ್ಟ ಮೀನುಗಳು ದೊರೆತರೆ ಪ್ರಯೋಜನವಿಲ್ಲ. ಈ ಸಲದ ವಾತಾವರಣವನ್ನು ನೋಡುವಾಗ ಸಿಗಡಿ ಮೀನು ಸಿಗುವ ನಿರೀಕ್ಷೆ ಇದೆ. 
– ಕೃಷ್ಣ ಸುವರ್ಣ, ಪಡುತೋನ್ಸೆ ಬೆಂಗ್ರೆ

ಸಮುದ್ರಪೂಜೆ ಆದ ಮೇಲೆ ಮೀನುಗಾರಿಕೆ
ಮಲ್ಪೆಯ ನಾಡದೋಣಿ ಮೀನುಗಾರ ಸಂಘದ ವತಿಯಿಂದ ಶುಕ್ರವಾರ ಸಮುದ್ರಪೂಜೆ ನಡೆಸಲಾಗಿದೆ. ಆ ದಿನದಿಂದ ಯಾವತ್ತು ಬೇಕಾದರೂ ಮೀನುಗಾರಿಕೆಗೆ ತೆರಳಬಹುದಾಗಿದೆ.  
– ಜನಾರ್ದನ ತಿಂಗಳಾಯ, ಅಧ್ಯಕ್ಷರು, ಮಲ್ಪೆ ನಾಡದೋಣಿ ಮೀನುಗಾರರ ಸಂಘ

– ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.