ಶಿಖರ ಏರುವುದು ಸುಲಭವಲ


Team Udayavani, Jun 12, 2018, 4:19 PM IST

cta-4.jpg

ಸೊರಬ: ಸಾಧನೆಗೆ ಶಿಕ್ಷಣ, ಸೌಲಭ್ಯಗಳು ಮುಖ್ಯವಾಗುವುದಿಲ್ಲ. ಗುರಿ ಸಾಧಿಸಬೇಕೆಂಬ ಛಲವಿದ್ದಲ್ಲಿ ಅಗತ್ಯ ಸೌಲತ್ತುಗಳನ್ನು ದೊರಕಿಸುವ ಹೃದಯ ವೈಶಾಲ್ಯ ಇರುವವರು ಸಮಾಜದಲ್ಲಿ ಇರುತ್ತಾರೆ. ಇಂತಹವರ ನೆರವು
ಸಾಧಕರಿಗೆ ಬೆನ್ನೆಲಬಾಗಿ ನಿಲ್ಲುತ್ತದೆ ಎಂದು ಮೌಂಟ್‌ ಎವರೆಸ್ಟ್‌ ಶಿಖರರೋಹಿ ವಿಕ್ರಮ್‌ ಹೊನ್ನಾಳಿ ಹೇಳಿದರು.

ತಾಲೂಕಿನ ಆನವಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಯಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ತಮ್ಮ ಶಿಖರಾರೋಹಣದಲ್ಲಿ ಆದ ಅನುಭವಗಳನ್ನು ಹಂಚಿಕೊಂಡು ಅವರು ಮಾತನಾಡಿದರು.

ಮೌಂಟ್‌ ಎವರೆಸ್ಟ್‌ನಂತ ಶಿಖರ ಏರುವುದು ಸುಲಭದ ಮಾತಲ್ಲ. ಕಣ್ಣು ಸುತ್ತ ನೋಡಿದಷ್ಟು ದೂರ ಹಿಮದಿಂದ
ಆವೃತವಾದ ಶಿಖರಗಳು, ಕೊರೆಯುವ ಚಳಿ, ಕುಡಿಯಲು ನೀರು ಬೇಕೆಂದರೂ ಮಂಜನ್ನೇ ಕರಗಿಸಿ ಕುಡಿಯಬೇಕಾದ ಅನಿವಾರ್ಯತೆ ಇರುತ್ತದೆ ಎಂದರು.

 ಅಗತ್ಯವಿದ್ದಷ್ಟು ಮಾತ್ರ ಆಹಾರ ಸೇವನೆ ಹಾಗೂ ಪ್ರಕೃತಿಯೊಂದಿಗೆ ಹೋರಾಟ ಮಾಡಿ ಹಳ್ಳಕೊಳ್ಳ, ಪ್ರಪಾತಗಳನ್ನು ದಾಟಿ ಶಿಖರ ಏರುವುದು ಅತ್ಯಂತ ಕಷ್ಟಕರ. ಇಂತಹ ಅನುಭವಗಳೊಂದಿಗೆ ನಾನು ಶಿಖರದ ತುದಿಗೇರಿ ರಾಷ್ಟ್ರದ ಹಾಗೂ ಕನ್ನಡ ನಾಡಿನ ಒಬ್ಬ ಪ್ರತಿನಿ ಯಾಗಿ ಕನ್ನಡದ ಮತ್ತು ರಾಷ್ಟ್ರ ಧ್ವಜವನ್ನು ಹಾರಿಸಿದ್ದು ನನ್ನ ಮನಸ್ಸಿನಲ್ಲಿ ಬಹಳ ಉಲ್ಲಾಸ ನೀಡಿತು ಎಂದು ಹೇಳಿದರು.

ಹಿಮಗಳಿಂದ ಆವೃತವಾದ ಗಿರಿ ಪರ್ವತಗಳನ್ನು ಏರುವ ಮೊದಲು ನಮಗೆ ಅಗತ್ಯ ತರಬೇತಿ ನೀಡಿದ್ದಲ್ಲದೆ, ಸಲಕರಣೆಯನ್ನು ಸಹ ಒದಗಿಸಲಾಗಿತ್ತು. ಏ. 11ರಂದು ಶಿಖರಾರೋಹಣವನ್ನು ಆರಂಭಿಸಿದ ನಾವು, ಮೇ 17ಕ್ಕೆ
ಹಿಂದುರಿಗಿದೇವು. ಶಿಖರ ಏರುವ ಸಂದರ್ಭದಲ್ಲಿ ಒಂದು ಮತ್ತು ಎರಡನೇ ಹಂತ ದಾಟುವಾಗ ಕೊಂಚ ನಿರಳರಾಗಿದ್ದ ನಾವು, ಮೂರನೇ ಹಂತಕ್ಕೆ ಪಾದಾರ್ಪಣೆ ಮಾಡಿದಾಗ ಪ್ರಕೃತಿಯ ಪ್ರತಿರೋಧ ಎದುರಿಸಬೇಕಾಯಿತು.

