ಕೋಮುವಾದ, ಜಾತಿವಾದ ಮರೆಯಾಗಿಲ್ಲ
Team Udayavani, Jun 18, 2018, 11:49 AM IST
ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಕೋಮುವಾದ, ಜಾತಿವಾದ ಮರೆಯಾಗಿಲ್ಲ. ಬದಲಿಗೆ ಇತ್ತೀಚಿನ ದಿನಗಳಲ್ಲಿ ಉಲ್ಬಣಗೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಭಾನುವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಾತಿವಾದಿ, ಕೋಮುವಾದಿ ಶಕ್ತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಹಿಂದೂ ರಾಷ್ಟ್ರವಾಗಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಆರ್ಎಸ್ಎಸ್ಗೆ ಸಿದ್ಧಾಂತಗಳಿಗೆ ಬದ್ಧವಾಗಿರಬೇಕೆಂಬ ನೀತಿಯನ್ನು ಬಿಜೆಪಿ ಹೊಂದಿದ್ದು, ತಮ್ಮ ಉದ್ದೇಶ ಹಿಂದುತ್ವ ಬೆಳೆಸುವುದು ಎಂಬುದನ್ನು ಅವರೇ ಅನೇಕ ಬಾರಿ ನೇರವಾಗಿ ಒಪ್ಪಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ದೇಶದಲ್ಲಿ ಹಿಂದುತ್ವ ಬೆಳೆಸುವಂತಹ ಕೆಲಸಗಳನ್ನು ಮಾಡುತ್ತಿದ್ದು, ಯುವಕರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಸರ್ಕಾರದ ರಕ್ಷಣೆ ಮಾಡಬೇಕಿದೆ: ಕೋಮುವಾದಿ, ಜಾತಿವಾದಿ ವಿರುದ್ಧದ ನಿಲುವುಗಳನ್ನು ಹೊಂದಿರುವ ಮೈತ್ರಿ ಸರ್ಕಾರವೊಂದು ರಾಜ್ಯದಲ್ಲಿ ರಚನೆಯಾಗಿದ್ದು, ಸ್ವಾರ್ಥಕ್ಕಾಗಿ ಜಗಳವಾಗುತ್ತಿದೆ. ರಾಜಕೀಯ ಸ್ಥಾನಮಾನಗಳ ದುರಾಸೆಯು ಸಹ ಜಾತಿವಾದವೇ ಆಗಿರುತ್ತದೆ. ಆದರೆ, ಕೋಮುವಾದ ವಿರುದ್ಧ ನಿಲುವು ಹೊಂದಿರುವಂತಹ ಸರ್ಕಾರ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಮೇಲ್ವರ್ಗದವರು ಮೊದಲ ಜಾತಿ ಬಿಡಬೇಕು: ಮೇಲ್ವರ್ಗದವರು ಮೊದಲು ಜಾತಿಯನ್ನು ಬಿಡಬೇಕಿದೆ. ಆದರೆ, ಸಮಾಜದಲ್ಲಿ ಯಾವುದೇ ಗುರುತಿಸುವಿಕೆಯಿಲ್ಲದ ಕೆಳ ವರ್ಗದವರು ಹಾಗೂ ದಲಿತರನ್ನು ಜಾತಿ ಬಿಡಿ ಎನ್ನುವುದು ಎಷ್ಟು ಸರಿ?. ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಭಾಷಣ ಮಾಡುತ್ತಾರೆ. ಆದರೆ, ಆರ್ಎಸ್ಎಸ್ನವರು ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರಾಗಿ ನೋಡುತ್ತಾರೆ ಎಂದು ಗೋವಿಂದರಾವ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಧ್ಯಾಪಕ ನಟರಾಜ ಹುಳಿಯಾರ್, ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಚಿಂತಕ ರುದ್ರಪ್ಪ ಹನಗವಾಡಿ, ಪ್ರಗತಿಪರ ಚಿಂತಕಿ ಅಖೀಲ ಸೇರಿದಂತೆ ಇತರರು ಇದ್ದರು.
ಹೆಗಡೆ ಪುಟುಗೋಸಿ ರಾಜಕಾರಣಿ: ಜೆಡಿಎಸ್ ಪಕ್ಷವನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪುಟುಗೋಸಿ ಪಕ್ಷ ಎಂದಿದ್ದಾರೆ. ಅವರೊಬ್ಬ ಪುಟುಗೋಸಿ ರಾಜಕಾರಣಿಯಾಗಿದ್ದು, ಅವರ ನಾಲಿಗೆಗೆ ಲಂಗು-ಲಗಾಮು ಯಾವುದು ಇಲ್ಲ. ಹೆಗಡೆ ತಮ್ಮ ರೀತಿಯಲ್ಲಿಯೇ ಮಾತನಾಡುತ್ತಾರೆ.
ಪ್ರಧಾನಿ ಮೋದಿಯವರು ಈಗ ನೋಟು ಅಮಾನ್ಯ ಹಾಗೂ ಜಿಎಸ್ಟಿ ಬಗ್ಗೆ ಮಾತನಾಡುವುದಿಲ್ಲ. ಚುನಾವಣೆ ಬಂದಾಗ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಮೂಲಕ ರಕ್ತ ಕುದಿಸುವಂತಹ ಕೆಲಸ ಮಾಡುತ್ತಾರೆ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್