ಅಪೂರ್ವ ಮಾತು
Team Udayavani, Jul 3, 2018, 11:15 AM IST
ರವಿಚಂದ್ರನ್ ಅವರ “ಅಪೂರ್ವ’ ಚಿತ್ರದ ಆ ಚಿತ್ರದಲ್ಲಿ ನಟಿಸಿದ್ದ ಅಪೂರ್ವ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಇನ್ನು ಆಕೆಯ ಕೆರಿಯರ್ ಮುಗಿದಂತೆಯೇ ಎಂದು ಎಲ್ಲರೂ ಭಾವಿಸುವಾಗಲೇ, ಅಪೂರ್ವ ಒಂದರಹಿಂದೊಂದು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಅಪೂರ್ವ, ರವಿಚಂದ್ರನ್ ಅವರ “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯಿತು.
ಆ ನಂತರ ಶರಣ್ ಅವರ “ವಿಕ್ಟರಿ-2′ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂತು. ಅದಾದ ಮೇಲೆ ರವಿಚಂದ್ರನ್ ಅಭಿನಯದ “ಪೀಸ್ ಪೀಸ್’ ಎಂಬ ಚಿತ್ರದಲ್ಲೂ ರವಿಚಂದ್ರನ್ ಅವರಿಗೆ ನಾಯಕಿಯಾಗಿ ಅಪೂರ್ವ ನಟಿಸುತ್ತಿದ್ದಾರೆ ಎಂದಾಯಿತು. ಈಗ ಮತ್ತೂಂದು ಸಿನಿಮಾವನ್ನು ಅಪೂರ್ವ ಒಪ್ಪಿಕೊಂಡಿದ್ದಾರೆ. ಅದು ಶಶಿಕುಮಾರ್ ಅವರ ಮಗನ ಸಿನಿಮಾ. ನಟ ಶಶಿಕುಮಾರ್ ಅವರ ಮಗ ಆದಿತ್ಯ ಶಶಿಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದು, ಆ ಚಿತ್ರದಲ್ಲಿ ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ.
ಜುಲೈ 6 ರಂದು ಚಿತ್ರದ ಫೋಟೋಶೂಟ್ ನಡೆಯಲಿದೆ. ಇದಲ್ಲದೇ ಇನ್ನೊಂದಿಷ್ಟು ಸಿನಿಮಾಗಳ ಮಾತುಕತೆ ಕೂಡಾ ನಡೆಯುತ್ತಿದೆ. ಈ ಮೂಲಕ ಅಪೂರ್ವ ಮತ್ತೆ ಬಿಝಿಯಾಗುತ್ತಿದ್ದಾರೆ. ಎಲ್ಲಾ ಓಕೆ, “ಅಪೂರ್ವ’ ಚಿತ್ರದ ನಂತರ ಯಾಕೆ ಅಷ್ಟೊಂದು ಗ್ಯಾಪ್ ಎಂದರೆ, ಎಜುಕೇಶನ್ ಎಂಬ ಪ್ರಶ್ನೆ ಬರುತ್ತದೆ. “ನಾನು ಪಿಯುಸಿನಲ್ಲಿದ್ದಾಗ ನನಗೆ “ಅಪೂರ್ವ’ ಸಿನಿಮಾದ ಆಫರ್ ಬಂತು. ಆ ಸಿನಿಮಾ ಮುಗಿದ ಬಳಿಕ ಮತ್ತೆ ನನ್ನ ಶಿಕ್ಷಣವನ್ನು ಮುಂದುವರೆಸಿದೆ.
