ಕೂಳೂರು ಸೇತುವೆ; ಕುಸಿದ ತಡೆಗೋಡೆ ರಿಪೇರಿ ಆಗಲೇ ಇಲ್ಲ !


Team Udayavani, Jun 12, 2018, 3:15 AM IST

kulur-bridge-11-6.jpg

ಮಹಾನಗರ: ರಾಷ್ಟ್ರೀಯ ಹೆದ್ದಾರಿ ಕೂಳೂರುವಿನಲ್ಲಿರುವ ಹಳೆಯ ಸೇತುವೆ ಪಕ್ಕದಲ್ಲಿ ತಡೆಗೋಡೆ ಕುಸಿದು ತಿಂಗಳು ಹಲವಾದರೂ ಅದನ್ನು ಸರಿಪಡಿಸುವ ಗೋಜಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಾಗಿಲ್ಲ. ಪರಿಣಾಮವಾಗಿ ನಿತ್ಯ ಇಲ್ಲಿ ವಾಹನಗಳು ಆತಂಕದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯ ಎದುರಾಗಿದೆ.

ಇದೇ ಸ್ಥಳದಲ್ಲಿ ಖಾಸಗಿ ಬಸ್ಸೊಂದು ಓವರ್‌ ಟೇಕ್‌ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೂಳೂರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಅಪಾಯಕಾರಿಯಾಗಿ ನಿಂತ ಘಟನೆ ಜನವರಿ 15ರಂದು ಸಂಭವಿಸಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಸೇತುವೆಯ ತಡೆಗೋಡೆ ಮುರಿದಿದ್ದು ಬಸ್‌ ನ ಅರ್ಧ ಭಾಗ ಸೇತುವೆಯಿಂದ ಹೊರನುಗ್ಗಿತ್ತು. ಪ್ರಯಾಣಿಕರಿಂದ ತುಂಬಿದ್ದ ಬಸ್‌ ಈ ಮೂಲಕ ಸಂಭಾವ್ಯ ಅಪಾಯದಿಂದ ಕೂದಳೆಲೆ ಅಂತರದಲ್ಲಿ ಪಾರಾಗಿತ್ತು. ಅಂದು ಕುಸಿದಿದ್ದ ತಡೆಗೋಡೆ ಇನ್ನೂ ಕೂಡ ಮರು ನಿರ್ಮಾಣವಾಗಿಲ್ಲ!

ಗೋಳು ಕೇಳುವವರೇ ಇಲ್ಲ
ಕುಸಿದ ತಡೆಗೋಡೆಯನ್ನು ಕಟ್ಟಿಕೊಡುತ್ತೇವೆ ಎಂದು ರಾ.ಹೆ. ಪ್ರಾಧಿಕಾರದವರು ಕೆಲವು ಬಾರಿ ಹೇಳಿದರೂ ಕೂಡ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಹೆದ್ದಾರಿ ಬದಿಯ ಈ ಗೋಳು ಕೇಳುವವರೇ ಇಲ್ಲ. ಜತೆಗೆ, ಇತರ ಸಂದರ್ಭದಲ್ಲಿಯೂ ಇಲ್ಲಿನ ತಡೆಗೋಡೆಗೆ ವಾಹನಗಳು ಬಡಿದು ಬಹುತೇಕ ಧರಶಾಯಿಯಾದ ಘಟನೆಯೂ ಸಂಭವಿಸಿದೆ. ಆದರೆ ಯಾವುದು ಕೂಡ ದುರಸ್ತಿ ಕಾರ್ಯ ಶಾಶ್ವತವಾಗಿ ಇಲ್ಲಿ ನಡೆದಿಲ್ಲ. ತಡೆಗೋಡೆಯ ಕಾಂಕ್ರೀಟ್‌ ಕಂಬಗಳು ನದಿಯ ಪಾಲಾಗಿದ್ದರೆ ಅಪಾಯವಾಗದಂತೆ ಪೊಲೀಸರು ತಡೆಯಾಗಿ ಇಟ್ಟಿದ್ದ ಬ್ಯಾರಿಕೇಡ್‌ ಗಳು ಕೂಡ ಇಲ್ಲಿ ನದಿಗೆ ಬಿದ್ದಿವೆ. ರಾತ್ರಿ ಸೇತುವೆಯ ಮೇಲೆ ಬೀದಿದೀಪವೂ ಇಲ್ಲದ ಕಾರಣ ಯಾವುದೇ ಕ್ಷಣದಲ್ಲಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಸೇತುವೆ ಮೊದಲೇ ಅಗಲ ಕಿರಿದಾಗಿರುವುದರಿಂದ ಪಾದಚಾರಿಗಳು ಅಪಾಯದಲ್ಲಿ ಸೇತುವೆ ದಾಟ ಬೇಕಾಗುತ್ತದೆ.

