ರಬ್ಬರ್‌ ಉತ್ಪಾದನೆ ವೆಚ್ಚ 174 ರೂ.; ಕೃಷಿಕನಿಗೆ ಕೇವಲ 125 ರೂ.


Team Udayavani, Jun 23, 2018, 6:00 AM IST

rubber.jpg

ಕಾಸರಗೋಡು: ರಬ್ಬರ್‌ ಕೃಷಿಕನಿಗೆ ರಬ್ಬರ್‌ ಉತ್ಪಾದನೆ ವೆಚ್ಚದಷ್ಟೂ ಹಣ ಲಭಿಸದಿರುವುದರಿಂದ ರಬ್ಬರ್‌ ಕೃಷಿಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಒಂದು ಕಿಲೋ ರಬ್ಬರ್‌ ಉತ್ಪಾದಿಸಲು 174 ರೂಪಾಯಿ ಬೇಕಾಗಿದ್ದರೆ, ಒಂದು ಕಿಲೋ ರಬ್ಬರ್‌ಗೆ ಕೃಷಿಕನಿಗೆ ಲಭಿಸುವುದು ಕೇವಲ 125 ರೂ. ಅಂದರೆ ಒಂದು ಕಿಲೋ ರಬ್ಬರ್‌ನಲ್ಲಿ ಕೃಷಿಕನಿಗೆ 49 ರೂ. ನಷ್ಟ ಸಂಭವಿಸುತ್ತದೆ. ಈ ಹಿನ್ನೆಯಲ್ಲಿ ಕೃಷಿಕರು ರಬ್ಬರ್‌ ಬೆಳೆಯುವುದರಿಂದ ಹಿಂದೆ ಸರಿಯುತ್ತಿದ್ದಾರೆ.

ರಬ್ಬರ್‌ ಬೋರ್ಡ್‌ ಮತ್ತು ಕೇರಳ ಸರಕಾರ ಅಂಗೀಕರಿಸಿದ ಒಂದು ಕಿಲೋ ರಬ್ಬರ್‌ ಉತ್ಪಾದಿಸಲು ತಗಲುವ ವೆಚ್ಚ 174 ರೂಪಾಯಿಯಾಗಿದೆ. ನಾಲ್ಕನೇ ಶ್ರೇಣಿಯ ರಬ್ಬರ್‌ಗೆ ಕೃಷಿಕನಿಗೆ ಲಭಿಸುವ ಮೊತ್ತ ಕೇವಲ 125 ರೂ.

ಕೇಂದ್ರ ಸರಕಾರ ರಬ್ಬರ್‌ ಕೈಗಾರಿಕಾ ಘಟಕಗಳಿಗಿರುವ ಅಸಂಸ್ಕೃತ ವಸ್ತುವಾಗಿ ಪರಿಗಣಿಸಿದೆ. ರಬ್ಬರ್‌ ಕೃಷಿ ಬೆಳೆಯಾಗಿ ಕೇರಳ ಸರಕಾರ ಅಂಗೀಕರಿಸಿದರೆ ಸ್ವಾಮಿನಾಥನ್‌ ಆಯೋಗ ಶಿಫಾರಸು ಪ್ರಕಾರ ರಬ್ಬರ್‌ ಕಿಲೋ ಒಂದಕ್ಕೆ 261 ರೂಪಾಯಿ ಲಭಿಸಬೇಕಾಗಿತ್ತು. ಬೆಲೆ ಸ್ಥಿರತೆ ನಿಧಿ ಬಳಸಿ ಕಿಲೋ ಒಂದಕ್ಕೆ 200 ರೂ. ನೀಡಬೇಕೆಂದು ಕೃಷಿಕರು ಬೇಡಿಕೆಯಿಟ್ಟಿದ್ದರೂ ಪರಿಗಣಿಸಿಲ್ಲ. 150 ರೂಪಾಯಿ ಲಭಿಸುವ ರೀತಿಯಲ್ಲಿ ಸಬ್ಸಿಡಿ ವಿತರಣೆಗೆ ಯಾವುದೇ ಸಮಯ ಮಿತಿ ಇಲ್ಲ. ಇದರಿಂದಾಗಿ ಕೃಷಿಕರು ಹೈರಾಣಾಗಿದ್ದಾರೆ.

ಮಳೆಯ ಕಾರಣದಿಂದ ಕೃಷಿಕರು ಸಂದಿಗ್ಧ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಪ್ರಸ್ತುತ ರಬ್ಬರ್‌ಗೆ ರೈನ್‌ ಗಾರ್ಡ್‌ ಹಾಕಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಟ್ಯಾಪಿಂಗ್‌ ನಡೆಸಲು ಸಾಧ್ಯವಾಗದ ಸ್ಥಿತಿಯಿದೆ. ಇದರಿಂದ ಕೃಷಿಕರಿಗೆ ಇನ್ನಷ್ಟು ನಷ್ಟ ಸಂಭವಿಸಲಿದೆ ಎಂದು ರಬ್ಬರ್‌ ಕೃಷಿಕರ ಅಂಬೋಣ.

ಕಬ್ಬು ಕೃಷಿಕರಿಗೆ ಹಲವು ಸವಲತ್ತುಗಳನ್ನು ಸರಕಾರ ಘೋಷಿಸಿದೆ. ಆದರೆ ರಬ್ಬರ್‌ ಕೃಷಿಕರಿಗೆ ಯಾವುದೇ ಸವಲತ್ತು ಘೋಷಿಸಿಲ್ಲ. ನ್ಯಾಯ ಬೆಲೆ ಲಭಿಸಿದರೆ ದೇಶದಲ್ಲಿ ರಬ್ಬರ್‌ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ. ನಾಲ್ಕು ವರ್ಷಗಳ ಹಿಂದೆ ಇದ್ದ ರಬ್ಬರ್‌ ಬೆಲೆ ಇದೀಗ ಅರ್ಧಕ್ಕಿಳಿದಿದೆ. ಆದರೆ ಇದೇ ವೇಳೆ ಟರ್‌ – ಟ್ಯೂಬ್‌ ಬೆಲೆ ಶೇ. 20 ರಷ್ಟು ಹೆಚ್ಚಳವಾಗಿದೆ.

ಲಾಭ ಟಯರ್‌ ಕಂಪೆನಿಗಳಿಗೆ  
ಒಟ್ಟು 12.56 ಲಕ್ಷ ರಬ್ಬರ್‌ ಕೃಷಿಕ ರಿದ್ದು, ಇವರಿಗೆ ನಷ್ಟ ಸಂಭವಿಸುತ್ತಿದೆ. ಇದೇ ವೇಳೆ 8 ಟಯರ್‌ ಕಂಪೆನಿಗಳಿಗೆ ಲಾಭ ತಂದು ಕೊಡುತ್ತಿದೆ. ರಬ್ಬರ್‌ ಆಮದು ಮಾಡಿಕೊಳ್ಳುವುದರಿಂದ ಈ ಕಂಪೆನಿಗಳಿಗೆ 10,800 ಕೋಟಿ ರೂಪಾಯಿ ಲಾಭವಾಗುತ್ತದೆ. ಈ ಮೂಲಕ ಸರಕಾರಕ್ಕೆ ಸುಂಕವಾಗಿ ಒಂದು ಟನ್‌ಗೆ 42,000 ರೂ. ಲಭಿಸುತ್ತದೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.