ಈ ಗ್ಯಾಪ್ನಲ್ಲಿ ಸಾಕಷ್ಟು ಆಫರ್ಗಳು ಬಂದುವು. ತಮಿಳು, ತೆಲುಗು ಸೇರಿದಂತೆ ಪರಭಾಷೆಗಳಿಂದಲೂ ಬಂತು. ಆದರೆ ಯಾವುದನ್ನು ಒಪ್ಪಿಕೊಳ್ಳಲಿಲ್ಲ. ಈಗ ನಾನು ಬಿ.ಕಾಂ ಮುಗಿಸಿದ್ದೇನೆ. ಹಾಗಾಗಿ, ಸಿನಿಮಾ ಕಡೆ ಹೆಚ್ಚು ಗಮನಕೊಡುತ್ತಿದ್ದೇನೆ’ ಎನ್ನುವುದು ಅಪೂರ್ವ ಮಾತು. ಇನ್ನು, “ವಿಕ್ಟರಿ-2′ ಹಾಗೂ ಶಶಿಕುಮಾರ್ ಪುತ್ರನ ಸಿನಿಮಾದಲ್ಲಿನ ಪಾತ್ರಗಳು ಭಿನ್ನವಾಗಿದ್ದು, ಈ ಮೂಲಕ ಮತ್ತಷ್ಟು ಗುರುತಿಸಿಕೊಳ್ಳುವ ನಿರೀಕ್ಷೆ ಅಪೂರ್ವಗಿದೆ.
ಇನ್ನು, ನಾಯಕಿಯರ ಹೆಸರಲ್ಲಿ ಸಿನಿಮಾ ಸೆಟ್ಟೇರುವುದು ಕಡಿಮೆ. ಅದರಲ್ಲೂ ಮೊದಲ ಸಿನಿಮಾದಲ್ಲೇ ನಾಯಕಿಯ ಹೆಸರನ್ನೇ ಶೀರ್ಷಿಕೆಯನ್ನಾಗಿಟ್ಟರೆ ಆಕೆ ಅದೃಷ್ಟ ಮಾಡಿದ್ದಾಳೆಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತದೆ. ಆದರೆ, ಅಪೂರ್ವ ಅವರಿಗೆ ಆ ಅದೃಷ್ಟ ಮೊದಲ ಸಿನಿಮಾದಲ್ಲೇ ಸಿಕ್ಕಿದೆ. ಆದರೆ, ಆಗ ಟೈಟಲ್ ಮಹತ್ವ ಅಪೂರ್ವಗೆ ಗೊತ್ತಿರಲಿಲ್ಲವಂತೆ. “ಆಗ ನಾನು ಚಿಕ್ಕವಳಿದ್ದೆ. ನನಗೆ ಟೈಟಲ್ ಮಹತ್ವ ಗೊತ್ತಿರಲಿಲ್ಲ.
ಆದರೆ, ಈಗ ಗೊತ್ತಾಗುತ್ತಿದೆ. ಆ ವಿಚಾರದಲ್ಲಿ ನಾನು ಅದೃಷ್ಟವಂತೆ. ನನಗೆ ಒಳ್ಳೆಯ ಲಾಂಚ್ ಸಿಕ್ಕಿತು. ರವಿಚಂದ್ರನ್ ಅವರಂತಹ ಲೆಜೆಂಡ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಮುಂದೆ ನಾನು ಎಷ್ಟೇ ಸಿನಿಮಾದಲ್ಲಿ ನನ್ನ ಮೊದಲ ಸಿನಿಮಾ “ಅಪೂರ್ವ’ವನ್ನು ಮರೆಯುವಂತಿಲ್ಲ’ ಎನ್ನುವುದು ಅಪೂರ್ವ ಮಾತು. ಅಪೂರ್ವಗೆ ಮುಂದೆ ಚಿತ್ರರಂಗದಲ್ಲಿ ಬಿಝಿಯಾಗಿರಬೇಕು,
ಎಲ್ಲಾ ಸ್ಟಾರ್ಗಳ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ. “ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳ ಮೂಲಕ ಬಿಝಿಯಾಗಬೇಕೆಂಬ ಆಸೆ ಇದೆ. ಪುನೀತ್, ಸುದೀಪ್, ದರ್ಶನ್ ಸೇರಿದಂತೆ ಎಲ್ಲಾ ನಟರ ಚಿತ್ರಗಳಲ್ಲಿ ನಟಿಸಬೇಕೆಂಬುದು ನನ್ನ ಕನಸು’ ಎನ್ನುತ್ತಾರೆ ಅಪೂರ್ವ. ಮುಂದೆ ಸಂಪೂರ್ಣವಾಗಿ ಚಿತ್ರರಂಗದಲ್ಲೇ ತೊಡಗಿಸಿಕೊಳ್ಳುವುದರಿಂದ ಡ್ಯಾನ್ಸ್, ನಟನೆಯ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರಂತೆ ಅಪೂರ್ವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ
IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ
Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