ಗಿರಿ ಶಿಖರ ಏರಿದಂತೆ ಆಮ್ಲಜನಕದ ಕೊರತೆಯಿಂದಾಗಿ ಉಸಿರಾಡಲು ತೊಂದರೆಯಾದಾಗ ಐದು ಕೆ.ಜಿ. ತೂಕ
ಆಕ್ಸಿಜನ್‌ ಸಿಲಿಂಡರ್‌ ಆಳವಡಿಸಿಕೊಂಡು ಉಸಿರಾಟದ ತೊಂದರೆಯನ್ನು ನಿವಾರಿಸಿಕೊಳ್ಳುವಂತಾಯಿತು ಎಂದರು.
 
ಆಳದ ಪ್ರಪಾತಗಳನ್ನು ದಾಟುವಾಗ ಶೇರ್ಪಗಳ ಸಹಾಯದಿಂದ ದಾಟಿದೆವು. ಶಿಖರದ ಮೇಲೇರುತ್ತಿದ್ದಂತೆ ಅಲ್ಲಲ್ಲಿ ಕೊಳ್ಳಗಳಲ್ಲಿ ನಾಲ್ಕಾರು ಪರ್ವತಾರೋಹಿಗಳ ಶವವನ್ನು ಕಂಡಾಗ ಎದೆ ನಡುಗಿತು. ಆದರೂ ಗುರಿ ಮುಟ್ಟಲೇ ಬೇಕೆಂಬ ಛಲದಿಂದ ನಾವಿದ್ದ 25 ಜನರ ತಂಡದಲ್ಲಿ 8 ಜನ ಮಾತ್ರ ಶಿಖರದ ತುದಿಗೇರಲು ಸಾಧ್ಯವಾಯಿತು ಎಂದು
ಹೇಳಿದರು.

 ಶಿಖರದ ತುದಿಗೆ ಪಾದಾರ್ಪಣೆ ಮಾಡುತ್ತಿದ್ದಂತೆ ಮೈಯಲ್ಲಾ ರೋಮಾಂಚನ, ವಿಶ್ವದ ಅತ್ಯಂತ ಎತ್ತರದ ಪ್ರದೇಶ ಮುಟ್ಟಿದ ಹೆಮ್ಮೆ. ಕನ್ನಡ ನಾಡಿನ ಹಾಗೂ ದೇಶದ ಧ್ವಜ ಹಾರಿಸಿದ್ದು ಪದಗಳಲ್ಲಿ ಹೇಳಲು ಅಸಾಧ್ಯ ಎಂದು ತಮ್ಮ ಪರ್ವತಾರೋಹಣ ಸಂದರ್ಭದಲ್ಲಾದ ಅನುಭವಗಳನ್ನು ಹಂಚಿಕೊಂಡರು. 

ಈ ವೇಳೆ ಮೌಂಟ್‌ ಶಿಖರ ಏರಿದ ಪ್ರಥಮ ಪರ್ವತಾರೋಹಿಗಳಾದ ಥೇನ್‌ ಸಿಂಗ್‌ ಮತ್ತು ಎಡ್ಮಂಡ್‌ ಹಿಲ್ಲರಿ ಸ್ನೇಹದ ಬಗ್ಗೆ ಸ್ಮರಿಸಿ, ಇವರಲ್ಲಿ ಇದುವರೆಗೂ ಪ್ರಥಮ ಮೌಂಟ್‌ ಎವರೆಸ್ಟ್‌ ಶಿಖರದ ತುದಿಗೆ ಕಾಲಿಟ್ಟ ಪರ್ವತಾರೋಹಿ ಯಾರೆಂಬುದು ಅವರು ಇದುವರೆಗೂ ಹೇಳಿಲ್ಲ. ಇದೇ ಸ್ನೇಹ. ಸಾಧನೆಗಿಂತ ಸ್ನೇಹ ದೊಡ್ಡದು ಎಂಬುವುದನ್ನವರು ತೋರಿಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಿಇಒ ಮಂಜುನಾಥ್‌, ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌, ಗ್ರಾಪಂ
ಉಪಾಧ್ಯಕ್ಷ ಕೇಶವ ರಾಯ್ಕರ್‌, ಸದಸ್ಯರಾದ ಉಮೇಶ್‌ ಉಡುಗಣಿ, ಖಲಂದರ್‌ ಸಾಬ್‌, ಕೃಷ್ಣಮೂರ್ತಿ, ರೂಪಾ ಇತರರಿದ್ದರು. 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.