ಒಳಚರಂಡಿ ಸರಿಯಾಗಿಲ್ಲ; ಕೆರೆಗೆ ಆವರಣಗೋಡೆಯೂ ಇಲ್ಲ


Team Udayavani, Jun 19, 2018, 6:05 AM IST

1806kdlm13ph1.jpg

ಕುಂದಾಪುರ: ಅರೆಬರೆಯಾಗಿ ಕಾಮಗಾರಿ ಪೂರೈಸಿ ನಡುರಸ್ತೆಯಲ್ಲಿ ತಲೆ ಎತ್ತಿ ನಿಂತ ಫ್ಲೈ ಓವರ್‌ನ ನಂತರದಿಂದ ಆರಂಭವಾಗುವ ಶ್ರೀದೇವಿ ನರ್ಸಿಂಗ್‌ ಹೋಂನಿಂದ ಆರಂಭವಾಗುವ ಶಾಂತಿನಿಕೇತನ ವಾರ್ಡ್‌ ಮೆಸ್ಕಾಂನವರೆಗೂ ವ್ಯಾಪಿಸಿದೆ.

ಆವರಣ ಗೋಡೆಯಿಲ್ಲ
ಈ ವಾರ್ಡ್‌ನಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳು ಸ್ಥಳೀಯವಾಗಿ ಇಲ್ಲ. ಆದರೆ ಇಡೀ ಪುರಸಭೆಯಲ್ಲಿ ಎಲ್ಲೆಲ್ಲೂ ಕಂಡುಬಂದಂತೆ ಒಳಚರಂಡಿಯ ಸಮಸ್ಯೆ ಇಲ್ಲಿಯೂ ಇದೆ. ನಾಗಬನ ಬಳಿ ಪತ್ರಿಕೆ ಪ್ರತಿನಿಧಿ ಹೋದಾಗ ಅಲ್ಲಿನ ನಿವಾಸಿಗಳಿಗೆ ಒಳಚರಂಡಿಯ ಸಮಸ್ಯೆ ಇಲ್ಲ ಎಂದು ವೇದ್ಯವಾಯಿತು. ಸ್ಥಳೀಯರು ಕೂಡಾ ಇದಕ್ಕೆ ಪೂರಕವಾಗಿ ಮಾತನಾಡಿದರು. ಒಳಚರಂಡಿ ಕಾಮಗಾರಿ ಆಗಿದೆ, ರಸ್ತೆಯೂ ಆಗಿದೆ ಎಂದು. ಅಲ್ಲೊಂದು ಕೆರೆಯಿದ್ದು ಅದನ್ನು 20 ಲಕ್ಷ ರೂ. ಶಾಸಕರ ನಿಧಿಯಿಂದ ದುರಸ್ತಿ ಮಾಡಲಾಗಿದೆ. ಕೆರೆತುಂಬ ನೀರು. ಆದರೆ ಅದರ ಪಕ್ಕದಲ್ಲಿ ಖಾಸಗಿ ಜಾಗದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಹುಡುಗರು ಮಾತ್ರ ಕೆರೆಗೆ ಆವರಣ ಗೋಡೆ ಇಲ್ಲ ಎಂದು ಆತಂಕಿತರಾಗಿದ್ದರು. 

ಒಳಚರಂಡಿ ಇಲ್ಲ
ಇಲ್ಲಿಂದು ಐವತ್ತು ಮೀಟರ್‌ ಮುಂದೆ ಹೋದರೆ ಅದನ್ನು ಪುರಸಭೆ ವ್ಯಾಪ್ತಿ ಎಂದು ಯಾರೂ ಹೇಳಲಾರರು. ಹಾಗಿದೆ ಹಸಿರು ಹಚ್ಚಡದ ವರ್ಣವೈಭವ. ಮುಖ್ಯ ರಸ್ತೆಯಿಂದ ಕೇವಲ ಇನ್ನೂರೋ ಇನ್ನೂರೈವತ್ತೋ ಮೀಟರ್‌ ಹೋದರೆ ಹಸಿರು ಗದ್ದೆಗಳು, ಅದರಲ್ಲಿ ಅಲ್ಲಲ್ಲಿ ಗದ್ದೆಗೆ ಮಣ್ಣು ತುಂಬಿ ಕಟ್ಟಿದ ಮನೆಗಳು, ಆ ಗದ್ದೆಯ ನಡುವೆ ಹಾದು ಹೋದ ಕಾಂಕ್ರಿಟ್‌ ರಸ್ತೆ…. ಹೀಗೆ ಕಣ್ಣಿಗೆ ಅಂದಕಟ್ಟುವ ದೃಶ್ಯ ಸಿಗುತ್ತದೆ. ಇಲ್ಲಿನ ಜನರಿಗೆ ಕಾಂಕ್ರಿಟ್‌ ರಸ್ತೆಯಾಗಿದೆ. ಆದರೆ ಅದರ ಆಚೆ ಈಚೆ ಬದಿಗೆ ಯಾವುದೇ ತಡೆ ಇಲ್ಲ ಎಂಬ ಬೇಸರ ಇದೆ. 

ಈ ಭಾಗಕ್ಕೆ ಇನ್ನೂ ಒಳಚರಂಡಿ ಬಂದಿಲ್ಲ ಎಂಬ ಬೇಗುದಿಯಿದೆ. ನಾಗಬನ ಸಮೀಪ ಸ್ವಲ್ಪ ರಸ್ತೆಗೆ ಕಾಂಕ್ರೀಟೂ ಇಲ್ಲ, ಡಾಮರೂ ಇಲ್ಲ. 

