ಖಾಕಿ ಮೇಲೆ ಹತ್ಯೆಯ ಕೊಳೆ; ಚಡಚಣ ಎಸ್ಐ, 3 ಪೇದೆಗಳ ಸೆರೆ
Team Udayavani, Jun 17, 2018, 6:00 AM IST
ವಿಜಯಪುರ: ಭೀಮಾ ತೀರದ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಚಡಚಣ ಠಾಣೆಯ ಪಿಎಸ್ಐ ಗೋಪಾಲ ಹಳ್ಳೂರ, ಮೂವರು ಪೇದೆಗಳು ಸೇರಿ ನಾಲ್ವರು ಪೊಲೀಸರನ್ನು ಸಿಒಡಿ ಪೊಲೀಸರಿಂದ ಬಂಧಿಸಿದ್ದಾರೆ.ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಜೂ.28ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
2017, ಅ.30ರಂದು ಕೊಂಕಣಗಾಂವ ತೋಟದ ಮನೆಯಲ್ಲಿ ಚಡಚಣ ಠಾಣೆ ಪಿಎಸ್ಐ ಗೋಪಾಲ ಹಳ್ಳೂರ ನೇತೃತ್ವದಲ್ಲಿ ಭೀಮಾ ತೀರದ ಹಂತಕ ಧರ್ಮರಾಜ ಚಡಚಣನ ಎನ್ಕೌಂಟರ್ ನಡೆದಿತ್ತು. ಘಟನೆಯಲ್ಲಿ ಪಿಎಸ್ಐ ಹಳ್ಳೂರ ಕೈಗೆ ಕೂಡ ಗಾಯವಾಗಿ, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಧರ್ಮರಾಜ ಎನ್ಕೌಂಟರ್ ಆಗಿದ್ದ ದಿನವೇ ಆತನ ಸಹೋದರ ಗಂಗಾಧರ ಚಡಚಣ ಕಾಣೆಯಾಗಿದ್ದ.
ಆದರೆ ಧರ್ಮರಾಜನ ತಾಯಿ ವಿಮಲಾಬಾಯಿ ಮಾತ್ರ ತನ್ನ ಮಗನನ್ನು ಮಹದೇವ ಭೈರಗೊಂಡ ಕುಮ್ಮಕ್ಕಿನಿಂದ ಪೊಲೀಸರು ನಕಲಿ ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ. ಅದೇ ದಿನ ಕಾಣೆಯಾಗಿರುವ ಇನ್ನೊಬ್ಬ ಮಗ ಗಂಗಾಧರನನ್ನೂ ಭೈರಗೊಂಡ ಹತ್ಯೆ ಮಾಡಿದ್ದಾನೆ. ಇದರಲ್ಲಿ ಚಡಚಣ ಪೊಲೀಸರ ಪಾತ್ರವಿದೆ ಎಂದು ಹಿರಿಯ ಅ ಧಿಕಾರಿಗಳಿಗೆ ದೂರು ನೀಡಿದ್ದರು. ಇಷ್ಟಕ್ಕೆ ಬಿಡದೇ ಕಾಣೆಯಾಗಿರುವ ತಮ್ಮ ಮಗ ಗಂಗಾಧರನನ್ನು ಹುಡುಕಿಕೊಡುವಂತೆ ಕಲಬುರಗಿ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಎಸ್ಪಿ ಪ್ರಕಾಶ ನಿಕ್ಕಂ ಅವರಿಗೂ ಮನವಿ ಮಾಡಿದ್ದರು.
ದೂರು ದಾಖಲಿಸಿಕೊಂಡಿದ್ದ ನಗರದ ಪೊಲೀಸರು, ಹನುಮಂತ ಪೂಜಾರಿ, ಎಂಬ ಆರೋಪಿಯನ್ನು ಬಂಧಿ ಸಿದ್ದರು. ಬಂಧಿ ತ ಹತ್ಯಾ ಆರೋಪಿ ನೀಡಿದ ಹೇಳಿಕೆಯಲ್ಲಿ ಗಂಗಾಧರ ನಾಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಪೊಲೀಸರ ಪಾತ್ರ ಇರುವುದನ್ನು ಬಾಯಿ ಬಿಟ್ಟಿದ್ದ.
