ಜಿಡ್ಡಿ ಖೇಡ್‌ ಕೆರೆ ದಂಡೆ ಕುಸಿತ ; ಮನೆಗಳಿಗೆ ಅಪಾಯದ ಭೀತಿ


Team Udayavani, Jun 27, 2018, 2:35 AM IST

gudda-26-6.jpg

ಕಾಪು: ಪುರಸಭಾ ವ್ಯಾಪ್ತಿಯ ಮಲ್ಲಾರು ಕೊಂಬಗುಡ್ಡೆ ವಾರ್ಡ್‌ನ ಕುಡ್ತಿಮಾರಿನಲ್ಲಿರುವ ಇತಿಹಾಸ ಪ್ರಸಿದ್ಧ ಜಿಡ್ಡಿ ಖೇಡ್‌ ಕೆರೆಯ ದಂಡೆ ಕುಸಿದು ಭಾರೀ ಅಪಾಯದ ಮುನ್ಸೂಚನೆಯನ್ನು ನೀಡಿದೆ. ಭಾರೀ ಮಳೆಯ ಕಾರಣದಿಂದಾಗಿ ಜಿಡ್ಡಿ ಖೇಡ್‌ ಕೆರೆಯ ಪೂರ್ವ ಭಾಗದ ದಂಡೆಯು ಕುಸಿದು ಬಿದ್ದಿದ್ದು, ಹದಿನೈದು ಅಡಿಯಷ್ಟು ಎತ್ತರದ ದಂಡೆಯಲ್ಲಿರುವ ಮೂರು ವಾಸದ ಮನೆಗಳು ತೀವ್ರ ಅಪಾಯದ ಸ್ಥಿತಿಗೆ ಸಿಲುಕಿವೆ. ಬಯಲು ಪ್ರದೇಶದಲ್ಲಿರುವ ಕೆರೆ ಮತ್ತು ಎತ್ತರ ಪ್ರದೇಶದಲ್ಲಿರುವ ದಂಡೆಯ ನಡುವೆ ಕನಿಷ್ಟ 15 ಅಡಿಯಷ್ಟು ಎತ್ತರದ ಅಂತರವಿದ್ದು, ಈ ಕೆರೆಯ ದಂಡೆಗೆ ತಾಗಿಕೊಂಡು ಅಬ್ದುಲ್‌ ಮಜೀದ್‌, ಅಬ್ದುಲ್‌ ರಹಿಮಾನ್‌ , ಮಹಮ್ಮದ್‌ ಯೂನುಸ್‌ ಎಂಬವರ ಮನೆಗಳಿವೆ.

ಕೆರೆಯ ದಂಡೆ ಕುಸಿತದಿಂದಾಗಿ ಮೂರು ಮನೆಗಳ ಜನರೂ ಆತಂಕಕ್ಕೊಳಗಾಗಿದ್ದು, ಒಂದಂಶ ಹೆಚ್ಚು ಕುಸಿದರೂ ಮನೆಯ ಛಾವಡಿಯವರೆಗೆ ಕುಸಿಯುವ ಭೀತಿಯಿದೆ. ಈ ಹಿಂದೆ ಮನೆಯವರೇ ಕೆರೆ ದಂಡೆಗೆ ಕಲ್ಲು ಕಟ್ಟುವ ಪ್ರಯತ್ನ ಮಾಡಿದ್ದಾರಾದರೂ ಅದು ಕೂಡಾ ಮಳೆಗಾಲಕ್ಕೆ ಮೊದಲೇ ಕೆರೆ ಪಾಲಾಗಿತ್ತು. ಮಲ್ಲಾರು – ಕುಡ್ತಿಮಾರ್‌ ಪ್ರದೇಶದ ಕೃಷಿಕರಿಗೂ ಜಿದ್ದಿ ಕೇಡ್‌ ಆಸರೆಯಾಗಿದೆ. ಆದರೆ ಕೆರೆಯು ಹದಿನೈದು ವರ್ಷದ ಹಿಂದೆ ಕುಸಿತಕ್ಕೊಳಗಾಗಿದ್ದು, ಕುಸಿತಕ್ಕೊಳಗಾಗಿರುವ ಪ್ರದೇಶದಲ್ಲಿ ಮನೆಯವರು ಟರ್ಪಾಲು ಹಾಕಿ ಗಟ್ಟಿಗೊಳಿಸಿದ್ದಾರೆ. ಮತ್ತಷ್ಟು ಜೋರು ಮಳೆ ಬಂದರೆ ಈ ಪ್ರದೇಶವೂ ಯಾವಾಗ ಬೇಕಿದ್ದರೂ ಕುಸಿಯುವ ಸಾಧ್ಯತೆಗಳಿವೆ.