ಒಳಚರಂಡಿ ಗುಂಡಿಮೆಸ್ಕಾಂ ಹಿಂದೆ ಒಳಚರಂಡಿಯವರು ಒಂದು ದೊಡ್ಡ ಗುಂಡಿ ಮಾಡಲುದ್ದೇಶಿಸಿದ್ದಾರೆ. ಇದರ ಬಗ್ಗೆ ಅನೇಕ ಹೋರಾಟಗಳಾಗಿವೆ. ಈ ಹೊಂಡ ನೇರ ಕೃಷಿಭೂಮಿಗೆ ಸಂಪರ್ಕ ಹೊಂದಿದೆ. ಆದ್ದರಿಂದ  ಚರಂಡಿ ನೀರು ಸಂಗ್ರಹವಾಗುವ ತ್ಯಾಜ್ಯ ಹೊಂಡ ಇಲ್ಲಿ ಬೇಡ ಎಂದು ಜನರ ಒತ್ತಾಯವಿದೆ. ಶಾಸಕರ ಬಳಿಗೂ ದೂರು ಹೋಗಿದೆ. ಪುರಸಭೆ ಈ ಕುರಿತು ಕ್ರಮ ವಹಿಸಿಲ್ಲ ಎಂಬ ಬೇಸರವನ್ನು ಸ್ಥಳೀಯರು ಹೇಳಿಕೊಳ್ಳುತ್ತಾರೆ. 

ಅನುದಾನ ಕಡಿಮೆ
ನಾನು ಆಯ್ಕೆಯಾಗುವ ಮೊದಲು ಅತ್ಯಂತ ಕಡೆಗಣಿಸಲ್ಪಟ್ಟ ವಾರ್ಡ್‌ ಆಗಿತ್ತು. ಕಳೆದ ಬಾರಿ 1.25 ಕೋ.ರೂ. ಕಾಮಗಾರಿ ಆಗಿದೆ. ಈ ಸಲ ಅನುದಾನವೇ ಕಡಿಮೆ. ಹಾಗಿದ್ದರೂ ಭಗತ್‌ಸಿಂಗ್‌ ರಸ್ತೆ, ಶ್ರೀದೇವಿ ರಸ್ತೆ, ಬಬ್ಬರ್ಯನಕಟ್ಟೆ ರಸ್ತೆಗೆ ಕಾಂಕ್ರಿಟ್‌ ಹಾಕಲಾಗಿದೆ. ಇನ್ನು ಕೆಲವೆಡೆ ಡಾಮರು ಹಾಕಲು ಅನುದಾನ ಮೀಸಲಿಡಲಾಗಿದೆ. 
– ರಾಘವೇಂದ್ರ ದೇವಾಡಿಗ, ಸದಸ್ಯರು ಪುರಸಭೆ

ಮೆಸ್ಕಾಂ ಬಳಿ ಗುಂಡಿ ಬೇಡ
ನಮ್ಮೆಲ್ಲರ ಒತ್ತಾಯ ಒಳಚರಂಡಿಯ ಗುಂಡಿ ಮೆಸ್ಕಾಂ ಬಳಿ ಬೇಡ ಎಂದು. ಅದು ಕೃಷಿಭೂಮಿಗೂ ತೊಂದರೆಯುಂಟು ಮಾಡುತ್ತದೆ. ಪುರಸಭೆ ಈ ಬಗ್ಗೆ ಗಮನ ಕೊಡಬೇಕು.
– ರಾಜೇಶ್‌ ವಿ.,  ಸ್ಥಳೀಯರು 

ಸಮಸ್ಯೆ ಇದೆ
ಭಗತ್‌ಸಿಂಗ್‌ ರಸ್ತೆಗೆ ಕಾಂಕ್ರಿಟ್‌ ಹಾಕಿದ್ದಾರೆ. ಆದರೆ ಚರಂಡಿ ಕಾಮಗಾರಿ ಅಸಮರ್ಪಕವಾದ ಕಾರಣ ಘನವಾಹನಗಳ ಓಡಾಟ ಅಸಾಧ್ಯವಾಗಿದೆ. ಮುಖ್ಯ ರಸ್ತೆಗೆ ಬಂದ ಒಳಚರಂಡಿ ಒಳಭಾಗದ ಮನೆಗಳ ರಸ್ತೆಗೆ ಇನ್ನೂ ಬಂದಿಲ್ಲ.
– ರಾಜ ಮಠದಬೆಟ್ಟು, ಸ್ಥಳೀಯರು

ಒಳಚರಂಡಿ ಆಗಿಲ್ಲ
ಬಸ್ರೂರು ಮೂರುಕೈಯಿಂದ ಸಂಗಮ್‌ವರೆಗೆ ಒಳಚರಂಡಿ ಕಾಮಗಾರಿ ಮಾಡಬೇಕಿತ್ತು. ಇನ್ನೂ  ಅದು ಆಗಿಲ್ಲ. ನಮ್ಮ ಭಾಗದಲ್ಲಿಯೂ ಕೆಲವೆಡೆ ಆಗಿಲ್ಲ.
– ಯೋಗೀಶ್‌ ,  ಸ್ಥಳೀಯರು 

ಟಾಪ್ ನ್ಯೂಸ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.