ನಾನು ಕನ್ನಡದ ಹುಡುಗಿ


Team Udayavani, Jul 11, 2018, 11:05 AM IST

sanam.jpg

ಅದೆಷ್ಟೋ ಮಂದಿ ಕನ್ನಡ ಹುಡುಗಿಯರು ಬೇರೆ ಭಾಷೆಗಳಲ್ಲಿ ನಾಯಕಿಯರಾಗಿದ್ದಾರೆ. ಅದಕ್ಕೆ ಕಾರಣ ಹಲವು. ಅನೇಕರು ಕನ್ನಡದಲ್ಲಿ ಪ್ರಯತ್ನಿಸಿ, ಅವಕಾಶ ಸಿಗದೇ ಪರಭಾಷೆಗೆ ಹೋಗಿರಬಹುದು. ಇನ್ನು ಕೆಲವರು ಪರಭಾಷೆಯಲ್ಲಿ ಮಿಂಚಿ ಕನ್ನಡಕ್ಕೆ ಬರಬೇಕೆಂಬ ಲೆಕ್ಕಾಚಾರ ಹಾಕಿರುತ್ತಾರೆ. ಈಗ ಕನ್ನಡದ ಹುಡುಗಿಯಾಗಿ ಪರಭಾಷೆಯಲ್ಲಿ ಕೆರಿಯರ್‌ ಆರಂಭಿಸಿದ ನಾಯಕಿಯೊಬ್ಬಳಿಗೆ ಈಗ ಕನ್ನಡದಲ್ಲಿ ಅವಕಾಶ ಸಿಕ್ಕಿದೆ.

ಈ ವಾರ ಆಕೆ ನಟಿಸಿದ ಸಿನಿಮಾ ಬಿಡುಗಡೆಯಾಗುತ್ತಿದೆ. ಅಷ್ಟಕ್ಕೂ ಯಾರು ಆ ನಾಯಕಿ ಎಂದರೆ ಸನಮ್‌ ಶೆಟ್ಟಿ ಹೆಸರು ಹೇಳಬೇಕಾಗುತ್ತದೆ. ಸನಮ್‌ ಶೆಟ್ಟಿ ನಾಯಕಿಯಾಗಿ ನಟಿಸಿರುವ ಚೊಚ್ಚಲ ಕನ್ನಡ ಚಿತ್ರ “ಅಥರ್ವ’ ಈ ವಾರ ತೆರೆಕಾಣುತ್ತಿದೆ. ಸಹಜವಾಗಿಯೇ ಸನಮ್‌ ಖುಷಿಯಾಗಿದ್ದಾರೆ. “ನಾನು ಮೂಲತಃ ಕನ್ನಡದ ಹುಡುಗಿ. ಬೆಂಗಳೂರಿನವಳು. ಆದರೆ, ಬಹಳಷ್ಟು ಮಂದಿ ನಾನು ಪರಭಾಷಾ ಹುಡುಗಿ ಎಂದು ಭಾವಿಸಿದ್ದಾರೆ.

ನಾನು ಕೆರಿಯರ್‌ ಆರಂಭಿಸಿದ್ದು ಚೆನ್ನೈನಲ್ಲಿ. ಆದರೆ, ಕನ್ನಡದ ಹುಡುಗಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ನನಗಿತ್ತು. ಆದರೆ, ಇಲ್ಲಿ ನನ್ನ ಯಾರನ್ನು ಸಂಪರ್ಕಿಸಬೇಕೆಂಬ ಬಗ್ಗೆ ಗೊತ್ತಿರಲಿಲ್ಲ. ಹೀಗಿರುವಾಗ ಸಿಕ್ಕಿದ್ದು “ಅಥರ್ವ’. ನಿರ್ದೇಶಕ ಅರುಣ್‌ ಹೇಳಿದ ಕಥೆ ಇಷ್ಟವಾಗಿ ಈ ಸಿನಿಮಾ ಒಪ್ಪಿಕೊಂಡೆ. ಅರ್ಜುನ್‌ ಸರ್ಜಾ ಅವರ ಸಂಬಂಧಿ ಲಾಂಚ್‌ ಆಗುತ್ತಿರುವ ಸಿನಿಮಾವಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಒಳ್ಳೆಯ ಸಿನಿಮಾ ಮೂಲಕ ಲಾಂಚ್‌ ಆಗುತ್ತಿರುವ ಖುಷಿ ಇದೆ’ ಎನ್ನುತ್ತಾರೆ ಸನಮ್‌. ಸನಮ್‌ “ಅಥರ್ವ’ ಒಪ್ಪಿಕೊಳ್ಳಲು ಕಾರಣ, ಕಥೆ ಹಾಗೂ ನಿರ್ದೇಶಕರು ಮೊದಲು ತೋರಿಸಿದ ಫ‌ಸ್ಟ್‌ಲುಕ್‌ ಟೀಸರ್‌ ಅಂತೆ. ಅವೆರಡರಿಂದ ಇಂಪ್ರಸ್‌ ಆಸ ಸನಮ್‌ ಖುಷಿಯಿಂದಲೇ ಸಿನಿಮಾಕ್ಕೆ ಗ್ರೀನ್‌ಸಿಗ್ನಲ್‌ ಕೊಟ್ಟರಂತೆ. “ಅಥರ್ವ’ ಚಿತ್ರವನ್ನು ಜನ ಯಾಕೆ ನೋಡಬೇಕು ಎಂಬ  ಪ್ರಶ್ನೆಗೂ ಸನಮ್‌ ಉತ್ತರಿಸುತ್ತಾರೆ.

“ಸಂಪೂರ್ಣ ಹೊಸಬರು ತುಂಬಾ ಶ್ರದ್ಧೆಯಿಂದ ಮಾಡಿರುವ ಸಿನಿಮಾವಿದು. ಯಾವುದೇ ವಿಷಯಕ್ಕೂ ರಾಜಿಯಾಗದೇ ನೀಟಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇನ್ನು, ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿದೆ. ಜೊತೆಗೆ ಚಿತ್ರದ ಹಾಡುಗಳು ಸೊಗಸಾಗಿವೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಸನಮ್‌ ಈಗಾಗಲೇ ಕನ್ನಡದಲ್ಲಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ನಾಯಕಿ ಹಾಗೂ ವಿಲನ್‌ ಮಧ್ಯೆ ನಡೆಯುವ ಕಥೆಯಂತೆ.

ಈ ಚಿತ್ರಕ್ಕೆ ಆಯ್ಕೆಯಾಗಲು ಕಾರಣ ವಿಲನ್‌ ಪಾತ್ರಧಾರಿ ಯಶವಂತ್‌ ಶೆಟ್ಟಿಯಂತೆ. “ಅಥರ್ವ’ ಚಿತ್ರದಲ್ಲಿ ಯಶವಂತ್‌ ವಿಲನ್‌ ಆಗಿ ನಟಿಸಿದ್ದು, ತಮ್ಮ ಹೊಸ ಚಿತ್ರಕ್ಕೂ ಅವರು ಸನಮ್‌ ಅವರನ್ನು ರೆಫ‌ರ್‌ ಮಾಡಿದರಂತೆ. ಇದರ ಹೊರತಾಗಿ ಸನಮ್‌ ತಮಿಳಿನಲ್ಲಿ “ಮ್ಯಾಗಿ’ ಎಂಬ ನಾಯಕಿ ಪ್ರಧಾನ ಚಿತ್ರ ಮಾಡುತ್ತಿದ್ದಾರೆ. 

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.