ಕೂಳೂರು ಹಳೆ ಸೇತುವೆ ನಿರ್ಮಾಣಗೊಂಡು ಹಲವು ದಶಕಗಳೇ ಕಳೆದಿವೆ. ಉಡುಪಿ, ಉತ್ತರಕನ್ನಡ ಜಿಲ್ಲೆಗಳ ಕಡೆಯಿಂದ ಮಂಗಳೂರಿಗೆ ಬರುವ ಎಲ್ಲ ರೀತಿಯ ಸಾವಿರಾರು ವಾಹನಗಳು ಇದೇ ಸೇತುವೆ ಮೂಲಕವೇ ಸಾಗುತ್ತವೆ. ಎನ್‌.ಎಂ.ಪಿ.ಟಿ., ಎಂ.ಆರ್‌.ಪಿ.ಎಲ್‌., ಎಂ.ಸಿ.ಎಫ್‌. ಸೇರಿದಂತೆ ಬೃಹತ್‌ ಕೈಗಾರಿಕೆಗಳ ಉದ್ಯೋಗಿಗಳು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹೀಗಾಗಿ ಈ ಸೇತುವೆಯ ಕುಸಿದುಬಿದ್ದ ತಡೆಗೋಡೆಯನ್ನು ತುರ್ತಾಗಿ ಸರಿಪಡಿಸಬೇಕಾಗಿದೆ.

ತಡೆಗೋಡೆ ಕುಸಿತ; ಪ್ರತಿಕ್ರಿಯೆಗೆ ಸಿಗುತ್ತಿಲ್ಲ!
ಕೂಳೂರು ಸೇತುವೆಯ ತಡೆಗೋಡೆ ಕುಸಿದಿರುವುದು ಇಲ್ಲಿಯವರೆಗೆ ಯಾವ ಕಾರಣಕ್ಕಾಗಿ ರಿಪೇರಿ ಆಗಲಿಲ್ಲ ಹಾಗೂ ಯಾವಾಗ ರಿಪೇರಿ ಆಗಬಹುದು? ಎಂಬ ಪ್ರಶ್ನೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇಶಕರಿಗೆ ಜೂ. 6ರಿಂದ ಕರೆ ಮಾಡಿ ಸಂಪರ್ಕಕ್ಕೆ ಪ್ರಯತ್ನಿಸಿದರೂ ಅವರು ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಯ ಇತರ ಅಧಿಕಾರಿಗಳಿಗೆ ತಿಳಿಸಿದಾಗ, ‘ಈ ಕುರಿತು ನಾವು ಪ್ರತಿಕ್ರೀಯೆ ನೀಡುವಂತಿಲ್ಲ’ ಎಂದು ಸುಮ್ಮನಾಗುತ್ತಾರೆ. ಇಲಾಖೆಯ ಈ ನಿಲುವಿನ ಕಾರಣದಿಂದಾಗಿಯೇ ಕಳೆದ ಕೆಲವು ತಿಂಗಳಿನಿಂದ ಈ ತಡೆಗೋಡೆ ಇನ್ನೂ ದುರಸ್ತಿ ಕಂಡಿಲ್ಲ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ!.

ತಡೆಗೋಡೆ ಸರಿಪಡಿಸಿ
ನಿತ್ಯ ಈ ರಸ್ತೆಯಲ್ಲಿ ನಾವು ಸಂಚರಿಸುತ್ತಿದ್ದು, ಸೇತುವೆಯ ಪಕ್ಕದ ತಡೆಗೋಡೆ ಕೆಲವು ತಿಂಗಳಿನಿಂದ ಕುಸಿದು ಇನ್ನೂ ಅದರ ರಿಪೇರಿ ಆಗಿಲ್ಲ. ಉಡುಪಿಯಿಂದ ಮಂಗಳೂರು ಕಡೆ ಸಾಗುವ ಮೇಲ್ಸೇತುವೆ ಕಡಿದಾದ ತಿರುವು ಹೊಂದಿರುವುದರಿಂದ ನಿಯಂತ್ರಣ ತಪ್ಪಿದರೆ ವಾಹನಗಳು ನೇರ ನದಿಗೆ ಉರುಳಿ ಬೀಳುವ ಅಪಾಯವೂ ಇದೆ. ಹೀಗಾಗಿ ಇದನ್ನು ಸರಿಪಡಿಸುವುದು ಅಗತ್ಯ.
– ಅವಿನಾಶ್‌ ಉಪ್ಪಿನಂಗಡಿ, ಸ್ಥಳೀಯ ಉದ್ಯೋಗಿ

ಟಾಪ್ ನ್ಯೂಸ್

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

ಆನೆ ಕಂಡು ಚರಂಡಿಗೆ ಇಳಿದ ಬೊಲೆರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

ಕೊಳಚಿಕಂಬಳ: ಮರುವಾಯಿ ಹೆಕ್ಕಲು ನದಿಗಿಳಿದ ಓರ್ವ ನೀರುಪಾಲು; ಮೂವರನ್ನು ರಕ್ಷಿಸಿದ ಸ್ಥಳೀಯರು

ಕೊಳಚಿಕಂಬಳ: ಮರುವಾಯಿ ಹೆಕ್ಕಲು ನದಿಗಿಳಿದ ಓರ್ವ ನೀರುಪಾಲು; ಮೂವರನ್ನು ರಕ್ಷಿಸಿದ ಸ್ಥಳೀಯರು

Mangaluru ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Mangaluru ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

Mangaluru ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

3

Sandalwood: ನಿರುದ್ಯೋಗದ ಸುತ್ತ ಗಾಂಧಿನಗರ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.