ಸುಮಾರು15 ವರ್ಷದ ಹಿಂದೆ ಅಬ್ದುಲ್‌ ಮಜೀದ್‌ ಅವರ ಮನೆ ಮುಂಭಾಗದ ಪಾರ್ಶ್ವವು ಕುಸಿದಿದ್ದು, ಆಗ ಗ್ರಾಮ ಪಂಚಾಯತ್‌ಗೆ ದೂರು ನೀಡಲಾಗಿತ್ತು. ಅಂದು ಗ್ರಾ. ಪಂ. ಪ್ರತಿನಿಧಿಗಳು ಬಂದು ನೋಡಿ ಹೋಗಿದ್ದಾರೆ. ಆದರೆ ಯಾವುದೇ ರೀತಿಯ ಪರಿಹಾರ ಕಾರ್ಯಾಚರಣೆ ನಡೆಸಿಲ್ಲ. ಈಗ ಮತ್ತೆ ಇನ್ನೊಂದು ಪಾರ್ಶ್ವದ ದಂಡೆ ಕುಸಿದಿದೆ. ವಿಷಯ ತಿಳಿದ ಕೂಡಲೇ ಪುರಸಭೆ ಸದಸ್ಯ ಅರುಣ್‌ ಶೆಟ್ಟಿ, ಮುಖ್ಯಾಧಿಕಾರಿ ರಾಯಪ್ಪ ಅವರು ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ. ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಸ್ಥಳೀಯ ನಿವಾಸಿ ಇಮ್ತಿಯಾಜ್‌ ಅಹಮದ್‌ ಹೇಳಿದ್ದಾರೆ.

ಪುರಸಭೆ ವ್ಯಾಪ್ತಿಯ ಕೊಂಬಗುಡ್ಡೆ ವಾರ್ಡ್‌ನಲ್ಲಿರುವ ಜಿದ್ದಿ ಖೇಡ್‌ ಕೆರೆಯ ದಂಡೆ ಕುಸಿತಕ್ಕೊಳಗಾಗಿರುವ ವಿಚಾರ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ. ದಂಡೆಯಲ್ಲಿರುವ ಮೂರು ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು, ಪುರಸಭೆ ವತಿಯಿಂದ ಕೆರೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿದೆ. ಕೆರೆಯನ್ನು ಕ್ರಿಯಾಯೋಜನೆಯಡಿ ಸೇರಿಸಿ ಅಭಿವೃದ್ಧಿ ಮಾಡುತ್ತೇವೆ. ಮಾತ್ರವಲ್ಲದೇ ಮನೆಯವರಿಗೆ ಅಪಾಯವಾಗದ ರೀತಿಯಲ್ಲಿ ಭದ್ರವಾದ ದಂಡೆ ನಿರ್ಮಾಣಕ್ಕೂ ಯೋಜನೆ ರೂಪಿಸುವುದಾಗಿ ಪುರಸಭಾ ಸದಸ್ಯ ಅರುಣ್‌ ಶೆಟ್ಟಿ ಪಾದೂರು ಭರವಸೆ ನೀಡಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ನನ್ನ ಅಣ್ಣನ ಮಗ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿತ್ತು. ಆ ಬಳಿಕ 20 ವರ್ಷಗಳ ಹಿಂದೆ ಕೊಕ್ಕರೆ ಬೇಟೆಗೆಂದು ಬಂದಿದ್ದ ವ್ಯಕ್ತಿಯೋರ್ವ ಕೆರೆಯ ಬಗ್ಗೆ ಅರಿವಿರದೇ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ಆಗ ಅವರನ್ನು ನಾವು ರಕ್ಷಿಸಿದ್ದೆವು. ಈ ಎರಡೂ ಘಟನೆಗಳು ನಮ್ಮ ಕಣ್ಣಮುಂದೆಯೇ ಇರುವಂತೆಯೇ ಕೆರೆಯ ದಂಡೆ ಕುಸಿತಕ್ಕೊಳಗಾಗಿರುವುದು ನಮ್ಮಲ್ಲಿ ಆತಂಕ ಮೂಡಿಸಿದೆ ಎನ್ನುತ್ತಾರೆ ಅಕ್ಬರ್‌ ಅವರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.