ಇದರಿಂದ ಸದರಿ ಪ್ರಕರಣದಲ್ಲಿ ತನಿಖಾ ಉಸ್ತುವಾರಿಗೆ ಖುದ್ದು ತಾವೇ ವಿಜಯಪುರಕ್ಕೆ ಆಗಮಿಸಿದ ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕಕುಮಾರ, ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದರು. ಪೊಲೀಸರ ಪಾತ್ರ ಇರುವುದು ಖಚಿತವಾಗುತ್ತಿದ್ದಂತೆ ಪ್ರಕರಣ ಅತ್ಯಂತ ಗಂಭೀರ ಸ್ಪರೂಪ ಅರಿತ ಐಜಿಪಿ ತನಿಖೆಯನ್ನು ಸಿಒಡಿಗೆ ವಹಿಸಲು ಕೋರಿದ್ದರು.
ಡಿಎಸ್ಪಿ ಜನಾರ್ದನ, ಸಿಪಿಐ ಎಂ.ಎ. ಮೊಹ್ಮದ್ ಅವರಿದ್ದ ಸಿಒಡಿ ತನಿಖಾ ತಂಡ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿತ್ತು. ಈ ಪ್ರಕರಣದಲ್ಲಿ ಸಿದ್ಧಗೊಂಡ ತಿಕ್ಕುಂಡಿ ಎಂಬ ಇನ್ನೊಬ್ಬ ಆರೋಪಿಯನ್ನು ಬಂ ಧಿಸಿದ್ದರು. ಧರ್ಮರಾಜ ಚಡಚಣ ಎನ್ಕೌಂಟರ್ ದಿನವೇ ಪಿಎಸ್ಐ ಹಳ್ಳೂರ ಅವರು ಗಂಗಾಧರನನ್ನೂ ಬಂ ಧಿಸಿ ಅವರ ಎದುರಾಳಿ ಮಹಾದೇವ ಭೈರಗೊಂಡನ ವಶಕ್ಕೆ ಒಪ್ಪಿಸಿದ್ದರು. ಆಗ ನಾವೇ ಗಂಗಾಧರನನ್ನು ಹತ್ಯೆ ಮಾಡಿ, ಶವವನ್ನು ಭೀಮಾ ನದಿಗೆ ಎಸೆದಿದ್ದಾಗಿ ಪೊಲೀಸರಿಗೆ ಹನುಮಂತ ಹಾಗೂ ಸಿದ್ಧಗೊಂಡ ಇಬ್ಬರೂ ಹೇಳಿಕೆ ನೀಡಿದ್ದರು.
ಪಿಎಸ್ಐ ಗೋಪಾಲ ಹಳ್ಳೂರ, ಪೇದೆಗಳಾದ ಚಂದ್ರಶೇಖರ ಜಾಧವ, ಗದ್ದೆಪ್ಪ ನಾಯೊRàಡಿ ಹಾಗೂ ಸಿದ್ಧಾರೂಢ ರೂಗಿ ಅವರ ಪಾತ್ರ ಇರುವುದು ಖಚಿತವಾಗುತ್ತಿದ್ದಂತೆ ಬಂ ಧಿಸಿದ್ದಾರೆ. ಬಂ ಧಿತರನ್ನು ಶನಿವಾರ ಇಂಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ಜೂ.28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಿಎಸ್ಐ, ನಾಲ್ವರು ಪೊಲೀಸರ ಬಂಧನವನ್ನು ಖಚಿತಪಡಿಸಿರುವ ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ, ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಮಹಾದೇವ ಭೈರಗೊಂಡ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಗೋಪಾಲ ಹಳ್ಳೂರ, ಮೂವರು ಪೇದೆಗಳನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿ ಮಹಾದೇವ ಭೈರಗೊಂಡ ಬಂಧನಕ್ಕೆ ಜಾಲ ಬೀಸಲಾಗಿದೆ.
– ಪ್ರಕಾಶ ನಿಕ್ಕಂ, ವಿಜಯಪುರ ಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್