ಕಲ್ಲೋಣಿ-ದೇವರಕಾನ, ಕುಳ್ಳಂಪಾಡಿ-ಮೊಗಪ್ಪೆ ರಸ್ತೆ ಕೆಸರುಮಯ


Team Udayavani, Jun 23, 2018, 2:10 AM IST

kalloni-kesaru-22-6.jpg

ಬೆಳ್ಳಾರೆ: ಐವರ್ನಾಡು ಗ್ರಾಮದ ಕಲ್ಲೋಣಿ, ಕುಳ್ಳಂಪಾಡಿ, ಮೊಗಪ್ಪೆ ರಸ್ತೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಕೆಸರು ಮಯವಾಗಿದೆ. ಈ ಭಾಗದ ಜನರ ಗೋಳು ಕೇಳುವವರೆ ಇಲ್ಲದಂತಾಗಿದೆ. ರಸ್ತೆಗೆ ಮಣ್ಣು ಹಾಕಿ ಹೊಂಡ ಗುಂಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಈ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿ ಗದ್ದೆಯಾಗಿ ಪರಿವರ್ತನೆಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಕಷ್ಟಕರ ವಾದರೆ ವಾಹನ ಸವಾರರು ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಸರ್ಕಸ್‌ ಮಾಡಬೇಕಾಗುತ್ತದೆ.

ರಸ್ತೆಯೇ ಚರಂಡಿ
ಕಲ್ಲೋಣಿ -ದೇವರಕಾನ, ಕುಳ್ಳಂಪಾಡಿ, ಮೊಗಪ್ಪೆ ರಸ್ತೆಗೆ ಸಮರ್ಪಕವಾಗಿ ಚರಂಡಿ ಇಲ್ಲದಿರುವುದೇ ಈ ರಸ್ತೆಯನ್ನು ಈ ಪರಿಸ್ಥಿತಿಗೆ ತಂದೊಡ್ಡಿದೆ. ರಸ್ತೆಯುದ್ದಕ್ಕೂ ಎಲ್ಲಿಯೂ ಚರಂಡಿ ಕಾಣುತ್ತಿಲ್ಲ. ರಸ್ತೆಗೆ ಹಾಕಿದ ಮಣ್ಣು ಕೆಲವೆಡೆ ಚರಂಡಿ ಮುಚ್ಚಿ ನಿಂತಿದೆ. ಕಲ್ಲೋಣಿ ಸಮೀಪ ಮಣ್ಣು ಬಿಗಿದು ಮೋರಿಗಳು ಬ್ಲಾಕ್‌ ಆಗಿವೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.


ರಸ್ತೆ ಅತಿಕ್ರಮಣ

ಈ ರಸ್ತೆ ಜಿಲ್ಲಾ ಪಂಚಾಯತ್‌ ರಸ್ತೆಯಾಗಿದ್ದು, ಕಲ್ಲೋಣಿ ಸಮೀಪ ಕೆಲವರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಹೇಳುತ್ತಾರೆ. ಈ ಸಂಪರ್ಕ ರಸ್ತೆ ಪುತ್ತೂರು ತಾಲೂಕನ್ನು ಮೊಗಪ್ಪೆ ಸಮೀಪ ಸಂಪರ್ಕಿಸುತ್ತದೆ. ಇದು ಅಂತರ್‌ ತಾಲೂಕು ಸಂಪರ್ಕ ರಸ್ತೆಯಾಗಿದ್ದು, ಇದು ಬೆಳ್ಳಾರೆಯಿಂದ ಪುತ್ತೂರು ತಾಲೂಕನ್ನು ಸಂಪರ್ಕಿಸುವ ಅತೀ ಹತ್ತಿರದ ಹಾದಿಯಾಗಿದೆ. ಈ ಭಾಗದಲ್ಲಿ  ನೂರಾರು ಮನೆಗಳಿವೆ. ಕಲ್ಲೋಣಿಯಲ್ಲಿ  ತಮಿಳು ಕಾಲೋನಿ, ಕಳ್ಳಂಪಾಡಿಯಲ್ಲಿ ಎಸ್‌.ಸಿ. ಕಾಲೋನಿ ಇದೆ. ಕಲ್ಲೋಣಿ ಭಾಗ ಬೆಳ್ಳಾರೆ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿದೆ. ರಸ್ತೆ ಸಮಸ್ಯೆಯನ್ನು ಐವರ್ನಾಡು ಗ್ರಾಮ ಪಂಚಾಯತ್‌ನ ದೇವರಕಾನ ವಾರ್ಡ್‌ನ ಸದಸ್ಯ ಬಾಲಕೃಷ್ಣ ಕಿಲಾಡಿ ಶಾಸಕರ ಗಮನಕ್ಕೆ ತಂದಿದ್ದು ಜಿಲ್ಲಾಧಿಕಾರಿಗೂ ದೂರು ನೀಡಲು ನಿರ್ಧರಿಸಿದ್ದಾರೆ.


ಅನುದಾನದ ಕೊರತೆ

ಮಳೆ ಹಾನಿ ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ರಸ್ತೆ ದುರಸ್ತಿಗೊಳಿಸಲು ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುದಾನ ಬಂದ ತತ್‌ ಕ್ಷಣ ದುರಸ್ತಿ ಮಾಡಲಾಗುವುದು.
– ಎಸ್‌.ಕೆ. ಹುಕ್ಕೇರಿ, ಜೂನಿಯರ್‌ ಎಂಜಿನಿಯರ್‌, ಜಿಲ್ಲಾ ಪಂಚಾಯತ್‌ 

ಮನವಿ ಮಾಡಲಾಗಿದೆ
ಇದು ಜಿಲ್ಲಾ  ಪಂಚಾಯತ್‌ ರಸ್ತೆಯಾಗಿರುವ ಕಾರಣ ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಇಲಾಖೆಯವರಲ್ಲಿ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿಕೊಳ್ಳಲಾಗಿದೆ. ಅವರು ಸೂಕ್ತವಾಗಿ ಸ್ಪಂದಿಸುವ ಭರವಸೆ ಇದೆ.
– ರಾಜೀವಿ ಪರ್ಲಿಕಜೆ, ಅಧ್ಯಕ್ಷೆ, ಐವರ್ನಾಡು ಗ್ರಾಮ ಪಂಚಾಯತ್‌ 

ಜಿಲ್ಲಾಧಿಕಾರಿಗೆ ಪತ್ರ
ಈ ರಸ್ತೆ ತೀರಾ ಹದಗೆಟ್ಟಿದೆ. ಸಂಚರಿಸಲು ತೀರಾ ಸಂಕಷ್ಟದಿಂದ ಕೂಡಿದ ರಸ್ತೆಯಾಗಿ ಬದಲಾಗಿದೆ. ರಸ್ತೆ ತುರ್ತಾಗಿ ದುರಸ್ತಿ ಮಾಡಬೇಕಾಗಿರುವುದರಿಂದ ಶಾಸಕರ ಗಮನಕ್ಕೆ ತಂದಿದ್ದೇನೆ. ಈ ಸಂಬಂಧ ಜಿಲ್ಲಾಧಿಕಾರಿಗೂ ಬರೆಯಲಾಗುವುದು.
– ಬಾಲಕೃಷ್ಣ ಕಿಲಾಡಿ, ಸ್ಥಳೀಯ ಪಂಚಾಯತ್‌ ವಾರ್ಡ್‌ ಸದಸ್ಯ

— ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.